ಮೈಸೂರು, ಜುಲೈ 19 : ಗ್ರಾಮೀಣ ಭಾಗಗಳಲ್ಲಿರುವ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸಲು ಕೆಪಿಎಲ್ ತಂಡ 'ಮೈಸೂರು ವಾರಿಯರ್ಸ್' ವತಿಯಿಂದ ಆಯೋಜಿಸಿದ್ದ ಪ್ರತಿಭಾನ್ವೇಷಣೆ (ಟ್ಯಾಲೆಂಟ್ ಹಂಟ್) ಶಿಬಿರದಲ್ಲಿ 240 ಯುವ ಆಟಗಾರರು ಪಾಲ್ಗೊಂಡಿದ್ದರು.
ಗಂಗೋತ್ರಿ ಗ್ಲೇಡ್ಸ್ ಕ್ರೀಡಾಂಗಣದಲ್ಲಿ ನಡೆದ ಆಯ್ಕೆ ಟ್ರಯಲ್ಸ್ನಲ್ಲಿ 70 ಬ್ಯಾಟ್ಸ್ಮನ್ಗಳು, 82 ಆಲ್ರೌಂಡರ್ಗಳು, 68 ಸ್ಪಿನ್ನರ್ಗಳು ಮತ್ತು 15 ವಿಕೆಟ್ ಕೀಪರ್ಗಳು ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು.
ಅಂಪೈರ್ನಿಂದ ಚೆಂಡು ಪಡೆದು ನಿವೃತ್ತಿಯ ಸುಳಿವು ಕೊಟ್ಟರೇ ಧೋನಿ?
ಬೆಂಗಳೂರಿನಲ್ಲಿ ಇದೇ 15 ರಂದು ನಡೆದಿದ್ದ ಪ್ರತಿಭಾನ್ವೇಷಣೆಯಲ್ಲಿ 250 ಆಟಗಾರರು ಪಾಲ್ಗೊಂಡಿದ್ದರು. ಯಲಹಂಕದ ಜಸ್ಟ್ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ನಡೆದ ಟ್ರಯಲ್ಸ್ನಲ್ಲಿ 60 ಬ್ಯಾಟ್ಸ್ಮನ್ಗಳು, 75 ಮಧ್ಯಮ ವೇಗದ ಬೌಲರ್ಗಳು, 50 ಸ್ಪಿನ್ನರ್ಗಳು, 55 ಆಲ್ರೌಂಡರ್ಗಳು ಮತ್ತು 10 ವಿಕೆಟ್ ಕೀಪರ್ಗಳು ಭಾಗವಹಿಸಿದ್ದರು.
Over 200 registerations at #Mysruru #TalentHunt. We are thrilled to find what Mysuru has in store for us. #GoWarriors #KPL2018 pic.twitter.com/gdwo8Onzo7
— Mysuru Warriors (@MysuruWarriors) July 18, 2018
ಎರಡೂ ನಗರಗಳಲ್ಲಿ ನಡೆದ ಟ್ರಯಲ್ಸ್ನಲ್ಲಿ ಪಾಲ್ಗೊಂಡ ಕೆಲವು ಆಟಗಾರರನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗುತ್ತದೆ. ಅಂತಿಮವಾಗಿ ಇಬ್ಬರಿಗೆ ಈ ಬಾರಿಯ ಕೆಪಿಎಲ್ನಲ್ಲಿ ವಾರಿಯರ್ಸ್ ತಂಡದಲ್ಲಿ ಸ್ಥಾನ ಲಭಿಸಲಿದೆ.
2017 ರಲ್ಲಿ ನಡೆಸಿದ್ದ ನಾಲ್ಕನೇ ಅವೃತ್ತಿಯ ಪ್ರತಿಭಾನ್ವೇಷಣೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ 205 ಆಟಗಾರರು ಪಾಲ್ಗೊಂಡಿದ್ದರು. ಇದರಲ್ಲಿ 43 ಮಂದಿ ಆಂತಿಮ ಸುತ್ತಿಗೆ ಆಯ್ಕೆಯಾಗಿದ್ದರು.
'ಮೈಸೂರು ವಾರಿಯರ್ಸ್ ವತಿಯಿಂದ ನಡೆಸುವ ಪ್ರತಿಭಾನ್ವೇಷಣೆಗೆ ಪ್ರತಿವರ್ಷದಂತೆ ಈ ವರ್ಷವೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರು ಮತ್ತು ಮೈಸೂರಿನಲ್ಲಿ ನಡೆದ ಪ್ರತಿಭಾನ್ವೇಷಣೆಯಲ್ಲಿ ಸುಮಾರು 500 ಯುವ ಆಟಗಾರರು ಪಾಲ್ಗೊಂಡಿದ್ದಾರೆ' ಎಂದು ತಂಡದ ಮಾಲೀಕ ಅರ್ಜುನ್ ರಂಗ ತಿಳಿಸಿದ್ದಾರೆ.
We saw a number of talented cricketers during the #TalentHunt in Bengaluru on 15th July. We hope to see many of them in the upcoming season of the Karnataka Premier League.
— Mysuru Warriors (@MysuruWarriors) July 17, 2018
As we get ready for the #Mysuru talent hunt tomorrow, here are some images of the event: pic.twitter.com/TjUtmOThwU
ವಾರಿಯರ್ಸ್ ತಂಡದ ಮ್ಯಾನೇಜರ್ ಎಂ.ಆರ್.ಸುರೇಶ್ ಮತ್ತು ಕೋಚ್ ಆರ್.ಎಕ್ಸ್.ಮುರಳಿ ಅವರು ಆಯ್ಕೆ ಟ್ರಯಲ್ಸ್ ನಡೆಸಿಕೊಟ್ಟರು.