ಒನ್ ಡೌನ್ನಲ್ಲಿ ಸ್ಥಿರವಾಗಿ ಸ್ಕೋರ್ ಮಾಡಲು ಸಾಧ್ಯವಾಗುತ್ತಿಲ್ಲ
"ಓಪನಿಂಗ್ ಮಾಡುವಾಗ ರೋಹಿತ್ ಶರ್ಮಾ ರನ್ ಗಳಿಸುತ್ತಿಲ್ಲ. ನಾವು ಇದನ್ನು ಏಷ್ಯಾ ಕಪ್ನಲ್ಲಿ ನೋಡಿದ್ದೇವೆ. ಅವರು ಕಳಪೆ ಸ್ಕೋರ್ ಮಾಡುತ್ತಿದ್ದಾರೆ. ವಿರಾಟ್ ಕೊಹ್ಲಿ ಕೂಡ ಒನ್ ಡೌನ್ನಲ್ಲಿ ಸ್ಥಿರವಾಗಿ ಸ್ಕೋರ್ ಮಾಡಲು ಸಾಧ್ಯವಾಗುತ್ತಿಲ್ಲ. ಬಹುಶಃ ನಿಮಗೆ ಉತ್ತಮ ಅವಕಾಶ ಸಿಕ್ಕಿದೆ".
"ರೋಹಿತ್ ಶರ್ಮಾ ಅವರನ್ನು ಒಂದು ಕ್ರಮಾಂಕ ಕೆಳಗಿಳಿಸಿ, ವಿರಾಟ್ ಕೊಹ್ಲಿ ಅವರು ಕೆಎಲ್ ರಾಹುಲ್ ಜೊತೆ ಓಪನಿಂಗ್ ಮಾಡಬಹುದು ಅಥವಾ ರೋಹಿತ್ ಓಪನಿಂಗ್ ಮಾಡಲು ತುಂಬಾ ಆರಾಮದಾಯಕವಾಗಿದ್ದರೆ, ವಿರಾಟ್ ಮತ್ತು ಅವರೊಂದಿಗೆ ಪ್ರಾರಂಭಿಸಬಹುದು. ಆ ಸಂದರ್ಭದಲ್ಲಿ ಕೆಎಲ್ ರಾಹುಲ್ ಅವರನ್ನು ಒನ್ ಡೌನ್ ಆಗಿ ಬಳಸಬಹುದು. ಅದು ದೊಡ್ಡ ಸಮಸ್ಯೆಯಾಗುವುದಿಲ್ಲ," ಎಂದು ದಾನಿಶ್ ಕನೇರಿಯಾ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ವೀಡಿಯೊದಲ್ಲಿ ಹೇಳಿದ್ದಾರೆ.
ಚೇಸ್ನಲ್ಲಿ 19.2 ಓವರ್ಗಳಲ್ಲಿ ಮೇಲುಗೈ ಸಾಧಿಸಿತು
ಮಂಗಳವಾರ ಮೊಹಾಲಿಯಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ, ಆಸ್ಟ್ರೇಲಿಯಾವು 209 ರನ್ಗಳ ಬೃಹತ್ ಗುರಿಯನ್ನು ಆರಾಮವಾಗಿ ಬೆನ್ನತ್ತಿ ನಾಲ್ಕು ವಿಕೆಟ್ಗಳ ಗೆಲುವು ಗಳಿಸಿತು. ಇದರಲ್ಲಿ ಚೆಂಡಿನೊಂದಿಗಿನ ಭಾರತದ ದೌರ್ಬಲ್ಯಗಳನ್ನು ಬಹಿರಂಗಗೊಂಡವು. ಕೆಎಲ್ ರಾಹುಲ್ (35 ಎಸೆತಗಳಲ್ಲಿ 55) ಮತ್ತು ಹಾರ್ದಿಕ್ ಪಾಂಡ್ಯ (30 ಎಸೆತಗಳಲ್ಲಿ ಔಟಾಗದೆ 71) ಆಸ್ಟ್ರೇಲಿಯವನ್ನು ಬ್ಯಾಟಿಂಗ್ಗೆ ಇಳಿಸುವ ಮೊದಲು ಭಾರತ 6 ವಿಕೆಟ್ಗೆ 208 ರನ್ ಗಳಿಸಲು ನೆರವಾಯಿತು.
ಆಸ್ಟ್ರೇಲಿಯ ರನ್ ಚೇಸ್ನಲ್ಲಿ 19.2 ಓವರ್ಗಳಲ್ಲಿ ಮೇಲುಗೈ ಸಾಧಿಸಿತು. ಕಳೆದ ವರ್ಷದ ವಿಶ್ವಕಪ್ನ ಹೀರೋ ಮ್ಯಾಥ್ಯೂ ವೇಡ್ (21 ಎಸೆತದಲ್ಲಿ 45) ಮತ್ತು ಕ್ಯಾಮರೂನ್ ಗ್ರೀನ್ (30 ಎಸೆತಗಳಲ್ಲಿ 61) ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಕಠಿಣ ಗುರಿಯನ್ನು ತಲುಪಲು ನೆರವಾದರು.
