ಐಪಿಎಲ್ನಲ್ಲಿ ನಾಯಕನಾಗಿ ಮಿಂಚಿದ ಹಾರ್ದಿಕ್
ಈ ಬಾರಿಯ ಐಪಿಎಲ್ನಲ್ಲಿ ಹಾರ್ದಿಕ್ ಪಾಂಡ್ಯ ನಾಯಕನಾಗ್ಇ ತಮ್ಮ ಸಾಮರ್ಥ್ಯವನ್ನು ಅದ್ಭುತವಾಗಿ ಪ್ರದರ್ಶಿಸಿದ್ದಾರೆ. ಇದೇ ಮೊದಲ ಬಾರಿಗೆ ಐಪಿಎಲ್ನಂತಾ ಪ್ರಮುಖ ವೇದಿಕೆಯಲ್ಲಿ ತಂಡವನ್ನು ಮುನ್ನಡೆಸುವ ಜವಾಬ್ಧಾರಿ ಹಾರ್ದಿಕ್ ಪಾಂಡ್ಯ ಹೆಗಲಿಗೇರಿತ್ತು. ಈ ಸವಾಲನ್ನು ಯಾರೂ ನಿರೀಕ್ಷಿಸಿರದ ರೀತಿಯಲ್ಲಿ ನಿಭಾಯಿಸಿದ ಹಾರ್ದಿಕ್ ಪಾಂಡ್ಯ ಚೊಚ್ಚಲ ಪ್ರಯತ್ನದಲ್ಲಿಯೇ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಯಶಸ್ವಿಯಾಗಿದ್ದರು. ಗುಜರಾತ್ ಟೈಟನ್ಸ್ ತಂಡದ ನಾಯಕನಾಗಿ ಮಾತ್ರವಲ್ಲದೆ ಆಟಗಾರನಾಗಿಯೂ ಅದ್ಭುತ ಯಶಸ್ಸು ಸಾಧಿಸುವ ಮೂಲಕ ಹಾರ್ದಿಕ್ ಪಾಂಡ್ಯ ಭಾರತ ತಂಡದ ನಾಯಕತ್ವದ ಸ್ಪರ್ಧೆಯಲ್ಲಿ ಕಾಣಿಸಿಕೊಂಡರು.
ಹಾರ್ದಿಕ್ ಪಾಂಡ್ಯ ಬಗ್ಗೆ ಸ್ಟೈರಿಸ್ ಮಾತು
"ಈ ಬಾರಿ ಅಲ್ಲದಿದ್ದರೂ ಭವಿಷ್ಯದಲ್ಲಿ ಹಾರ್ದಿಕ್ ಪಾಂಡ್ಯ ಟಿ20 ಮಾದರಿಯಲ್ಲಿ ಭಾರತವನ್ನು ಮುನ್ನಡೆಸಿದರೆ ನನಗೆ ಅಚ್ಚರಿಯಾಗಲಾರದು. ಇದು ಈಗ ಕುತೂಹಲಕಾರಿಯಾದ ಚರ್ಚೆಯಾಗಿದೆ. ಯಾಕೆಂದರೆ ಆರು ತಿಂಗಳ ಹಿಂದೆ ನಾವ್ಯಾರು ಕೂಡ ಹಾರ್ದಿಕ್ ಪಾಂಡ್ಯ ಬಗ್ಗೆ ಚರ್ಚೆ ನಡೆಸಿರಲಿಲ್ಲ. ಆದರೆ ಹಾರ್ದಿಕ್ ಪಾಂಡ್ಯ ಆ ಸಾಧನೆ ಮಾಡಿದ್ದಾರೆ. ಫುಟ್ಬಾಲ್ನಲ್ಲಿ ನಾಯಕನಾಗಿ ಒಮ್ಮೆ ಜವಾಬ್ಧಾರಿ ನೀಡಿದರೆ ಬಳಿಕ ಆತನಲ್ಲಿ ಆ ಜವಾಬ್ಧಾರಿ ಇದ್ದೇ ಇರುತ್ತದೆ. ಇಲ್ಲಿ ಕೂಡ ಆತನಿಗೆ ಜವಾಬ್ಧಾರಿ ತೆಗೆದುಕೊಳ್ಳಲು ಅವಕಾಶ ನೀಡಬೇಕು" ಎಂದಿದ್ದಾರೆ ಸ್ಕಾಟ್ ಸ್ಟೈರಿಸ್.
