ಲಂಡನ್, ಮೇ 25: ಐಸಿಸಿ ವಿಶ್ವಕಪ್ ಕ್ರಿಕೆಟ್ 2019ಕ್ಕೆ ಭಾರತ ತಂಡದಲ್ಲಿ ತನ್ನ ಬದಲಿಗೆ ಆಲ್ ರೌಂಡರ್ ವಿಜಯ್ ಶಂಕರ್ಗೆ ಸ್ಥಾನ ನೀಡಿದ್ದಕ್ಕಾಗಿ ಅಂಬಾಟಿ ರಾಯುಡು ಅಸಮಾಧಾನ ತೋರಿಕೊಂಡಿದ್ದರು. ಈ ಬಾರಿಯ ವಿಶ್ವಕಪ್ ನೋಡಲು ನಾನು ತ್ರೀ-ಡಿ ಗ್ಲಾಸ್ ಆರ್ಡರ್ ಮಾಡಿದ್ದೇನೆ ಎಂದು ಹಿಂದೆ ರಾಯುಡು ಟ್ವೀಟ್ ಮಾಡಿದ್ದರು. ಇದಕ್ಕೆ ವಿಜಯ್ ಶಂಕರ್ ಪ್ರತಿಕ್ರಿಯಿಸಿದ್ದಾರೆ.
ಐಸಿಸಿ ಕ್ರಿಕೆಟ್ ವಿಶ್ವಕಪ್ 2019: ಆಲ್ ರೌಂಡರ್ ವಿಜಯ್ ಶಂಕರ್ಗೆ ಗಾಯ
ಗೌರವ್ ಕಪೂರ್ ಅವರ ಜನಪ್ರಿಯ ಯೂಟ್ಯೂಬ್ ಶೋ ಒಂದರಲ್ಲಿ ಮಾತನಾಡಿದ ವಿಜಯ್ ಶಂಕರ್, 'ಪ್ರಮುಖ ಟೂರ್ನಿಯೊಂದರಿಂದ ಕೈ ಬಿಟ್ಟಾಗ ಕ್ರಿಕೆಟ್ ಆಟಗಾರರು ಅನುಭವಿಸುವ ನೋವು ಏನೆಂದು ನನಗೆ ಗೊತ್ತು. ಹಾಗಾಗಿ ಆ ಟ್ವೀಟ್ ನನ್ನನ್ನೇ ಗುರಿಯಾಗಿಸಿ ಮಾಡಿದ್ದು ಅಂತ ನನಗನ್ನಿಸುತ್ತಿಲ್ಲ' ಎಂದರು.
Touted as the future star of Indian cricket, we take a look at #VijayShankar'spictures off the field, his interests and his travel expedition to exotic locales around the world pic.twitter.com/qHSMBxFHwo
— mid-day (@mid_day) May 25, 2019
'ನಾನೊಬ್ಬ ಕ್ರಿಕೆಟರ್ ಆಗಿ ತಂಡದಲ್ಲಿ ಆರಿಸದಿದ್ದಾಗ ಕ್ರಿಕೆಟಿಗರಲ್ಲಾಗುವ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬಲ್ಲೆ. ಹಾಗಾಗಿ ಆ ಟ್ವೀಟ್ ನನ್ನನ್ನು ನೋಯಿಸುವುಕ್ಕೆ ಮಾಡಿದ್ದಲ್ಲ ಅಂತ ನಾನಂದುಕೊಳ್ಳುತ್ತೇನೆ. ಬದಲಿಗೆ ಅದು ಆ ಕ್ಷಣದ ಭಾವನಾತ್ಮಕ ಪ್ರತಿಕ್ರಿಯೆಯಷ್ಟೇ' ಎಂದಿದ್ದಾರೆ.
Just Ordered a new set of 3d glasses to watch the world cup 😉😋..
— Ambati Rayudu (@RayuduAmbati) April 16, 2019
ವಿಶ್ವಕಪ್ನಲ್ಲಿ ಬ್ಯಾಟ್ಸ್ಮನ್ಗಳು ಹರಿಸಿದ ರನ್ ಹೊಳೆಯ ದಾಖಲೆಗಳಿವು
ವಿಶ್ವಕಪ್ಗಾಗಿ 15 ಜನರ ಭಾರತ ತಂಡದಲ್ಲಿ ತನ್ನನ್ನು ಸೇರಿಸದಿದ್ದಾಗ ರಾಯುಡು ಪ್ರತಿಕ್ರಿಯಿಸಿ ಟ್ವೀಟ್ ಮಾಡಿದ್ದರು. ತಂಡದಲ್ಲಿ ಶಂಕರ್ ಅವರನ್ನು ಹೆಸರಿಸುವಾಗ ಬಿಸಿಸಿಐ ವಿಜಯ್ ಒಬ್ಬ ತ್ರೀ-ಡೈಮೆನ್ಶನಲ್ (ಬ್ಯಾಟಿಂಗ್-ಬೌಲಿಂಗ್-ಫೀಲ್ಡಿಂಗ್) ಆಟಗಾರ. ಅದಕ್ಕೇ ಅವರನ್ನು ಆರಿಸಿದ್ದೇವೆ ಎಂದಿತ್ತು. ಹೀಗಾಗಿ ರಾಯುಡು 'ತ್ರೀ-ಡಿ'ಯನ್ನು ಟ್ವೀಟ್ ನಲ್ಲಿ ಉಲ್ಲೇಖಿಸಿದ್ದರು.