ಪ್ರಸ್ತುತ ಫಾರ್ಮ್ನಲ್ಲಿರುವ ಸ್ಪಿನ್ನರ್ ಯುಜ್ವೇಂದ್ರ ಚಾಹಲ್
ಹಿಂದೂಸ್ತಾನ್ ಟೈಮ್ಸ್ ಉಲ್ಲೇಖಿಸಿದಂತೆ ಸ್ಪೋರ್ಟ್ಸ್ 18ರ ಶೋ ‘ಸ್ಪೋರ್ಟ್ಸ್ ಓವರ್ ದಿ ಟಾಪ್'ನಲ್ಲಿ ಮಾತನಾಡಿದ ಸಂಜಯ್ ಮಂಜ್ರೇಕರ್, ರವಿಚಂದ್ರನ್ ಅಶ್ವಿನ್ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯಲು ಅಕ್ಷರ್ ಪಟೇಲ್ ಮತ್ತು ಕುಲದೀಪ್ ಯಾದವ್ ಪ್ರಮುಖ ಪ್ರತಿಸ್ಪರ್ಧಿಯಾಗಿರುತ್ತಾರೆ ಎಂದೂ ತಿಳಿಸಿದ್ದಾರೆ.
"ಈಗ ಅವನ ಪ್ರತಿಸ್ಪರ್ಧಿಗಳು ಯಾರು? ಯುಜ್ವೇಂದ್ರ ಚಾಹಲ್ ಅವರು ಪ್ರಸ್ತುತ ಫಾರ್ಮ್ನಲ್ಲಿರುವ ಸ್ಪಿನ್ನರ್ ಆಗಿ ದೃಢಪಟ್ಟಿದ್ದಾರೆ. ಆಗ ನಿಮಗೆ ಅಕ್ಷರ್ ಪಟೇಲ್ ಸಿಕ್ಕಿದ್ದಾರೆ, ಸ್ವಲ್ಪ ಬೌಲಿಂಗ್ ಮಾಡಬಲ್ಲ ರವೀಂದ್ರ ಜಡೇಜಾ ಸಿಕ್ಕಿದ್ದಾರೆ. ಕೊನೆಯ ಪಂದ್ಯದಲ್ಲಿ ದೀಪಕ್ ಹೂಡಾ ಒಂದು ಓವರ್ ಬೌಲ್ ಮಾಡಿದರು, ನಂತರ ನಿಮಗೆ ಕುಲದೀಪ್ ಯಾದವ್ ಸಿಕ್ಕಿದ್ದಾರೆ, ನಿಮಗೆ ರವಿಚಂದ್ರನ್ ಅಶ್ವಿನ್ ಸಿಕ್ಕಿದ್ದಾರೆ," ಎಂದು ಟಿ20 ವಿಶ್ವಕಪ್ಗೆ ಸ್ಪರ್ಧೆಯಲ್ಲಿರುವ ಸ್ಪಿನ್ನರ್ಗಳ ಪಟ್ಟಿಯನ್ನೇ ಸಂಜಯ್ ಮಂಜ್ರೇಕರ್ ಮುಂದಿಟ್ಟಿದ್ದಾರೆ.
ಆರ್. ಅಶ್ವಿನ್ ಆಯ್ಕೆ ಅತ್ಯುತ್ತಮ ನಿರ್ಧಾರ
ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಆರ್. ಅಶ್ವಿನ್ ಆಯ್ಕೆ ಅತ್ಯುತ್ತಮ ನಿರ್ಧಾರ ಎಂದು ಮಂಜ್ರೇಕರ್ ಹೇಳಿದ್ದು, 35 ವರ್ಷ ವಯಸ್ಸಿನವರು ಪ್ರಭಾವ ಬೀರಲು ಪ್ರಾರಂಭಿಸಿದ್ದಾರೆ ಎಂದು ಅವರು ಹೇಳಿದರು.
"ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ರವಿಚಂದ್ರನ್ ಅಶ್ವಿನ್ ಅವರ ಆಯ್ಕೆಯು ಅತ್ಯುತ್ತಮವಾದದ್ದು ಎಂದು ನಾನು ಭಾವಿಸುತ್ತೇನೆ. ಕಳೆದೆರಡು ವರ್ಷಗಳಲ್ಲಿ ಭಾರತೀಯ ಟಿ20 ಲೀಗ್ನಲ್ಲಿ ಆರ್. ಅಶ್ವಿನ್ ಪ್ರಭಾವ ಬೀರಲು ಪ್ರಾರಂಭಿಸಿದ್ದಾರೆ," ಎಂದು ಮಾಜಿ ಭಾರತದ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಅಭಿಪ್ರಾಯಪಟ್ಟರು.
