ನೋವಿನಲ್ಲಿದ್ದ ಭಾರತ ಆಟಗಾರರು
ವಿಶ್ವಕಪ್ 15ನೇ ಪಂದ್ಯದಲ್ಲಿ ಭಾರತ-ಕೀನ್ಯಾ ತಂಡಗಳು ಮುಖಾಮುಖಿಯಾಗಿದ್ದವು. ಬ್ರಿಸ್ಟಾಲ್ನ ಕೌಂಟಿ ಮೈದಾನದಲ್ಲಿ ಈ ಪಂದ್ಯ ನಡೆದಿತ್ತು. ಈ ಪಂದ್ಯಕ್ಕೂ ಮುನ್ನ ಅಂದರೆ ಮೇ 19ರಂದು ಸಚಿನ್ ಅವರ ತಂದೆ ರಮೇಶ್ ತೆಂಡೂಲ್ಕರ್ ನಿಧನಾರಾಗಿದ್ದರು. ಅಲ್ಲದೆ ಟೀಮ್ ಇಂಡಿಯಾ ಆರಂಭಿಕ ಎರಡೂ ಪಂದ್ಯಗಳನ್ನು (ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ವಿರುದ್ಧ) ಸೋತಿದ್ದರಿಂದ ಆ ನೋವು ಭಾರತದ ಆಟಗಾರರನ್ನಾವರಿಸಿತ್ತು.
ಸಚಿನ್-ದ್ರಾವಿಡ್ ಶತಕದಾಟ
ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಭಾರತ, ಸಡಗೋಪ್ಪನ್ ರಮೇಶ್ 44, ಸೌರವ್ ಗಂಗೂಲಿ 13, ರಾಹುಲ್ ದ್ರಾವಿಡ್ ಅಜೇಯ 104 (109 ಎಸೆತ), ಸಚಿನ್ ತೆಂಡೂಲ್ಕರ್ 140 (101 ಎಸತ) ರನ್ ಕೊಡುಗೆಯೊಂದಿಗೆ 50 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 329 ರನ್ ಕಲೆ ಹಾಕಿತ್ತು. ಆವತ್ತು ಭಾವುಕರಾಗಿದ್ದ ಸಚಿನ್, ಶತಕ ಪೂರೈಸುತ್ತಲೇ ಆಕಾಶ ದಿಟ್ಟಿಸಿ ಶತಕವನ್ನು ತಂದೆಗರ್ಪಿಸಿದ್ದರು.
ಭಾರತಕ್ಕೆ ಭರ್ಜರಿ ಜಯ
ಗುರಿ ಬೆನ್ನಟ್ಟಿದ ಕೀನ್ಯಾ, ಆರಂಭಿಕ ಬ್ಯಾಟ್ಸ್ಮನ್ ಕೆನಡಿ ಒಟಿಯೆನೊ 56, ಸ್ಟೀವ್ ಟಿಕೊಲೊ 58, ಮಾರಿಸ್ ಒಡುಂಬೆ 14, ಥಾಮಸ್ ಒಡೊಯೊ 39 ರನ್ ಸೇರಿಸಿದ್ದರಿಂದ 50 ಓವರ್ಗೆ 7 ವಿಕೆಟ್ನಷ್ಟದಲ್ಲಿ 235 ರನ್ ಬಾರಿಸಿ 94 ರನ್ನಿಂದ ಭಾರತಕ್ಕೆ ಶರಣಾಗಿತ್ತು.
ಮೊಹಂತಿ ಅದ್ಭುತ ಬೌಲಿಂಗ್
ಆ ವಿಶ್ವಕಪ್ ಪಂದ್ಯದಲ್ಲಿ ಭಾರತ ಗೆದ್ದಿದ್ದರ ಕ್ರೆಡಿಟ್ ಬೌಲರ್ ದೆಬಾಸಿಸ್ ಮೊಹಾಂತಿಗೂ ಸಲ್ಲಬೇಕು. 10 ಓವರ್ ಎಸೆದಿದ್ದ ಮೊಹಾಂತಿ, 56 ರನ್ ನೀಡಿ ಕೀನ್ಯಾದ 4 ವಿಕೆಟ್ಗಳನ್ನು ಉರುಳಿಸಿದ್ದರು. ಇನ್ನು ಜಾವಗಲ್ ಶ್ರೀನಾಥ್, ಅಜಿತ್ ಅಗರ್ಕಾರ್, ನಿಖಿಲ್ ಚೋಪ್ರಾ ತಲಾ 1 ವಿಕೆಟ್ ಪಡೆದಿದ್ದರು. ಸಚಿನ್ ತೆಂಡೂಲ್ಕರ್ ಪಂದ್ಯಶ್ರೇಷ್ಠರೆನಿಸಿದ್ದರು.