ಬೌಲರ್ ಕಮ್ ಬ್ಯಾಟ್ಸ್ಮನ್ ಆಗಬೇಕು
'ಹೊಸ ಚೆಂಡೊಂದಕ್ಕೆ ಆಡಬಲ್ಲ ಹೊಸ ಬೌಲರ್, ಹೊಸ ಬ್ಯಾಟ್ಸ್ಮನ್ ಆಗಿ ಗುರುತಿಸಿಕೊಳ್ಳಲು ನಾನು ಬಯಸಿದ್ದೇನೆ. ಈ ನೆಲೆಯಲ್ಲಿ ನಾನು ತರಬೇತಿ ನಡೆಸಬೇಕಿದೆ. ಆಯ್ಕೆ ಸಮಿತಿ ನನ್ನನ್ನು ಆರಿಸಬೇಕು. ನಾನು ಆಲ್ ರೌಂಡರ್ ಅನ್ನುವ ಕಾರಣಕ್ಕೆ ಆರಿಸುವಂತಾಗಬೇಕು' ಎಂದು ಚಾಹರ್ ತನ್ನ ಮನದ ಇಂಗಿತವನ್ನು ಹೊರ ಹಾಕಿದರು.
ಧೋನಿಯಿಂದಾಗಿ ಅವಕಾಶ
'ಐಪಿಎಲ್ ಟೂರ್ನಿಯ ಪಂದ್ಯಗಳಲ್ಲಿ ನಾನು ರನ್ ಗಳಿಸಿದ್ದೇನೆ. ಮಾಹಿ ಭಾಯಿಯಿಂದಾಗಿ ಇದಕ್ಕೆ ನನಗೆ ಅವಕಾಶ ದೊರೆಯಿತು. ನನ್ನ ಶಕ್ತಿಯನ್ನು ತೋರಿಸಿಕೊಳ್ಳಲು ನನಗೀವರ್ಷ ಸಾಕಷ್ಟು ಅವಕಾಶಗಳಿವೆ ಅಂತ ಭಾವಿಸಿದ್ದೇನೆ' ಎಂದು ದೀಪಕ್ ತಿಳಿಸಿದರು.
ತಂಡದಲ್ಲಿ ಸ್ಥಾನ ಗಳಿಸುವುದು ಸುಲಭವಿಲ್ಲ
'ವೇಗಿ ಬೌಲರ್ ಒಬ್ಬ ಬ್ಯಾಟಿಂಗೂ ಮಾಡುವಂತಾದರೆ ತಂಡಕ್ಕೊಂದು ಸಮತೋಲನ ಲಭಿಸುತ್ತದೆ. ಅದೂ ಭಾರತದಂತಹ ನಂ.1 ತಂಡದಲ್ಲಿ ಸ್ಥಾನ ಲಭಿಸಬೇಕಾದರೆ ಅದಕ್ಕೆ ತಕ್ಹಾಗೆ ನಮ್ಮ ವರ್ತನೆ, ಸಾಧನೆಯಿರಬೇಕು' ಎಂದು ಚಾಹರ್ ಅಭಿಪ್ರಾಯಿಸಿದರು.
ಐಪಿಎಲ್ ನಲ್ಲಿ ಬ್ಯಾಟ್ಸ್ಮನ್
ಮಂಗಳವಾರ (ಅಕ್ಟೋಬರ್ 9) ಚೆನ್ನೈ ಯಲ್ಲಿ ನಡೆದಿದ್ದ ವಿಜಯ್ ಹಜಾರೆ ಟ್ರೋಫಿಯಲ್ಲಿ ಚಾಹರ್ ಅವರನ್ನೊಳಗೊಂಡ ರಾಜಸ್ತಾನ್ ತಂಡ ಎಲೈಟ್ ಗ್ರೂಪ್ ಸಿಯ ಪಂದ್ಯದಲ್ಲಿ ಸರ್ವೀಸಸ್ ತಂಡವನ್ನು ಭರ್ಜರಿ ಏಳು ವಿಕೆಟ್ ನಿಂದ ಮಣಿಸಿತ್ತು. ಈ ವೇಳೆ ಮಾತಿಗೆ ಸಿಕ್ಕ ಚಾಹರ್, 'ಮುಂಬರಲಿರುವ ಐಪಿಎಲ್ ನಲ್ಲಿ ಬ್ಯಾಟಿಂಗ್ ಮೂಲಕ ಅವಕಾಶ ಗಿಟ್ಟಿಸಿಕೊಳ್ಳುವುವತ್ತ ನಾನು ಪ್ರಯತ್ನಿಸುವುದರಲ್ಲಿದ್ದೇನೆ' ಎಂದರು.