ರವಿಚಂದ್ರನ್ ಅಶ್ವಿನ್ ಮತ್ತು ಯುಜ್ವೇಂದ್ರ ಚಾಹಲ್ ಅವರ ಸಂಯೋಜನೆಯು ಈ ಸಮಯದಲ್ಲಿ ಭಾರತಕ್ಕೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮಾಜಿ ಭಾರತ ಬ್ಯಾಟರ್ ಮಂಜ್ರೇಕರ್ ಹೇಳಿದ್ದಾರೆ.
ರವಿಚಂದ್ರನ್ ಅಶ್ವಿನ್, ಯಜ್ವೇಂದ್ರ ಚಾಹಲ್ ಜೋಡಿ ಮೋಡಿ
"ರವಿಚಂದ್ರನ್ ಅಶ್ವಿನ್ ಅವರು ಯಜ್ವೇಂದ್ರ ಚಾಹಲ್ ಅವರಂತಹ ಬೌಲರ್ಗಳೊಂದಿಗೆ ಇದ್ದಾಗ ನಾನು ಇಷ್ಟಪಡುತ್ತೇನೆ. ಹಾಗಾಗಿ ಫಲಿತಾಂಶವನ್ನು ಬದಲಾಯಿಸುವ ಜವಾಬ್ದಾರಿ ಅಶ್ವಿನ್ ಮೇಲಿಲ್ಲ. ನಿಮಗೆ ಗೊತ್ತಾ, ಟಿ20 ಕ್ರಿಕೆಟ್ನಲ್ಲಿ ಸ್ಪಿನ್ನರ್ನ ಕೆಲಸ, ಮಧ್ಯಮ ಹಂತದಲ್ಲಿ ದಕ್ಷಿಣ ಆಫ್ರಿಕಾದ ಶಮ್ಸಿ ಮತ್ತು ಕೇಶವ್ ಮಹಾರಾಜ್ ಅವರಂತೆ ವಿಕೆಟ್ ಪಡೆಯುವುದು. ಭಾರತಕ್ಕೆ ಆರ್. ಅಶ್ವಿನ್ನಂತಹ ಟಿ20 ಸ್ಪಿನ್ನರ್ನ ಕೊರತೆ ಇತ್ತು. ಈಗ ಅದು ನಿವಾರಣೆಯಾಗಿದೆ," ಎಂದರು.
"ಅಶ್ವಿನ್ ಎಕಾನಮಿಯ ಮೇಲೆ ಹೆಚ್ಚು ಗಮನಹರಿಸಿದರು, ಆದರೆ ನೀವು ಚಾಹಲ್ನಂತಹ ವ್ಯಕ್ತಿಯನ್ನು ಹೊಂದಿರುವಾಗ ಅಥವಾ ಇನ್ನೊಬ್ಬ ವಿಕೆಟ್ ತೆಗೆದುಕೊಳ್ಳುವ ಮಣಿಕಟ್ಟಿನ ಸ್ಪಿನ್ನರ್ ಇದ್ದರೆ, ಆರ್. ಅಶ್ವಿನ್ ಉತ್ತಮವಾಗಿ ಬೌಲ್ ಮಾಡುತ್ತಾರೆ. ಏಕೆಂದರೆ ರವಿಚಂದ್ರನ್ ಅಶ್ವಿನ್ ಟಿ20 ಕ್ರಿಕೆಟ್ನಲ್ಲಿ ಕಡಿಮೆ ಎಕಾನಮಿ ರನ್ರೇಟ್ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಮೊದಲ ಟಿ20ಯಲ್ಲಿ ಒಂದೆರಡು ವಿಕೆಟ್ಗಳು ಉತ್ತಮ ಸಂಕೇತವಾಗಿದೆ," ಎಂದು ಭಾರತ ಮಾಜಿ ಬ್ಯಾಟ್ಸ್ಮನ್ ಸಂಜಯ್ ಮಂಜ್ರೇಕರ್ ತಿಳಿಸಿದರು.
ಟಿ20 ವಿಶ್ವಕಪ್ ಸಂಭಾವ್ಯ ತಂಡ
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಹಾಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ದೀಪಕ್ ಚಾಹರ್.
ಬ್ಯಾಕ್ ಅಪ್ ಬ್ಯಾಟರ್ಸ್: ಇಶಾನ್ ಕಿಶನ್/ಸಂಜು ಸ್ಯಾಮ್ಸನ್
ಬ್ಯಾಕ್-ಅಪ್ ವೇಗಿಗಳು: ಅರ್ಷದೀಪ್ ಸಿಂಗ್/ಅವೇಶ್ ಖಾನ್/ಉಮ್ರಾನ್ ಮಲಿಕ್
ಬ್ಯಾಕ್-ಅಪ್ ಸ್ಪಿನ್ನರ್ಗಳು: ಅಕ್ಷರ್ ಪಟೇಲ್/ಕುಲದೀಪ್ ಯಾದವ್/ರವಿಚಂದ್ರನ್ ಅಶ್ವಿನ್