ಮ್ಯಾಂಚೆಸ್ಟರ್, ಜುಲೈ 08: ಸತತ ಮೂರನೇ ಬಾರಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ಸ್ ತಲುಪಿರುವ ಟೀಮ್ ಇಂಡಿಯಾ, ಇಲ್ಲಿನ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ಮಂಗಳವಾರ ಕಳೆದ ಬಾರಿಯ ರನ್ನರ್ಸ್ಅಪ್ ನ್ಯೂಜಿಲೆಂಡ್ ವಿರುದ್ಧ ಫೈನಲ್ ಅರ್ಹತೆಗಾಗಿ ಪೈಪೋಟಿ ನಡೆಸಲಿದೆ.
ವಿಶ್ವಕಪ್ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ
ಇದೇ ವೇಳೆ ಹೈ ವೋಲ್ಟೇಜ್ ಸೆಮಿಫೈನಲ್ಸ್ ಕುರಿತಾಗಿ ಮಾತನಾಡಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಂಡಕ್ಕೆ ಪ್ರಶಸ್ತಿ ಗೆದ್ದುಕೊಡುವ ಸಾಮರ್ಥ್ಯ ರೋಹಿತ್ ಶರ್ಮಾ ಅವರಲ್ಲಿದೆ ಎಂದು ತಂಡದ ಉಪನಾಯಕ ರೋಹಿತ್ ಶರ್ಮಾ ಅವರ ಗುಣಗಾನ ಮಾಡಿದ್ದಾರೆ. ಇದೇ ವೇಳೆ ಸತತ 5 ಅರ್ಧಶತಕ ದಾಖಲಿಸಿ ಒಂದನ್ನೂ ಶತಕವನ್ನಾಗಿ ಪರಿವರ್ತಿಸದೇ ಇರುವುದಕ್ಕೆ ಬೇಸರವನ್ನೂ ಕೊಹ್ಲಿ ವ್ಯಕ್ತ ಪಡಿಸಿದ್ದಾರೆ.
ಸೆಮಿಫೈನಲ್ಸ್ನಲ್ಲಿ ಭಾರತ ವಿರುದ್ಧ ಕಿವೀಸ್ ತನ್ನ ಪ್ರಮುಖ ಅಸ್ತ್ರದ ಬಳಕೆ!
"ಈ ಬಾರಿಯ ವಿಶ್ವಕಪ್ನಲ್ಲಿ ನನು ವಿಭಿನ್ನವಾದ ಜವಾಬ್ದಾರಿಯನ್ನೇ ನಿಭಾಯಿಸಿದ್ದೇನೆ. ಒಬ್ಬ ನಾಯಕನಾಗಿ ತಂಡಕ್ಕೆ ಅಗತ್ಯವಿರುವ ಯಾವುದೇ ರೀತಿಯ ಆಟವನ್ನು ಆಟವನ್ನು ಆಡಲು ನಾನು ಸಿದ್ಧನಿದ್ದೇನೆ. ರೋಹಿತ್ ಸ್ಥಿರ ಪ್ರದರ್ಶನ ನೀಡುವ ಮೂಲಕ ರನ್ ಗಳಿಸುತ್ತಿರುವುದು ನಿಜಕ್ಕೂ ಅದ್ಭುತವಾಗಿದೆ. ಇದರಿಂದ ಇನಿಂಗ್ಸ್ ಅಂತ್ಯದಲ್ಲಿಮತ್ತಷ್ಟು ಉತ್ತಮವಾಗಿ ಆಟವಾಡುವ ಜವಾಬ್ದಾರಿ ನನ್ನ ಮೇಲಿದೆ,'' ಎಂದು ರೋಹಿತ್ ಹೇಳಿದ್ದಾರೆ.
ವಿಶ್ವಕಪ್ನಲ್ಲಿ ರೋಹಿತ್ ಉದ್ದೇಶವೇನೆಂಬುದನ್ನು ಬಿಚ್ಚಿಟ್ಟ ಕೋಚ್!
"ವೈಯಕ್ತಿಕ ಸಾಧನೆಗಳ ಕುರಿತಾಗಿ ಯಾರೂ ಆಲೋಚಿಸುವುದಿಲ್ಲ. ರೋಹಿತ್ ಕೂಡ ಇದನ್ನೇ ಹೇಳಿದ್ದಾರೆ. ತಂಡದ ಯಶಸ್ಸಿಗಾಗಿ ತಮ್ಮಿಂದ ಸಾಧ್ಯವಾದ ಪ್ರಯತ್ನವನ್ನು ಅವರು ಮಾಡುತ್ತಿದ್ದಾರೆ. ಇದನ್ನೇ ನಾನು ನನ್ನ ವೃತ್ತಿಬದುಕಿನಲ್ಲಿ ಮೊದಲಿನಿಂದಲೂ ರೂಢಿಸಿಕೊಂಡು ಬಂದಿದ್ದೇನೆ. ನಾನು ಗಳಿಸಿರುವ ಶತಕಗಳನ್ನು ಗಳಿಸುತ್ತೇನೆಂದು ನಾನು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಆದರೆ, ತಂಡಕ್ಕಾಗಿ ರನ್ ಗಳಿಸುವುದಷ್ಟೇ ನನ್ನ ಉದ್ದೇಶ,'' ಎಂದು ಕೊಹ್ಲಿ ಹೇಳಿದ್ದಾರೆ.
