ಬೆಂಗಳೂರು, ಮೇ 10: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ಕನ್ನಡಿಗ ವೆಂಕಟೇಶ್ ಪ್ರಸಾದ್ ಐಪಿಎಲ್ ಕಾಮೆಂಟರಿ ಮಧ್ಯೆ ನಟ ಸಾರ್ವಭೌಮ ಡಾ. ರಾಜ್ಕುಮಾರ್ ಹಾಡಿರುವ ಹಾಡು ಹಾಡಿ ಕನ್ನಡಿಗರ ಮನ ಗೆದ್ದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ತಂಡಕ್ಕೆ ಮರಳಿದ ಸ್ಟೀವನ್ ಸ್ಮಿತ್ ಬಗ್ಗೆ ಕೋಚ್ ಲ್ಯಾಂಗರ್ ಹೇಳಿದ್ದೇನು?
ರೆಬಲ್ ಸ್ಟಾರ್ ಅಂಬರೀಶ್-ಮಾಲಾಶ್ರಿ ಅಭಿನಯದ 'ಹೃದಯ ಹಾಡಿತು' ಕನ್ನಡ ಸಿನಿಮಾದಲ್ಲಿ, ಗಾನ ಗಂಧರ್ವ ರಾಜ್ಕುಮಾರ್ ಕಂಠದಲ್ಲಿರುವ 'ನಲಿಯುತಾ.. ಹೃದಯ ಹಾಡನು ಹಾಡಿದೆ..' ಹಾಡನ್ನು ಪ್ರಸಾದ್ ಕಾಮೆಂಟರಿ ಮಧ್ಯೆ ಹಾಡಿದ್ದರು. ಈ ವಿಡಿಯೋವನ್ನು ಕರ್ನಾಟಕದ ಇನ್ನೊಬ್ಬ ಕ್ರಿಕೆಟಿಗ ವಿಜಯ್ ಭಾರಧ್ವಾಜ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿದ್ದಾರೆ.
if you hadn't heard Venkatesh Prasad sing.. https://t.co/09C4Ooqtyd
— Karthik Shashidhar (@karthiks) May 8, 2019
ಈ ವಿಡಿಯೋವನ್ನು ಮೇ 8ರಂದು ಟ್ವಿಟರ್ನಲ್ಲಿ ಹಾಕಿಕೊಳ್ಳಲಾಗಿದೆ. ಅಂದರೆ ಆ ದಿನ ವಿಶಾಖಪಟ್ಟಣದ ಡಾ. ವೈಎಸ್ ರಾಜಶೇಖರ್ ರೆಡ್ಡಿ ಎಸಿಎ-ವಿಡಿಸಿಎ ಸ್ಟೇಡಿಯಂನಲ್ಲಿ ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್ ರೈಸರ್ಸ್ ತಂಡಗಳು ಕಾದಾಡಿದ್ದವು. ಇದರಲ್ಲಿ ಡೆಲ್ಲಿ 2 ವಿಕೆಟ್ಗಳಿಂದ ಗೆದ್ದಿತ್ತು.