ರಹಾನೆ ನಾಯಕತ್ವ ಚುರುಕಾಗಿತ್ತು
ಮೆಲ್ಬರ್ನ್ನಲ್ಲಿ ಭಾರತದ ಪ್ರದರ್ಶನದ ಬಗ್ಗೆ 'ಸ್ಪೋರ್ಟ್ಸ್ ತಕ್' ಜೊತೆ ಮಾತನಾಡಿದ ಶೋಯೆಬ್ ಅಖ್ತರ್, 'ತನ್ನ ಬ್ಯಾಟಿಂಗ್ ಮತ್ತು ಪ್ರದರ್ಶನದ ಮೂಲಕ ಅಜಿಂಕ್ಯ ರಹಾನೆ ತಾನೊಂದು ಭಾರತವೆಂಬ ಬ್ರ್ಯಾಂಡ್ನಿಂದ ಬಂದಿರುವುದಾಗಿ ಖಚಿತಪಡಿಸಿದರು. ಅವರ ನಾಯಕತ್ವ ಕೂಡ ಚುರುಕಾಗಿತ್ತು. ಬೌಲಿಂಗ್ನಲ್ಲಿ ಅವರು ಮಾಡುತ್ತಿದ್ದ ಬದಲಾವಣೆ, ಜಸ್ಪ್ರೀತ್ ಬೂಮ್ರಾ ಅವರನ್ನು ಅವರು ಬಳಸಿಕೊಂಡ ಬಗೆ, ಮೊಹಮ್ಮದ್ ಸಿರಾಜ್ ಅವರನ್ನು ಆಡಿಸಿದ ರೀತಿ ಎಲ್ಲಾ ಚೆನ್ನಾಗಿತ್ತು,' ಎಂದಿದ್ದಾರೆ.
ಚೀಲದಲ್ಲಿ ಮುಚ್ಚಿ ಹೊಡೆಯುವಂತೆ ಸೋಲಿಸಿದೆ
ತನ್ನ ಯೂ ಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ ಅಖ್ತರ್, 'ಒಬ್ಬ ವ್ಯಕ್ತಿಯನ್ನು ಚೀಲದಲ್ಲಿ ಮುಚ್ಚಿ ಹೊಡೆಯುವಂತೆ ಭಾರತ ತಂಡ ಆಸ್ಟ್ರೇಲಿಯಾವನ್ನು ಸೋಲಿಸಿದೆ. ತಮ್ಮ ಪಾತ್ರಗಳನ್ನು ಭಾರತ ಅವಿತಿಟ್ಟಿಲ್ಲ, ಬದಲಿಗೆ ಬೇಕಾದಲ್ಲಿ ಸರಿಯಾಗಿ ಬಳಸಿಕೊಂಡಿದೆ. ಆಳವಾದ ಬಿಕ್ಕಟ್ಟಿನಲ್ಲಿದ್ದಾಗ ಟೀಮ್ ಇಂಡಿಯಾ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದೆ. ಇದು ಟೀಮ್ ಇಂಡಿಯಾದ ನಿಜವಾದ ವರ್ತನೆ,' ಎಂದು ಖುಷಿ ವ್ಯಕ್ತಪಡಿಸಿದ್ದಾರೆ.
ಭಾರತ ಜಾತಿ, ಮತ ಮೀರಿ ನಡೆದುಕೊಳ್ಳುತ್ತೆ
'ಮೊಹಮ್ಮದ್ ಸಿರಾಜ್ ತನ್ನ ತಂದೆಯನ್ನು ಕಳೆದುಕೊಂಡ ದುಃಖದಲ್ಲಿದ್ದರು. ಆದರೆ ಆತನಿಗೆ ಆತನ ತಂಡದ ಬೆಂಬಲ ದೊರೆಯಿತು. ಭಾರತ ತಂಡದ ಡ್ರೆಸ್ಸಿಂಗ್ ರೂಮ್ನಲ್ಲಿ ಆಟಗಾರರ ಮಧ್ಯೆ ಜಾತಿ, ಮತ, ಜನಾಂಗಕ್ಕೆ ಮೀರಿದ ನಂಬಿಕೆಯಿದೆ ಅನ್ನೋದನ್ನು ಇದು ತೋರಿಸುತ್ತದೆ. ಬಹುಶಃ ಸಿರಾಜ್ ಅಪ್ಪನ ಪಾಲಿಗೆ ಇಂಥದ್ದೊಂದು ಕ್ಷಣ ಅತೀ ವಿಶೇಷ ಅನ್ನಿಸುತ್ತಿತ್ತು. ಆದರೆ ದುರದೃಷ್ಟವಶಾತ್ ಈ ಬಂಗಾರದ ಕ್ಷಣವನ್ನು ಸಿರಾಜ್ ಅಪ್ಪನಿಗೆ ನೋಡಲಾಗಲಿಲ್ಲ,' ಎಂದು ಅಖ್ತರ್ ಭಾರತ ಕ್ರಿಕೆಟ್ ತಂಡವನ್ನು ಶ್ಲಾಘಿಸಿದ್ದಾರೆ.