ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಅತೀ ಯಶಸ್ವಿ ತಂಡವಾಗಿ ಗುರುತಿಸಿಕೊಂಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿ ವೈಫಲ್ಯದ ಮೇಲೆ ವೈಫಲ್ಯ ಅನುಭವಿಸುತ್ತಿದೆ. ತಂಡದ ಪ್ರಮುಖ ಆಟಗಾರರಾದ ಸುರೇಶ್ ರೈನಾ, ಹರ್ಭಜನ್ ಸಿಂಗ್ ಈ ಬಾರಿ ಆಡುತ್ತಿಲ್ಲ. ಅದರ ಜೊತೆಗೆ ಆಲ್ ರೌಂಡರ್ ಡ್ವೇನ್ ಬ್ರಾವೋ ಕೂಡ ಗಾಯಗೊಂಡು ತಂಡದಿಂದ ಹೊರಗುಳಿದಿದ್ದಾರೆ.
ಮ್ಯಾಕ್ಸ್ವೆಲ್ ಬೆಂಬಲಿಸುತ್ತಿರುವುದಕ್ಕೆ ಕಾರಣ ಬಾಯ್ಬಿಟ್ಟ ಕೆಎಲ್ ರಾಹುಲ್
ಈ ಐಪಿಎಲ್ ಸೀಸನ್ನಲ್ಲಿ ಬೆರಳೆಣಿಕೆಯ ಪಂದ್ಯಗಳನ್ನಾಡಿದ್ದ ಬ್ರಾವೋ ಅಂಥ ಪ್ರದರ್ಶನ ನೀಡಿರಲಿಲ್ಲ. ಗಾಯಕ್ಕೀಡಾಗಿದ್ದ ಬ್ರಾವೋ ಹಿಂದಿನ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಆಡಿರಲಿಲ್ಲ. ಆ ಪಂದ್ಯದಲ್ಲಿ ರಾಜಸ್ಥಾನ್ 7 ವಿಕೆಟ್ಗಳಿಂದ ಗೆದ್ದಿತ್ತು. ಬ್ರಾವೋ ಆಡಿದ ಕಡೇ ಪಂದ್ಯವೆಂದರೆ ಡೆಲ್ಲಿ ವಿರುದ್ಧ. ಈ ಪಂದ್ಯದಲ್ಲೂ ಚೆನ್ನೈ ಸೋತಿತ್ತು.
ಸ್ನಾಯು ಸೆಳೆತಕ್ಕೀಡಾಗಿರುವ ಬ್ರಾವೋ ಈ ಟೂರ್ನಿಯಿಂದಲೇ ಹೊರ ಬಿದ್ದಿದ್ದಾರೆ. ಟೂರ್ನಿಯಿಂದ ಹೊರ ಹೋಗುವ ಮುನ್ನ ಬ್ರಾವೋ ಟ್ವೀಟ್ನಲ್ಲಿ ಭಾವನಾತ್ಮಕ ಸಂದೇಶ ನೀಡಿದ್ದಾರೆ. 'ತಂಡ ತೊರೆಯಲು ಬೇಸರವಾಗುತ್ತಿದೆ' ಎಂದು ಬ್ರಾವೋ ಹೇಳಿಕೊಂಡಿದ್ದಾರೆ.
Champion's message to the Super Fans as he bids adieu. Take care DJ! @DJBravo47 #Yellove 🦁💛 pic.twitter.com/pHFnkHLQzq
— Chennai Super Kings (@ChennaiIPL) October 21, 2020
'ಸಿಎಸ್ಕೆ ಅಭಿಮಾನಿಗಳೇ ನೀವು ತಂಡವನ್ನು ಬೆಂಬಲಿಸುವುದನ್ನು ಬಯಸುತ್ತೇನೆ. ಈ ಸೀಸನ್ನಲ್ಲಿ ಉತ್ತಮ ಪ್ರದರ್ಶನ ನೀಡಲು ಬಯಸಿದ್ದೆವು. ನಮ್ಮ ಸಂಪೂರ್ಣ ಪ್ರಯತ್ನ ಹಾಕಿದ್ದೆವು. ಕೆಲವೊಮ್ಮೆ ನಮ್ಮ ಶೋ ಉತ್ತಮ ಪ್ರದರ್ಶನ ನೀಡದಿರಬಹುದು. ಆದರೆ ತಂಡವನ್ನು ಹೀಗೇ ಬೆಂಬಲಿಸಿ. ಮತ್ತೆ ಸಿಎಸ್ಕೆ ಬಲಿಷ್ಠ ತಂಡವಾಗಿ ಬರಲಿದೆ,' ಎಂದು ಬ್ರಾವೋ ಹೇಳಿದ್ದಾರೆ.