ಸೌತಾಂಪ್ಟನ್: ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ನಂತ ಅದ್ಭುತ ಪಂದ್ಯ ಯುನೈಟೆಡ್ ಕಿಂಗ್ಡಮ್ನಲ್ಲಿ ನಡೆಸಬಾರದಿತ್ತು ಎಂದು ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್ ಹೇಳಿದ್ದಾರೆ. ಸೌತಾಂಪ್ಟನ್ನಲ್ಲಿ ನಡೆಯುತ್ತಿರುವ ಭಾರತ-ನ್ಯೂಜಿಲೆಂಡ್ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ಮಳೆಯಿಂದಾಗಿ ಸರಿಯಾಗಿ ನಡೆಸಲಾಗದಿರುವುದಕ್ಕೆ ಪೀಟರ್ಸನ್ ಬೇಸರ ತೋರಿಕೊಂಡಿದ್ದಾರೆ.
ಭಾರತೀಯ ಕ್ರಿಕೆಟ್ ಇತಿಹಾಸದ ಈ ಕಾಕತಾಳೀಯ ಸಂಗತಿ ನಿಮ್ಮನ್ನು ಅಚ್ಚರಿಗೀಡುಮಾಡುತ್ತೆ
ಜೂನ್ 18-22ರ ವರೆಗೆ ಇಂಗ್ಲೆಂಡ್ನ ಸೌತಾಂಪ್ಟನ್ನ ಏಜಸ್ ಬೌಲ್ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಮಧ್ಯೆ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ನಡೆಯುತ್ತಿದೆ. ವಿಶ್ವ ಕ್ರಿಕೆಟ್ ಕುತೂಹಲದಿಂದ ಕಾಯುತ್ತಿರುವ ಈ ಪಂದ್ಯ ಸರಾಗವಾಗಿ ನಡೆಸಲಾಗುತ್ತಿಲ್ಲ. ಮಳೆಯ ಕಾರಣ ಪಂದ್ಯಕ್ಕೆ ತೀವ್ರ ಅಡಚಣೆಯಾಗುತ್ತಿದೆ.
ಜೂನ್ 18ರಂದು ಆರಂಭಗೊಳ್ಳಬೇಕಿದ್ದ ಪಂದ್ಯ ಮಳೆಯ ಕಾರಣ ಟಾಸ್ ಕೂಡ ನಡೆಯದೆ ನಿಲ್ಲಿಸಲ್ಪಟ್ಟಿತ್ತು, ಜೂನ್ 19ರಂದು ಪಂದ್ಯ ಆರಂಭಗೊಂಡಿತಾದರೂ 2 ದಿನಗಳ ಬಳಿಕ ಅಂದರೆ ಜೂನ್ 21ರಂದು ಮತ್ತೆ ಮಳೆಯಿಂದಾಗಿ ಪಂದ್ಯ ನಡೆಯಲಿಲ್ಲ. ಇದು ಕ್ರಿಕೆಟ್ ಅಭಿಮಾನಿಗಳಿಗೂ ಬೇಸರ ಮೂಡಿಸಿದೆ.
WTC Final: ಇಂಗ್ಲೆಂಡ್ನಲ್ಲಿ ಕಪಿಲ್ದೇವ್ ಸಾಧನೆಯನ್ನು ಹಿಂದಿಕ್ಕಿ ದಾಖಲೆ ಬರೆದ ಇಶಾಂತ್
ಟ್ವೀಟ್ ಮಾಡಿರುವ ಪೀಟರ್ಸನ್, 'ಹೇಳಲು ನನಗಿದು ತುಂಬಾ ನೋವು ತರುತ್ತಿದೆ, ಆದರೆ ಇಂಥ ಒಂದು ಪ್ರಮುಖ ಪಂದ್ಯ ಯುಕೆಯಲ್ಲಿ ನಡೆಸಬಾರದಿತ್ತು' ಎಂದು ಪೀಟರ್ಸನ್ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ. ಎರಡು ದಿನಗಳು ಪಂದ್ಯ ನಡೆಯದಿದ್ದರಿಂದ ಪಂದ್ಯ ರಿಸರ್ವ್ ಡೇಗೂ ಹೋಗಲಿದೆ. ಆದರೆ ರಿಸರ್ವ್ ಡೇಯಲ್ಲೂ ಪಂದ್ಯ ಸರಿಯಾದ ರೀತಿಯಲ್ಲಿ ಕೊನೆಗೊಳ್ಳೋದು ಅನುಮಾನ ಮೂಡಿಸಿದೆ.