ಮುಂಬೈ ಮತ್ತು ಚೆನ್ನೈ ಪಂದ್ಯ ಅಂದ್ರೆ ಇಂಡೋ- ಪಾಕ್ ಮ್ಯಾಚ್ ಇದ್ದಂತೆ
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಲೈವ್ ಸಂವಾದದಲ್ಲಿ ಹರ್ಭಜನ್ ಸಿಂಗ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ಮಧ್ಯೆ ಸಾಕಷ್ಟು ಪೈಪೋಟಿ ಇತ್ತು. ಚೆನ್ನೈ ಮುಂಬೈ ಪಂದ್ಯವೆಂದರೆ ಇಂಡೋ-ಪಾಕ್ ಪಂದ್ಯದಂತಿತ್ತು ಎಂದು ಹರ್ಭಜನ್ ಸಿಂಗ್ ಹೇಳಿಕೊಂಡಿದ್ದಾರೆ.
ವಿಪರ್ಯಾಸ ಅನ್ನಿಸಿಬಿಟ್ಟಿತ್ತು
"ನಾನು ಮುಂಬೈ ಬಿಟ್ಟು ಚೆನ್ನೈ ತಂಡದ ಪಾಲಾಗಿದ್ದೆ. ಮೊದಲ ಸಲ ಎಂತಾ ವಿಪರ್ಯಾಸವಿದು ಎನಿಸಿಬಿಟ್ಟಿತ್ತು. ನನಗೆ ಆಗ ಎನಿದೆಲ್ಲಾ? ಇದೇನು ಕನಸಾ? ಪ್ರತೀ ಬಾರಿ ಸಿಎಸ್ಕೆ ವಿರುದ್ಧ ಆಡುವಾಗ ಭಾರತ ಪಾಕಿಸ್ತಾನದ ಪಂದ್ಯದಂತೆ ಭಾಸವಾಗುತ್ತಿತ್ತು. ಒಮ್ಮಿಂದೊಮ್ಮೆಲೆ ನೀಲಿ ಜರ್ಸಿ ಬಿಟ್ಟು ಹಳದಿ ಜರ್ಸಿ ತೊಡಲು ನನಗೆ ತುಂಬಾ ಕಠಿಣವಾಗಿತ್ತು" ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.
ಮೊದಲ ಪಂದ್ಯದಲ್ಲಲೇ ಮುಂಬೈ ಎದುರಾಳಿ
ಅದೃಷ್ಠವಶಾತ್ ಆ ಆವೃತ್ತಿಯ ಮೊದಲ ಪಂದ್ಯವನ್ನು ನಾವು ಮುಂಬೈ ವಿರುದ್ಧವೇ ಆಡಿದ್ದೆವು. ಬೇಗೇ ಮುಂಬೈ ತಂಡವನ್ನು ಎದುರಿಸಿದ್ದು ನನಗೆ ಸಹಕಾರಿಯಾಗಿತ್ತು. ಮೊದಲ ಸೀಸನ್ ಸ್ವಲ್ಪ ಕಠಿಣವಾಗಿತ್ತು ಆದರೆ ಬಳಿಕ ನಾವು ಆ ಟೂರ್ನಿಯನ್ನು ಗೆದ್ದುಕೊಂಡೆವು ಎಂದು 2018ರ ಸಂದರ್ಭವನ್ನು ನೆನಪಿಸಿಕೊಂಡಿದ್ದಾರೆ ಹರ್ಭಜನ್ ಸಿಂಗ್.
ಮತ್ತೆ ಧೋನಿ ನಾಯಕತ್ವದಲ್ಲಿ ಆಡಿದ ಭಜ್ಜಿ
ಹರ್ಭಜನ್ ಸಿಂಗ್ ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಗೆದ್ದ ಎರಡು ಮಹತ್ವದ ಐಸಿಸಿ ಟೂರ್ನಿಯ ಭಾಗವಾಗಿದ್ದರು. 2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ಗೆದ್ದ ತಂಡದಲ್ಲಿ ಹರ್ಭಜನ್ ಮತ್ತು ಧೋನಿ ಜೊತೆಯಾಗಿದ್ದರು. ಈಗ ಸಿಎಸ್ಕೆ ತಂಡದಲ್ಲಿ ಜೊತೆಯಾಗಿ ಕಾಣಿಸಿಕೊಂಡರು.
ಧೋನಿ ನಾಚಿಕೆ ಸ್ವಾಭಾವದವನೆಂದ ಭಜ್ಜಿ
ಈ ಸಂದರ್ಭದಲ್ಲಿ ಧೋನಿ ಬಗ್ಗೆಯೂ ಹರ್ಭಜನ್ ಸಿಂಗ್ ಮಾತನಾಡಿದ್ದಾರೆ. ಧೋನಿ ಮೊದಲಿನಿಂದಲೂ ನಾಚಿಕೆ ಸ್ವಭಾವ ಮತ್ತು ಕಡಿಮೆ ಮಾತನಾಡುವ ವ್ಯಕ್ತಿಯಾಗಿದ್ದರು. ಆರಂಭದ ದಿನಗಳಲ್ಲಿ ನಾವೆಲ್ಲಾ ಒಂದೇ ರೂಮಿನಲ್ಲಿ ಕುಳಿತು ಹರಟುತ್ತಿದ್ದರೆ ಧೋನಿ ಅವರ ರೂಮ್ ಬಿಟ್ಟು ಆಚೆ ಬರುತ್ತಿರಲಿಲ್ಲ ಎಂದು ಹರ್ಭಜನ್ ಹೇಳಿಕೊಂಡಿದ್ದಾರೆ.
2008ರ ಆಸಿಸ್ ಸರಣಿ ಬಳಿಕ ಬದಲಾದ ಧೋನಿ
ಆಸ್ಟ್ರೇಲಿಯಾ ವಿರುದ್ಧ 2008ರಲ್ಲಿ ಸರಣಿ ನಡೆದಿತ್ತು. ಸಿಡ್ನಿಯಲ್ಲಿ ನಡೆದ ಟೆಸ್ಟ್ ಪಂದ್ಯ ಎಲ್ಲರನ್ನೂ ಒಂದಾಗಿಸಿತ್ತು. ಆ ಕ್ಷಣಗಳು ತಂಡದಲ್ಲಿ ನಾವೆಲ್ಲಾ ಒಂದೇ ಎಂಬಂತೆ ಮಾಡಿತ್ತು. ಅದಾದ ಬಳಿಕ ಧೋನಿ ಸ್ವಲ್ಪ ಬೆರೆಯಲು ಆರಂಭಿಸಿದರು. ನಮ್ಮೆಲ್ಲರ ಜೊತೆ ಕುಳಿತು ಮಾತನಾಡಲು ಆರಂಭಿಸಿದರು. ಖಂಡಿತಾ ವಾಗಿಯೂ ಆಗ ಅವರ ಕಿರಿಯ ಆಟಗಾರನಾಗಿದ್ದರು ಎಂದು ನೆನಪಿಸಿಕೊಂಡಿದ್ದಾರೆ. ಸಿಡ್ನಿ ಟೆಸ್ಟ್ನಲ್ಲಿನ ಮಂಕಿ ಗೇಟ್ ಪ್ರಕರಣದ ಸಂದರ್ಭವನ್ನು ಪ್ರಸ್ತಾಪಿಸದೆಯೇ ಹೇಳಿದ್ದರು.