ಹರ್ಭಜನ್ ವಿಷಾದಕ್ಕೆ ಕಾರಣ
ಈ ಸಂಗತಿ ಹರ್ಭಜನ್ ಸಿಂಗ್ ಬೇಸರಕ್ಕೆ ಕಾರಣವಾಗಿದೆ. ಕೆಕೆಆರ್ ತಂಡದ ಪರವಾಗಿ ಆಡುತ್ತಿದ್ದರೂ ತನ್ನ ಫೇವರೀಟ್ ಕ್ರೀಡಾಂಗಣವಾದ ಈಡನ್ ಗಾರ್ಡನ್ನಲ್ಲಿ ಆಡುವ ಅವಕಾಶ ಇಲ್ಲದಿರುವ ಬೇಸರವನ್ನು ಹರ್ಭಜನ್ ಸಿಂಗ್ ವ್ಯಕ್ತಪಡಿಸಿದ್ದಾರೆ. ಈಡನ್ ಗಾರ್ಡನ್ನಲ್ಲಿ ಆಡುವ ಅವಕಾಶವಿದ್ದರೆ ನಾನು ಮತ್ತಷ್ಟು ಸಂತಸಗೊಂಡಿರುತ್ತಿದ್ದೆ ಎಂದಿದ್ದಾರೆ ಹರ್ಭಜನ್ ಸಿಂಗ್
ಸ್ಮರಣೀಯ ನೆನಪುಗಳಿವೆ
"ನಾನು ಈಡನ್ ಗಾರ್ಡನ್ ಅಂಗಳದಲ್ಲಿ ಸಾಕಷ್ಟು ಅತ್ಯುತ್ತಮ ನೆನಪುಗಳನ್ನು ಹೊಂದಿದ್ದೇನೆ. ಟೆಸ್ಟ್ ಕ್ರಿಕೆಟ್, ಏಕದಿನ ಕ್ರಿಕೆಟ್ ಸಹಿತ ಈಡನ್ ಗಾರ್ಡನ್ ಅಂಗಳದಲ್ಲಿ ಆಡಿರುವ ಎಲ್ಲಾ ಮಾದರಿಯ ಕ್ರಿಕೆಟ್ನಲ್ಲೂ ಸ್ಮರಣೀಯ ಕ್ಷಣಗಳಿವೆ. ಐಪಿಎಲ್ನಲ್ಲಿಯೂ ಮುಂಬೈ ಇಂಡಿಯನ್ಸ್ ಪರವಾಗಿ ಎರಡು ಟ್ರೋಫಿಗಳನ್ನು ಅಲ್ಲಿಯೇ ಗೆದ್ದಿದ್ದೇವೆ. ನನಗೆ ಅದು ವಿಶೇಷವಾದ ಅಂಗಳ. ಅಲ್ಲಿ ಈ ಬಾರಿ ನನಗೆ ಪಂದ್ಯಗಳು ಇಲ್ಲ ಎಂಬ ಸಣ್ಣ ವಿಷಾದ ನನ್ನನ್ನು ಕಾಡುತ್ತಿದೆ" ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.
ಭಾರತದಲ್ಲಿ ನಡೆಯುವ ಸಂಭ್ರಮ
"ಈ ಬಾರಿಯ ಪಂದ್ಯಗಳು ಅಹ್ಮದಾಬಾದ್ ಆಗಿರಲಿ, ಬೆಂಗಳೂರು, ಚೆನ್ನೈ, ಅಥವಾ ಮುಂಬೈ ಎಲ್ಲೇ ಆಗಿರಲಿ, ಭಾರತದಲ್ಲಿಯೇ ನಡೆಯುತ್ತಿದೆ ಎಂಬ ಸಂತಸ ನನ್ನಲ್ಲಿದೆ. ಈ ಬಾರಿ ನಾವು ದುಬೈ ಅಥವಾ ಬೇರೆ ಯಾವುದೇ ಸ್ಥಳಕ್ಕೆ ತೆರಳಬೇಕಿಲ್ಲ. ಅದಕ್ಕಾಗಿ ನಾನು ಕಾಯುತ್ತಿದ್ದೇನೆ. ನೀವೋರ್ವ ಪ್ರೇಕ್ಷಕನಾಗಿರಿ ಅಥವಾ ಆಟಗಾರನಾಗಿರಿ ಎಲ್ಲರೂ ಕಾಯುವಂತಾ ಟೂರ್ನಿ ಐಪಿಎಲ್. ಕೇವಲ ಐಪಿಎಲ್ನಲ್ಲಿ ಮಾತ್ರವೇ ಆಡುತ್ತಿರುವ ನನ್ನಂತಾ ಆಟಗಾರನಿಗೆ ಈ ಮೂಲಕ ಆಡುವ ಬಯಕೆ ಈಡೇರಲಿದೆ" ಎಂದು ಹರ್ಭಜನ್ ಸಿಂಗ್ ಸ್ಟಾರ್ಸ್ಪೋರ್ಟ್ಸ್ ಜೊತೆಗೆ ಮಾತನಾಡುತ್ತಾ ಹೇಳಿದ್ದಾರೆ.