|
ಏನಿದೆ ಗಿಬ್ಸ್ ಟ್ವೀಟ್ನಲ್ಲಿ?
'ಅನಗತ್ಯವಾಗಿ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಇಲ್ಲೂ ಪಾಕಿಸ್ತಾನದ ಬಗೆಗಿನ ತನ್ನ ರಾಜಕೀಯ ಅಜೆಂಡಾವನ್ನು ಕಾಶ್ಮೀರ್ ಪ್ರೀಮಿಯರ್ ಲೀಗ್ನಲ್ಲಿ ತರುತ್ತಿದೆ. ಕೆಪಿಎಲ್ನಲ್ಲಿ ನಾನು ಪಾಲ್ಗೊಳ್ಳದಂತೆ ತಡೆಯುತ್ತಿದೆ. ಅಷ್ಟೇ ಅಲ್ಲ, ಕ್ರಿಕೆಟ್ಗೆ ಸಂಬಂಧಿಸಿದ ಯಾವುದೇ ವಿಚಾರಕ್ಕೂ ನಾನು ಭಾರತಕ್ಕೆ ಪ್ರವೇಶಿಸದಂತೆ ನಿರ್ಬಂಧಿಸುವುದಾಗಿ ಬಿಸಿಸಿಐ ತನಗೆ ಬೆದರಿಕೆ ಕೂಡ ಒಡ್ಡುತ್ತಿದೆ' ಎಂದು ಗಿಬ್ಸ್ ಮಾಡಿರುವ ಟ್ವೀಟ್ನಲ್ಲಿ ಬರೆದುಕೊಳ್ಳಲಾಗಿದೆ. ಜುಲೈ 31ರಂದು ಗಿಬ್ಸ್ ಈ ಟ್ವೀಟ್ ಮಾಡಿದ್ದಾರೆ.
ರಶೀದ್ ಲತೀಫ್ ಕೂಡ ದೂರು
ಇದಕ್ಕೂ ಮುನ್ನ ಪಾಕಿಸ್ತಾನ ಮಾಜಿ ಕ್ರಿಕೆಟರ್ ರಶೀದ್ ಲತೀಶ್ ಕೂಡ ಇದೇ ರೀತಿಯ ಆರೋಪ ಮಾಡಿದ್ದರು. 'ಯಾವುದೇ ಕ್ರಿಕೆಟ್ ಬೋರ್ಡ್ಗಳು ತನ್ನ ಮಾಜಿ ಆಟಗಾರರು ಕಾಶ್ಮೀರ ಪ್ರೀಮಿಯರ್ ಲೀಗ್ನಲ್ಲಿ ಭಾಗವಹಿಸಲು ಅನುವು ಮಾಡಿಕೊಟ್ಟರೆ ಅವರಿಗೆ ಭಾರತದಲ್ಲಿ ಪ್ರವೇಶವನ್ನು ಅನುಮತಿಸಲಾಗುವುದಿಲ್ಲ ಅಥವಾ ಯಾವುದೇ ಮಟ್ಟದಲ್ಲಿ ಅಥವಾ ಯಾವುದೇ ಸಾಮರ್ಥ್ಯದಲ್ಲಿ ಭಾರತೀಯ ಕ್ರಿಕೆಟ್ನಲ್ಲಿ ಕೆಲಸ ಮಾಡಲು ಅನುಮತಿಸಲಾಗುವುದಿಲ್ಲ ಎಂದು ಬಿಸಿಸಿಐ ಎಚ್ಚರಿಕೆ ನೀಡಿದೆ. ಹರ್ಷೆಲ್ ಗಿಬ್ಸ್, ತಿಲಕರತ್ನೆ ದಿಲ್ಶನ್, ಮಾಂಟಿ ಪನೇಸರ್ ಮತ್ತು ಇನ್ನೂ ಹಲವಾರು ಆಟಗಾರರು ಕೆಪಿಎಲ್ಗೆ ಆಯ್ಕೆಯಾಗಿದ್ದಾರೆ' ಎಂದು ಲತೀಫ್ ಕೂಡ ಟ್ವೀಟ್ನಲ್ಲಿ ಬರೆದುಕೊಂಡಿದ್ದರು.
