ವರುಣ್ ಚಕ್ರವರ್ತಿಗೆ ಎರಡನೇ ಅವಕಾಶ
ಕಳೆದ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನವನ್ನು ನೀಡುವ ಮೂಲಕ ಆಯ್ಕೆಗಾರರ ಗಮನ ಸೆಳೆದು ಬಳಿಕ ಆಸ್ಟ್ರೇಲಿಯಾ ಪ್ರವಾಸಕ್ಕೆ ವರುಣ್ ಚಕ್ರವರ್ತಿ ಆಯ್ಕೆಯಾಗಿದ್ದರು. ಆದರೆ ಪ್ರವಾಸಕ್ಕೂ ಮುನ್ನವೇ ವರುಣ್ ಚಕ್ರವರ್ತಿ ಗಾಯಗೊಂಡು ಪ್ರವಾಸದಿಂದ ಹೊರಬಿದ್ದಿದ್ದರು. ಇದೀಗ ಎರಡನೇ ಅವಕಾಶ ವರುಣ್ ಚಕ್ರವರ್ತಿಗೆ ದೊರಕಿದ್ದರೂ ಈಗ ಆ ಅವಕಾಶವೂ ಕಳೆದುಕೊಳ್ಳುವ ಭೀತಿಯನ್ನು ವರುಣ್ ಚಕ್ರವರ್ತಿ ಎದುರಿಸುತ್ತಿದ್ದಾರೆ.
ವರುಣ್ ಚಕ್ರವರ್ತಿ ಪ್ರತಿಕ್ರಿಯೆ
ಇನ್ನು ಈ ಬಗ್ಗೆ ವರುಣ್ ಚಕ್ರವರ್ತಿ ಬಳಿ ಪ್ರತಿಕ್ರಿಯೆಯನ್ನು ಕ್ರಿಕ್ ಬಝ್ ಪಡೆದುಕೊಂಡಿದೆ. ಇದರಲ್ಲಿ ವರುಣ್ ಚಕ್ರವರ್ತಿ "ನನಗೆ ಈ ಬಗ್ಗೆ ಈವರೆಗೆ ಯಾವುದೇ ಮಾಹಿತಿಯನ್ನೂ ನೀಡಿಲ್ಲ" ಎಂದು ಪ್ರತಿಕ್ರಿಯಿಸಿದ್ದಾರೆ. ವರುಣ್ ಚಕ್ರವರ್ತಿ ಸದ್ಯ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಜೊತೆಗೆ ಮುಂಬೈನಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ.
ಮಾರ್ಚ್ 12ರಿಂದ ಸರಣಿ ಆರಂಭ
ಇಂಗ್ಲೆಂಡ್ ತಂಡದ ವಿರುದ್ಧ ಐದು ಪಂದ್ಯಗಳ ಟಿ20 ಸರಣಿ ಮಾರ್ಚ್ 12ರಿಂದ ಆರಂಭವಾಗಲಿದೆ. ಎಲ್ಲಾ ಪಂದ್ಯಗಳು ಕೂಡ ಹೈದರಾಬಾದ್ನಲ್ಲಿ ನೂತನವಾಗಿ ನಿರ್ಮಾಣವಾಗಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.