ಸೂರ್ಯಕುಮಾರ್ ಯಾದವ್ 25 ಎಸೆತಗಳಲ್ಲಿ 46 ರನ್
ಇದಕ್ಕೂ ಮೊದಲು ಭಾರತದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಐದು ಸಿಕ್ಸರ್ಗಳನ್ನು ಒಳಗೊಂಡಂತೆ ಅಜೇಯ 71 ರನ್ ಗಳಿಸುವ ಮೊದಲು ಕೆಎಲ್ ರಾಹುಲ್ ಉತ್ತಮ ಗುಣಮಟ್ಟದ ಪ್ರದರ್ಶನದೊಂದಿಗೆ ಫಾರ್ಮ್ಗೆ ಮರಳಿದರು.
ಇನ್ನು ಸೂರ್ಯಕುಮಾರ್ ಯಾದವ್ 25 ಎಸೆತಗಳಲ್ಲಿ 46 ರನ್ ಗಳಿಸುವಲ್ಲಿ ಕೆಲವು ಅತ್ಯುತ್ತಮ ಸ್ಟ್ರೋಕ್ಗಳನ್ನು ಆಡಿದರು. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕಳಪೆಯಾಗಿ ಔಟಾದ ನಂತರ, ಕೆಎಲ್ ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ 42 ಎಸೆತಗಳಲ್ಲಿ 68 ರನ್ಗಳ ಜೊತೆಯಾಟವನ್ನು ಹಂಚಿಕೊಂಡರು. ಅವರು ಕ್ರೀಸ್ನಲ್ಲಿದ್ದಾಗ ಸಿಕ್ಸರ್ಗಳ ಮಳೆ ಸುರಿಯುತ್ತಿತ್ತು.
ಸೂರ್ಯಕುಮಾರ್ ಯಾದವ್ ಅವರು ಆಡಮ್ ಝಂಪಾ ಬೌಲಿಂಗ್ನಲ್ಲಿ ಲಾಂಗ್ ಆನ್ ಮತ್ತು ಡೀಪ್ ಮಿಡ್ವಿಕೆಟ್ನಲ್ಲಿ ಸತತ ಎರಡು ಸಿಕ್ಸರ್ಗಳನ್ನು ಬಾರಿಸಿದ್ದರಿಂದ ಭಾರತವು ಮಧ್ಯಮ ಓವರ್ಗಳಲ್ಲಿ ತಮ್ಮ ರನ್ ಗತಿಯನ್ನು ಕಾಪಾಡಿಕೊಳ್ಳಲು ಸಾಧ್ಯವಾಯಿತು. ನಂತರ ಹಾರ್ದಿಕ್ ಪಾಂಡ್ಯ ಭಾರತವನ್ನು 200ರ ಗಡಿ ದಾಟಿಸಿದರು.
ಹಾರ್ದಿಕ್ ವೇಗಿಗಳ ವಿರುದ್ಧ ಅಬ್ಬರಿಸಿದರು
ಹಾರ್ದಿಕ್ ವೇಗಿಗಳ ವಿರುದ್ಧ ಅಬ್ಬರಿಸಿದರು ಮತ್ತು 18ನೇ ಓವರ್ನಲ್ಲಿ ಪ್ಯಾಟ್ ಕಮಿನ್ಸ್ ಅವರ ಪಿಕ್-ಅಪ್ ಶಾಟ್ ಅವರ ಮನರಂಜನೆಯ ಬ್ಯಾಟಿಂಗ್ ಪ್ರದರ್ಶನದ ಪ್ರಮುಖ ಅಂಶವಾಗಿತ್ತು. ಅವರು 20ನೇ ಓವರ್ನಲ್ಲಿ ಮಿಡ್ ವಿಕೆಟ್ನಲ್ಲಿ ಸತತ ಮೂರು ಸಿಕ್ಸರ್ಗಳನ್ನು ಸಿಡಿಸಿದರು. ಕೊನೆಯ ಐದು ಓವರ್ಗಳಲ್ಲಿ 67 ರನ್ಗಳು ಬಂದವು.
ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡದಲ್ಲಿ ಕೆಲವು ಬದಲಾವಣೆಗಳು ಕಾಣಬಹುದಾಗಿದೆ. ಮೊದಲ ಪಂದ್ಯವನ್ನು ತಪ್ಪಿಸಿಕೊಂಡಿದ್ದ ಜಸ್ಪ್ರೀತ್ ಬುಮ್ರಾ ಅವರು ಮರಳುವ ನಿರೀಕ್ಷೆ ಇದೆ. ಉಮೇಶ್ ಯಾದವ್ ಬುಮ್ರಾಗೆ ಜಾಗ ಮಾಡಕೊಡಲಿದ್ದಾರೆ. ಇದೇ ವೇಳೆ ದಾನಿಶ್ ಕನೇರಿಯಾ ಹೇಳಿದಂತೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಮಾಡುತ್ತಾರೆಯೇ ಎಂದು ಕಾದುನೋಡಬೇಕಿದೆ.