Asia Cup 2022: ಭಾರತದಿಂದ ಮೊಹಮ್ಮದ್ ಶಮಿ ಕೈಬಿಟ್ಟಿದ್ದನ್ನು ಬೆಂಬಲಿಸಿ ಕಾರಣ ಕೊಟ್ಟ ಪಾಕ್ ಕ್ರಿಕೆಟಿಗ
ನಾಯಕತ್ವದ ಬಗ್ಗೆ ಒಲವು ವ್ಯಕ್ತಪಡಿಸಿದ್ದ ಹಾರ್ದಿಕ್
ಇನ್ನು ಭಾರತ ತಂಡದ ನಾಯಕತ್ವವನ್ನು ವಹಿಸಿಕೊಳ್ಳುವ ಬಗ್ಗೆ ಹಾರ್ದಿಕ್ ಪಾಂಡ್ಯ ಬಳಿ ಪ್ರಶ್ನಿಸಿದಾಗ ನಾಯಕತ್ವವನ್ನು ವಹಿಸಿಕೊಳ್ಳುವ ಬಗ್ಗೆ ಉತ್ಸುಕತೆಯನ್ನು ವ್ಯಕ್ತಪಡಿಸಿದ್ದಾರೆ. ಇತ್ತೀಚೆಗಷ್ಟೇ ವೆಸ್ಟ್ ಇಂಡೀಸ್ ವಿರುದ್ಧದ ಐದನೇ ಟಿ20 ಪಂದ್ಯದಲ್ಲಿ ನಾಯಕತ್ವವನ್ನು ವಹಿಸಿಕೊಂಡ ಬಳಿಕ ಮಾತನಾಡಿದ ಹಾರ್ದಿಕ್ ಪಾಂಡ್ಯ ಬಳಿಕ ಈ ಪ್ರಶ್ನೆ ಕೇಳಲಾಯಿತು. ಅದಕ್ಕೆ ಉತ್ತರಿಸಿದ ಹಾರ್ದಿಕ್, "ಖಂಡಿತಾ, ಯಾಕಿಲ್ಲ. ನನಗೆ ಆ ಅವಕಾಶ ದೊರೆತರೆ ಅತ್ಯಂತ ಖುಷಿಯಿಂದ ನಿರ್ವಹಿಸುತ್ತೇನೆ" ಎಂದಿದ್ದರು ಹಾರ್ದಿಕ್ ಪಾಂಡ್ಯ.
ಕಳೆದ ಬಾರಿ ಏಷ್ಯಾಕಪ್ ಆಡಿದ್ದ ಭಾರತ ಆಟಗಾರರ ಪೈಕಿ 9 ಆಟಗಾರರು ಈ ಬಾರಿ ತಂಡದಲ್ಲಿಲ್ಲ!
ಏಷ್ಯಾ ಕಪ್ಗೆ ರಾಹುಲ್ ಉಪನಾಯಕ
ಇನ್ನು ಮುಂಬರುವ ಏಷ್ಯಾಕಪ್ನಲ್ಲಿ ಹಾರ್ದಿಕ್ ಪಾಂಡ್ಯಾಗೆ ಉಪನಾಯಕನ ಜವಾಬ್ಧಾರಿ ದೊರೆಯುವ ಸಾಧ್ಯತೆಯಿದೆ ಎಂಬ ವರದಿಗಳು ಬಂದಿತ್ತು. ಆದರೆ ಅಂತಿಮವಾಗಿ ಬಿಸಿಸಿಐ ಕೆಎಲ್ ರಾಹುಲ್ ಅವರನ್ನೇ ಉಪ ನಾಯಕನನ್ನಾಗಿ ಮುಂದುವರಿಸಿದೆ. ಗಾಯದಿಮದಾಗಿ ಕೆಎಲ್ ರಾಹುಲ್ ಸುದೀರ್ಘ ಕಾಲದಿಂದ ಭಾರತ ತಂಡದಿಂದ ಹೊರಗುಳಿದಿದ್ದರು. ಇದೀಗ ಏಷ್ಯಾಕಪ್ ಮೂಲಕ ಅವರು ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದಾರೆ.