ಕ್ರಿಕೆಟ್ ಮುಗಿಸುವಲ್ಲಿ ಯಶಸ್ವಿಯಾಗಿದ್ದಾರೆ
"ನಾನು ಸ್ಪಷ್ಟವಾಗಿ ಒಂದು ವಿಚಾರವನ್ನು ಹೇಳಲು ಬಯಸುತ್ತೇನೆ. ಅವರು(ಐಸಿಸಿ) ಕ್ರಿಕೆಟನ್ನು ಮುಗಿಸುತ್ತಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಕ್ರಿಕೆಟನ್ನು ಯಶಸ್ವಿಯಾಗಿ ಮುಗಿಸಿದ್ದಾರೆ ಎಂದು ನಾನು ಬಹಿರಂಗವಾಗಿ ಹೇಳುತ್ತಿದ್ದೇನೆ" ಎಂದು ಶೋಯೆಬ್ ಅಖ್ತರ್ ಹೇಳಿದ್ದಾರೆ. ನೀವು ಅದ್ಭುತ ಕೆಲವನ್ನು ಮಾಡುತ್ತಿದ್ದೀರಿ, ನಿಮಗೇನು ಅನಿಸುತ್ತದೋ ಅದನ್ನು ಮಾಡಿ ಎಂದು ವ್ಯಂಗ್ಯವಾಗಿ ತಮ್ಮ ಕೋಪವನ್ನು ವ್ಯಕ್ತಪಡಿಸಿದ್ದಾರೆ.
ಬದಲಾವಣೆ ಬೇಕು
ಏಕದಿನ ಕ್ರಿಕೆಟ್ನ ಉತ್ಕೃಷ್ಟತೆಗಾಗಿ ಕೆಲ ಬದಲಾವಣೆಗಳನ್ನು ತರಬೇಕು ಎಂದು ಅಖ್ತರ್ ಹೇಳಿದ್ದಾರೆ. ಎರಡು ಹೊಸ ಚೆಂಡಿನ ಬಳಕೆ ಮತ್ತು ಕೇವಲ ನಾಲ್ಕು ಫೀಲ್ಡರ್ಗಳು ಸರ್ಕಲ್ನ ಆಚೆಗಿರುವಂತ ನಿಯಮವಿದೆ. ಹಾಗಾಗಿ ಬೌನ್ಸರ್ಗಳ ಸಂಖ್ಯೆ ಹೆಚ್ಚು ಮಾಡಲು ಅವಕಾಶವನ್ನು ನೀಡಬೇಕು ಎಂದಿದ್ದಾರೆ ಅಖ್ತರ್.
ಬೌನ್ಸರ್ ಹೆಚ್ಚಳ ಮಾಡಿ
ನಾನು ಪದೇ ಪದೇ ಹೇಳುತ್ತಿದ್ದೇನೆ. ಬೌನ್ಸರ್ಗಳ ಸಂಖ್ಯೆಯನ್ನು ಹೆಚ್ಚಳ ಮಾಡಬೇಕೆಂದು. ದಯವಿಟ್ಟು ನೀವು ಐಸಿಸಿಯನ್ನು ಕೇಳಿ, ಕಳೆದ ಹತ್ತು ವರ್ಷಗಳಲ್ಲಿ ಕ್ರಿಕೆಟ್ ಆಟದ ಗುಣಮಟ್ಟ ಏರಿಕೆಯಾಗಿದೆಯಾ ಅಥವಾ ಇಳಿಕೆಯಾಗಿದೆಯಾ ಎಂಬುದನ್ನು. ಎಲ್ಲಿದೆ ಆ ಸಚಿನ್ ವರ್ಸಸ್ ಶೋಯೆಬ್ ಸ್ಪರ್ಧೆಗಳು ಎಂದು ಅಖ್ತರ್ ಪ್ರಶ್ನಿಸಿದ್ದಾರೆ.
ಸಚಿನ್ ಬಗ್ಗೆ ಗೌರವ
ಈ ಸಂದರ್ಭದಲ್ಲಿ ಸಚಿನ್ ತೆಂಡೂಲ್ಕರ್ ಬಗ್ಗೆ ಅಖ್ತರ್ ಮಾತಾಡಿದರು. ಸಚಿನ್ ಕ್ರಿಕೆಟ್ನ ಸಂದರ್ಭದಲ್ಲಿ ಕೋಪಗೊಳ್ಳುತ್ತಲೇ ಇರಲಿಲ್ಲ. ಅದಕ್ಕಾಗಿ ವಿಶ್ವದ ಬೆಸ್ಟ್ ಬ್ಯಾಟ್ಸ್ಮನ್ ಎಲ್ಲರಿಂದಲೂ ಗೌರವವನ್ನು ಪಡೆಯುತ್ತಾರೆ ಎಂದು ಹೇಳಿದರು.