ಚಾಂಪಿಯನ್ಸ್ ಟ್ರೋಫಿ ಸ್ಮರಿಸಿದ ಅಹ್ಮದ್
ಭಾರತ-ಪಾಕ್ ತಂಡಗಳ ನಡುವೆ ವೈಮನಸ್ಸು ಇರಲಿಲ್ಲ ಎಂಬ ವಿಚಾರವನ್ನು ಸರ್ಫರಾಜ್ ಹೇಳಿದ್ದಾರೆ. 2017ರ ಚಾಂಪಿಯನ್ಸ್ ಟ್ರೋಫಿ ಪಂದ್ಯದ ಕ್ಷಣ ಸ್ಮರಿಸಿರುವ ಅಹ್ಮದ್, ಆವತ್ತು ಪಾಕ್ ತಂಡ ಭಾರತವನ್ನು ಸೋಲಿಸಿದ ಬಳಿಕ ಕೂಡ ಎರಡೂ ತಂಡಗಳ ಆಟಗಾರರು ಆನಂದಿಸುತ್ತಿದ್ದರು. ಪರಸ್ಪರ ಜೋಕ್ ಶೇರ್ ಮಾಡುತ್ತ ನಕ್ಕಿದ್ದರು ಎಂದಿದ್ದಾರೆ.
ಎರಡೂ ದೇಶಗಳ ಆಟಗಾರರಲ್ಲಿ ಗೆಳೆತನವಿದೆ
'ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳ ಜನರಲ್ಲಿ ಕ್ರಿಕೆಟ್ ಬಗ್ಗೆ ಅಪಾರ ಪ್ರೀತಿದೆ, ಉತ್ಸಾಹವಿದೆ. ಪಾಕಿಸ್ತಾನ ಮತ್ತು ಭಾರತದ ಆಟಗಾರರ ಮಧ್ಯೆ ಒಳ್ಳೆಯ ಗೆಳೆತನ ಇದ್ದಿದ್ದನ್ನು ನಾನು ಕಣ್ಣಾರೆ ನೋಡಿದ್ದೇನೆ,' ಎಂದು ಕ್ರಿಕ್ ಟ್ರ್ಯಾಕರ್ ಜೊತೆ ಮಾತನಾಡಿದ ಸರ್ಫರಾಜ್ ಹೇಳಿದ್ದಾರೆ.
ಜೊತೆಯಲ್ಲಿ ಊಟ ಮಾಡಿದ್ದನ್ನು ನೋಡಿದ್ದೇನೆ
'ನಾನು 2007ರಲ್ಲಿ ಭಾರತಕ್ಕೆ ಹೋಗಿದ್ದಾಗ, 2008ರಲ್ಲಿ ಭಾರತ ತಂಡ ಪಾಕಿಸ್ತಾನಕ್ಕೆ ಬಂದಿದ್ದಾಗ ಎರಡೂ ದೇಶಗಳ ಆಟಗಾರರು ಜೊತೆಯಾಗಿ ಕೂತು ಊಟ ಮಾಡಿದ್ದನ್ನು ನೋಡಿದ್ದೇನೆ. ಆದರೆ ಈಗ ದುರದೃಷ್ಟಕರವಾಗಿ ಎರಡೂ ದೇಶಗಳು ಪಂದ್ಯ ಆಡದ ಸನ್ನಿವೇಶ ಸೃಷ್ಟಿಯಾಗಿದೆ. ಆದರೆ ನಾಳೆ ಸಂದರ್ಭ ಸುಧಾರಿಸುತ್ತದೆ. ಭಾರತ-ಪಾಕಿಸ್ತಾನ ಪಂದ್ಯವಾಡಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ,' ಎಂದು ಅಹ್ಮದ್ ಅಭಿಪ್ರಾಯಿಸಿದ್ದಾರೆ.
ಇತ್ತೀಚೆಗೆ ಮುನಿಸು ಕೊಂಚ ಜೋರು
ಅಸಲಿಗೆ ಬಹಳ ಹಿಂದಿನಿಂದಲೂ ಭಾರತ ಮತ್ತು ಪಾಕಿಸ್ತಾನ ಆಟಗಾರರು ಕ್ರಿಕೆಟ್ ಮೈದಾನದಲ್ಲಿ ಪಾತ್ರ ಬದ್ಧ ಎದುರಾಳಿಯಾಗಿ ಕಾದಾಡುತ್ತಿದ್ದರೇ ಹೊರತು, ವೈಯಕ್ತಿಕವಾಗಿ ಎರಡೂ ತಂಡಗಳ ಆಟಗಾರರ ಮಧ್ಯೆಯೂ ಒಳ್ಳೆಯ ಗೆಳೆತನವಿತ್ತು. ಆದರೆ ತೀರಾ ಇತ್ತೀಚೆಗೆ ಪಾಕ್ ಆಲ್ ರೌಂಡರ್ ಶಾಹಿದ್ ಅಫ್ರಿದಿ ಭಾರತದ ಪ್ರಧಾನ ನರೇಂದ್ರ ಮೋದಿ ಕುರಿತಾಗಿ ಕೊಟ್ಟಿದ್ದ ವಿವಾದಾತ್ಮಕ ಹೇಳಿಕೆಯಿಂದಾಗಿ ಭಾರತದ ಆಟಗಾರರಾದ ಹರ್ಭಜನ್ ಸಿಂಗ್, ಯುವರಾಜ್ ಸಿಂಗ್ ಮತ್ತು ಸುರೇಶ್ ರೈನಾ ತಮ್ಮ ಗೆಳೆತನ್ನು ಕಡಿತಗೊಳಿಸಿಕೊಂಡಿರುವುದಾಗಿ ಹೇಳಿದ್ದರು.