ಆರು ತಂಡಗಳ ಟೂರ್ನಿ ಕೆಪಿಎಲ್
ಕಾಶ್ಮೀರ್ ಪ್ರೀಮಿಯರ್ ಲೀಗ್ ಒಂದು ಕ್ರಿಕೆಟ್ ಪಂದ್ಯಾವಳಿಯಾಗಿದ್ದು ಇದನ್ನು ಪಾಕಿಸ್ತಾನದ ರಾಜಕಾರಣಿ ಶೆಹರ್ಯಾರ್ ಖಾನ್ ಅಫ್ರಿದಿ ಶುರು ಮಾಡಿದ್ದರು. ಈ ಪಂದ್ಯಾವಳಿಯಲ್ಲಿ ಒಟ್ಟು ಆರು ತಂಡಗಳು ಪಾಲ್ಗೊಳ್ಳುತ್ತವೆ. ಅವುಗಳೆಂದರೆ ಓವರ್ಸೀಸ್ ವಾರಿಯರ್ಸ್, ಮುಜಾಫರಾಬಾದ್ ಟೈಗರ್ಸ್, ರಾವಲಕೋಟ್ ಹಾಕ್ಸ್, ಬಾಗ್ ಸ್ಟಾಲಿಯನ್ಸ್, ಮಿರ್ಪುರ್ ರಾಯಲ್ಸ್ ಮತ್ತು ಕೊಟ್ಲಿ ಲಯನ್ಸ್. ಇಮಾದ್ ವಾಸಿಂ, ಪಾಕ್ ಪಾಕಿಸ್ತಾನ ಕ್ರಿಕೆಟ್ ತಂಡ ಅನುಭವಿ ಆಟಗಾರರಾದ ಮೊಹಮ್ಮದ್ ಹಫೀಜ್, ಶಾಹಿದ್ ಅಫ್ರಿದಿ, ಶದಬ್ ಖಾನ್, ಶೋಯೆಬ್ ಮಲಿಕ್ ಮತ್ತು ಕಮ್ರನ್ ಅಕ್ಮಲ್ ಈ ಆರು ತಂಡಗಳ ನಾಯಕತ್ವ ವಹಿಸಿಕೊಂಡಿದ್ದಾರೆ.
ಆಟದಲ್ಲಿ ರಾಜಕೀಯ ಬೇಕಾ?
ನಿಜವಾದ ಕ್ರೀಡಾಪಟು ಅಥವಾ ಕ್ರೀಡಾ ಪ್ರೇಮಿ ಯಾವತ್ತಿಗೂ ಕ್ರೀಡೆಯಲ್ಲಿ ರಾಜಕೀಯ ಅಡ್ಡಗಾಲು ಹಾಕೋದನ್ನು ಇಷ್ಟಪಡೋದಿಲ್ಲ. ರಾಜಕೀಯ ವಿಚಾರಕ್ಕೂ ಕ್ರೀಡೆಗೂ ಸಂಬಂಧವಿಲ್ಲ. ಕ್ರಿಕೆಟ್ ಅಥವಾ ಕ್ರೀಡೆ ಅನ್ನೋದು ದ್ವೇಶ, ಗಡಿ ಬೇಧ, ತಾರತಮ್ಯ, ಅಹಂಕಾರ, ಕೋಮುವಾದ ಎಲ್ಲವನ್ನೂ ಬಡಿಗಿಟ್ಟು ಜೊತೆಯಾಗಿ ಆಡಿ ಸಂಭ್ರಮಿಸಲು ಇರುವ ಒಂದು ಚಂದದ ನೆಪ. ಕ್ರೀಡೆಯಲ್ಲಿ ಖಂಡಿತಾ ರಾಜಕೀಯ ಬೇಡ. ರಾಜಕೀಯ ಮನಸ್ತಾಪ ಏನಿದ್ದರೂ ರಾಜಕೀಯವಾಗೇ ಬಗೆಹರಿಯಲಿ ಹೊರತು ಕ್ರೀಡೆಗೆ ಅಡ್ಡಿಪಡಿಸೋದು ಸರಿಯಲ್ಲ ಎಂದು ಬಹುತೇಕ ಕ್ರೀಡಾಪ್ರೇಮಿಗಳು ಅಭಿಪ್ರಾಯಿಸುತ್ತಿದ್ದಾರೆ. ಇನ್ನು ಕೆಲವರು ಗಿಬ್ಸ್ ಅವರ ವಿರುದ್ಧವೇ ಅಸಮಾಧಾನ ಹೊರಹಾಕಿದ್ದಾರೆ.