ಜಿಂಬಾಬ್ವೆ ಜೊತೆ ಪಂದ್ಯಗಳನ್ನು ಆಯೋಜಿಸುತ್ತಿರುವವನನ್ನು ನಾನು ಭೇಟಿಯಾಗಬೇಕು
ಹೀಗೆ ಜಿಂಬಾಂಬ್ವೆ ವಿರುದ್ಧದ ಸರಣಿಗಳನ್ನು ಆಯೋಜಿಸುತ್ತಿರುವವರ ವಿರುದ್ಧ ಕಿಡಿಕಾರಿದ ವಾಸಿಂ ಅಕ್ರಂ 'ಜಿಂಬಾಬ್ವೆ ವಿರುದ್ಧ ಸರಣಿ ಆಯೋಜಿಸುತ್ತಿರುವ ಮಹಾನುಭಾವನನ್ನು ನಾನು ಭೇಟಿಯಾಗಬೇಕು ಮತ್ತು ಆತ ಮಾಡಿರುವ ಮಹತ್ಕಾರ್ಯಕ್ಕೆ ಆತನನ್ನು ಹೊಗಳಿ ಕೊಂಡಾಡಬೇಕು' ಎಂದು ವಾಸಿಂ ಅಕ್ರಮ್ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ನ ಕಾಲೆಳೆದಿದ್ದಾರೆ.
ಟೀಮ್ ಇಂಡಿಯಾವನ್ನು ನೋಡಿ ಕಲಿಯಿರಿ
ಇನ್ನೂ ಮುಂದುವರಿದು ಮಾತನಾಡಿರುವ ವಾಸಿಂ ಅಕ್ರಂ ಭಾರತ ತಂಡವನ್ನು ಉದಾಹರಣೆಯಾಗಿ ತೆಗೆದುಕೊಂಡಿದ್ದಾರೆ. ಅತ್ತ ಭಾರತ ತಂಡವನ್ನು ನೋಡಿ 2 ತಂಡಗಳನ್ನು ವಿಂಗಡಿಸಿಕೊಂಡು ದೊಡ್ಡ ದೊಡ್ಡ ರಾಷ್ಟ್ರಗಳ ವಿರುದ್ಧ ಸರಣಿಗಳನ್ನು ಆಡುತ್ತಿದ್ದಾರೆ. ಒಂದು ತಂಡ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದರೆ ಮತ್ತೊಂದು ತಂಡ ಶ್ರೀಲಂಕಾ ಪ್ರವಾಸವನ್ನು ಕೈಗೊಂಡಿದೆ, ಅವರು 10 ವರ್ಷಗಳಿಂದ ತಮ್ಮ ತಂಡವನ್ನು ಗಟ್ಟಿಗೊಳಿಸುತ್ತಾ ಬಂದು ಈ ಮಟ್ಟವನ್ನು ತಲುಪಿದ್ದಾರೆ ಎಂದು ವಾಸಿಂ ಅಕ್ರಂ ಭಾರತ ತಂಡವನ್ನು ಕೊಂಡಾಡಿದರು.
ಪಾಕಿಸ್ತಾನಕ್ಕೆ ಏನೂ ಲಾಭವಿಲ್ಲ
ಜಿಂಬಾಬ್ವೆ ವಿರುದ್ಧ ಪಂದ್ಯಗಳನ್ನು ಆಯೋಜಿಸುತ್ತಿರುವುದಕ್ಕೆ ಕಿಡಿಕಾರಿರುವ ವಾಸಿಂ ಅಕ್ರಂ ಅಂತಹ ತಂಡಗಳ ವಿರುದ್ಧ ಪಂದ್ಯವನ್ನು ಆಯೋಜಿಸಿದರೆ ಏನೂ ಲಾಭವಿಲ್ಲ ಎಂದಿದ್ದಾರೆ. 3 ಅಥವಾ 4 ವರ್ಷಗಳಿಗೊಮ್ಮೆ ಆದರೆ ಪರವಾಗಿಲ್ಲ, ಆದರೆ ಪದೇ ಪದೇ ಜಿಂಬಾಬ್ವೆ ವಿರುದ್ಧ ಪಂದ್ಯಗಳನ್ನು ಆಯೋಜಿಸಿದರೆ ಲಾಭವಾಗುವುದು ಜಿಂಬಾಬ್ವೆಗೆ ಹೊರತು ಪಾಕಿಸ್ತಾನಕ್ಕಲ್ಲ ಎಂದು ವಾಸಿಂ ಅಕ್ರಂ ಅಭಿಪ್ರಾಯಪಟ್ಟಿದ್ದಾರೆ.