ರಾಹುಲ್ ಎದುರು ಎಡವಿದ ಕೊಹ್ಲಿ
ಕಿಂಗ್ಸ್ ಇಲೆವೆನ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ಒಂದಿಷ್ಟು ತಪ್ಪುಗಳನ್ನು ಮಾಡಿದ್ದರು. ಮುಖ್ಯವಾಗಿ ಪಂಜಾಬ್ ಅಪಾಯಕಾರಿ ಆಟಗಾರ, ನಾಯಕ ಕೆಎಲ್ ರಾಹುಲ್ ಅವರ ಕ್ಯಾಚನ್ನು ಎರಡೆರಡು ಬಾರಿ ಕೈಚೆಲ್ಲಿದ್ದರು. ಇದೇ ಬೆಂಗಳೂರಿ ಗೆಲುವಿಗೆ ಮುಳುವಾಯಿತು.
ಕನ್ನಡಿಗನ ಸ್ಫೋಟಕ ಬ್ಯಾಟಿಂಗ್
ಕೊಹ್ಲಿಯಿಂದ ಎರಡೆರಡು ಬಾರಿ ಜೀವದಾನ ಪಡೆದ ಕನ್ನಡಿಗ, ಮೂಲತಃ ಮಂಗಳೂರಿನವರಾದ ರಾಹುಲ್ ಸ್ಫೋಟಕ ಬ್ಯಾಟಿಂಗ್ ಮುಂದುವರೆಸಿದರು. 69 ಎಸೆತಗಳಲ್ಲಿ 14 ಫೋರ್ಸ್, 7 ಸಿಕ್ಸರ್ ಸೇರಿ 132 ರನ್ ಕೊಡುಗೆಯಿತ್ತರು. ಹೀಗಾಗಿ ಕೆXIಪಿ 206 ರನ್ ಕಲೆ ಹಾಕಿತ್ತು. ಗುರಿ ಬೆನ್ನಟ್ಟಿದ ಆರ್ಸಿಬಿ ನೀರಸ ಬ್ಯಾಟಿಂಗ್ನೊಂದಿಗೆ 109 ರನ್ ಸೇರಿಸಿ 97 ರನ್ನಿಂದ ಸೋತಿತು.
ಕಾಮೆಂಟರಿ ವಿವಾದ
ಆರ್ಸಿಬಿ ಇನ್ನಿಂಗ್ಸ್ನಲ್ಲಿ ವಿರಾಟ್ ಕೊಹ್ಲಿ ಕೇವಲ 1 ರನ್ಗೆ ವಿಕೆಟ್ ಒಪ್ಪಿಸಿದರು. ಆಗ ಕಾಮೆಂಟರಿ ನೀಡುತ್ತಿದ್ದ ಸುನಿಲ್ ಗವಾಸ್ಕರ್ ಕೊಹ್ಲೀನ ಟೀಕಿಸುವ ಭರದಲ್ಲಿ ಅನುಷ್ಕಾಳನ್ನು ಉಲ್ಲೇಖಿಸಿದ್ದರು. 'Inhone lockdown me to bas Anushka ki gendon ki practice ki hai' (ಲಾಕ್ಡೌನ್ ಸಮಯದಲ್ಲಿ ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾ ಚೆಂಡುಗಳ ವಿರುದ್ಧ ಮಾತ್ರ ಅಭ್ಯಾಸ ಮಾಡಿದ್ದಾರೆ) ಎಂದಿದ್ದರು. ಇದು ವಿವಾದಕ್ಕೆ ಕಾರಣವಾಗಿದೆ.
ಅಭಿಮಾನಿಗಳು ಕಿಡಿ
ಗವಾಸ್ಕರ್ ಉದ್ದೇಶಪೂರ್ವಕವಾಗಿ ಈ ಹೇಳಿಕೆ ನೀಡಿದರೋ ಗೊತ್ತಿಲ್ಲ. ಆದರೆ ಗವಾಸ್ಕರ್ ಹೇಳಿಕೆಗಂತೂ ಅಭಿಮಾನಿಗಳು ಕಿಡಿ ಕಾರಿದ್ದಾರೆ. ಈ ಹೇಳಿಕೆ ಅಪಾರ್ಥ ರೀತಿಯಲ್ಲಿದೆ, ಡಬಲ್ ಮೀನಿಂಗ್ ರೀತಿಯಲ್ಲಿದೆ. ಸುನಿಲ್ ಗವಾಸ್ಕರ್ ಅವರನ್ನು ಕಾಮೆಂಟರಿ ಪ್ಯಾನೆಲ್ನಿಂದಲೇ ಕಿತ್ತು ಹಾಕಬೇಕೆಂದು ಅನೇಕರು ಟ್ವಿಟರ್ ಮೂಲಕ ಒತ್ತಾಯಿಸಿದ್ದಾರೆ.