ಬೆಂಗಳೂರು, ಜೂನ್ 24: ವಿಶ್ವಕಪ್ ಕ್ರಿಕೆಟ್ ನಲ್ಲಿ ಟೀಂ ಇಂಡಿಯಾಕ್ಕೂ ಗಾಯಾಳುಗಳ ಸಮಸ್ಯೆ ಎದುರಾಗಿದ್ದು, ಪ್ರಮುಖ ಬ್ಯಾಟ್ಸ್ ಮನ್ ಹಾಗೂ ಬೌಲರ್ ಗಳನ್ನು ಕಳೆದುಕೊಂಡಿದೆ. ಪಾಕಿಸ್ತಾನ ವಿರುದ್ಧದ ಲೀಗ್ ಪಂದ್ಯದಲ್ಲಿ ಸ್ನಾಯು ಸೆಳೆತಕ್ಕೆ ಒಳಗಾದ ಪ್ರಮುಖ ವೇಗಿ ಭುವನೇಶ್ವರ್ ಕುಮಾರ್ ಇನ್ನೂ ಚೇತರಿಸಿಕೊಂಡಿಲ್ಲ.
ಈಗಾಗಲೇ ಆರಂಭಿಕ ಆಟಗಾರ ಶಿಖರ್ ಧವನ್ ಅವರು ತಂಡವನ್ನು ತೊರೆದಿದ್ದಾರೆ. ಈಗ ಭುವನೇಶ್ವರ್ ಕುಮಾರ್ ಅವರು ಮುಂದಿನ ಪಂದ್ಯಕ್ಕೂ ಮುನ್ನ ಅವರ ಫಿಟ್ನೆಸ್ ಸಾಬೀತುಪಡಿಸಬೇಕಿದೆ. ಹೀಗಾಗಿ, ಜಸ್ ಪ್ರೀತ್ ಬೂಮ್ರಾ ಹಾಗೂ ಮೊಹಮ್ಮದ್ ಶಮಿ ಮೇಲೆ ಹೆಚ್ಚಿನ ಜವಾಬ್ದಾರಿ ಬಿದ್ದಿದೆ.
ಹ್ಯಾಟ್ರಿಕ್ ಪಡೆಯಲು ಧೋನಿ ಕೊಟ್ಟ ಸಲಹೆ ಕಾರಣವಾಯ್ತು : ಶಮಿ
ನೆಟ್ ಅಭ್ಯಾಸದ ಬೌಲರ್ : ಭಾರತ 'ಎ' ತಂಡ ಪ್ರಮುಖ ಬೌಲರ್, ಆರ್ ಸಿಬಿ ಸ್ಟಾರ್ ವೇಗಿ ನವ್ದೀಪ್ ಸೈನಿ ಅವರು ಟೀಂ ಇಂಡಿಯಾದ ನೆಟ್ ಬೌಲರ್ ಆಗಿ ತಂಡವನ್ನು ಸೇರಿಕೊಳ್ಳಲಿದ್ದು, ವಿಶ್ವಕಪ್ ಮುಗಿಯುವ ತನಕ ತಂಡದ ಜೊತೆಗಿರಲಿದ್ದಾರೆ. ಭಾರತ ತನ್ನ ಮುಂದಿನ ಪಂದ್ಯವನ್ನು ಜೂನ್ 27ರಂದು ವೆಸ್ಟ್ ಇಂಡೀಸ್ ವಿರುದ್ಧ ಹಾಗೂ ಜೂನ್ 30ರಂದು ಇಂಗ್ಲೆಂಡ್ ವಿರುದ್ಧ ಆಡಲಿದೆ.
ಮ್ಯಾಂಚೆಸ್ಟರ್ ತಲುಪಿರುವ ಸೈನಿ ಅವರು ಭಾರತೀಯ ಬ್ಯಾಟ್ಸ್ಮನ್ಗಳಿಗೆ ನೆಟ್ ಬೌಲರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ನೆಟ್ ಬೌಲರ್ ಆಗಿ ಸೈನಿ ಒಬ್ಬರೇ ಆಯ್ಕೆಯಾಗಿದ್ದಾರೆ ಎಂದು ಬಿಸಿಸಿಐ ಹೇಳಿದೆ.
ವಿಶ್ವಕಪ್ 2019: ಭಾರತ ಪರ ಇತಿಹಾಸ ನಿರ್ಮಿಸಿದ ವೇಗಿ ಮೊಹಮ್ಮದ್ ಶಮಿ!
ಈ ಬಗ್ಗೆ ಬಿಸಿಸಿಐ ಅಧಿಕೃತವಾಗಿ ತಿಳಿಸಿದ್ದು, 'ನವ್ದೀಪ್ ಸೈನಿ ಮ್ಯಾಂಚೆಸ್ಟರ್ಗೆ ಬಂದಿದ್ದಾರೆ. ಅವರು ಭಾರತೀಯ ಬ್ಯಾಟ್ಸ್ಮನ್ಗಳಿಗೆ ನೆಟ್ ಬೌಲರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ನೆಟ್ ಬೌಲರ್ ಆಗಿ ಸೈನಿ ಒಬ್ಬರೇ ಆಯ್ಕೆಯಾಗಿದ್ದಾರೆ' ಎಂದು ಹೇಳಿದೆ. 15 ಮಂದಿ ತಂಡದ ಪ್ರಕಟಿಸಿದಾಗ ಬದಲಿ ಆಟಗಾರರ ಪಟ್ಟಿಯಲ್ಲಿ ಸೈನಿ ಕೂಡಾ ಇದ್ದರು. ಆದರೆ, ಅನಾರೋಗ್ಯದ ಕಾರಣ ಈ ಮುಂಚೆ ತಂಡವನ್ನು ಸೇರಲಾಗಿರಲಿಲ್ಲ.
ಇದಕ್ಕೂ ಮುನ್ನ ಖಲೀಲ್ ಅಹ್ಮದ್ ಅವರು ನೆಟ್ ಬೌಲರ್ ಆಗಿದ್ದರು. ಆದರೆ, ವೆಸ್ಟ್ ಇಂಡೀಸ್ ಎ ತಂಡದ ವಿರುದ್ಧ ಆಡಲು ಆಯ್ಕೆಯಾಗಿರುವುದರಿಂದ ನ್ಯಾಟಿಂಗ್ ಹ್ಯಾಮ್ ನಿಂದ ತೆರಳಿದ್ದಾರೆ. ದೀಪಕ್ ಚಾಹರ್ ಮತ್ತೊಬ್ಬ ನೆಟ್ ಬೌಲರ್ ಆಗಿದ್ದಾರೆ.