ಬುಮ್ರಾ ಬೌಲಿಂಗ್ ಬಗ್ಗೆ ಡೇನಿಯಲ್ ವೆಟೊರಿ ಹೇಳಿದ್ದೇನು ಗೊತ್ತಾ?
ಇದೇ ವೇಳೆ ರೋಹಿತ್ ಬ್ಯಾಟಿಂಗ್ ಕುರಿತಾಗಿ ಮಾತನಾಡಿದ ನಾಯಕ ಕೊಹ್ಲಿ, "ರೋಹಿತ್ ಇನ್ನೆರಡು ಶತಕಗಳನ್ನು ಬಾರಿ ಪಂದ್ಯಗಳನ್ನು ಗೆದ್ದುಕೊಡಲಿ ಎಂದಷ್ಟೇ ಆಶಿಸುತ್ತೇನೆ. ಇದು ನಿಜಕ್ಕೂ ಅದ್ಭುತ ಸಾಧನೆ. ಒಂದೇ ವಿಶ್ವಕಪ್ನಲ್ಲಿ 5 ಶತಕಗಳನ್ನು ಬಾರಿಸಿರುವುದು ಹಿಂದೆಂದೂ ನಡೆದಿಲ್ಲ. ಸದ್ಯ ಅವರು ಏಕದಿನ ಕ್ರಿಕೆಟ್ನಲ್ಲಿ ಅತ್ಯುತ್ತಮ ಬ್ಯಾಟ್ಸ್ಮನ್ ಆಗಿದ್ದಾರೆ,'' ಎಂದು ವಿರಾಟ್ ಹೇಳಿದ್ದಾರೆ.
ಇಂಡೊ-ಕಿವೀಸ್ ಸೆಮಿಫೈನಲ್ಗೆ ಮಳೆ ಅಡ್ಡಿ ಪಡಿಸಿದರೆ ಏನಾಗುತ್ತದೆ?
2008ರ ಜೂನಿಯರ್ ವಿಶ್ವಕಪ್ ಸೆಮಿಫೈನಲ್ನ ಝಲಕ್
ಇನ್ನು 2008ರಲ್ಲಿ ನಡೆದ ಐಸಿಸಿ 19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ಸ್ನಲ್ಲೂ ಭಾರತ ಮತ್ತು ನ್ಯೂಜಿಲೆಂಡ್ ತಂಗಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲೂ ವಿರಾಟ್ ಕೊಹ್ಲಿ ಮತ್ತು ಕೇನ್ ವಿಲಿಯಮ್ಸನ್ ತಮ್ಮ ತಂಡಗಳನ್ನು ಮುನ್ನಡೆಸಿದ್ದರು ಎಂಬುದು ವಿಶೇಷ. ಪಂದ್ಯದಲ್ಲಿ ಡಕ್ವರ್ತ್ ಲೂಯಿಸ್ ನಿಯಮದನ್ವಯ ಭಾರತ ತಂಡ ನ್ಯೂಜಿಲೆಂಡ್ ಎದುರು 3 ವಿಕೆಟ್ಗಳಿಂದ ಗೆದ್ದು ಫೈನಲ್ ತಲುಪಿತ್ತು. ಪಂದ್ಯದಲ್ಲಿ 53 ಎಸೆತಗಳಲ್ಲಿ 43 ರನ್ಗಳ ಕಾಣಿಕೆ ನೀಡಿದ್ದ ಕೊಹ್ಲಿ, ಬೌಲಿಂಗ್ನಲ್ಲೂ ಮಿಂಚಿ ಎದುರಾಳಿ ನಾಯಕ ಕೇನ್ ವಿಲಿಯಮ್ಸನ್ ಅವರ ವಿಕೆಟ್ ಪಡೆದಿದ್ದರು. ಇದೀಗ ಮತ್ತೊಮ್ಮೆ ಕೊಹ್ಲಿ ಮತ್ತು ವಿಲಿಯಮ್ಸನ್ ವಿಶ್ವಕಪ್ ಫೈನಲ್ ಟಿಕೆಟ್ ಸಲುವಾಗಿ ಹೋರಾಟಕ್ಕಿಳಿಯಲಿದ್ದಾರೆ.