ವಿಕೆಟ್ ಕೀಪಿಂಗ್ ಮಾಡಲು ಸೂಚನೆ
ಪಂದ್ಯದ ಬಳಿಕ ಮಾತನಾಡಿದ ಕೆಎಲ್ ರಾಹುಲ್, "ತಂಡದ ಮ್ಯಾನೇಜ್ಮೆಂಟ್ ನನಗೆ ವಿಕೆಟ್ ಮಾಡುವಂತೆ ಮತ್ತು 4ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಹೇಳಿದೆ" ಎಂದು ಹೇಳಿದರು.
ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ಇದೇ ಪಾತ್ರವನ್ನು ನಿರ್ವಹಿಸುವುದಾಗಿ ಹೇಳುವ ಮೂಲಕ ಉಳಿದ ವಿಕೆಟ್ ಕೀಪರ್ ಗಳ ಅವಕಾಶಕ್ಕೆ ಬಹುತೇಕ ತೆರೆ ಬಿದ್ದಂತಾಗಿದೆ. ತಂಡದ ಮ್ಯಾನೇಜ್ಮೆಂಟ್ ನಿರ್ಧಾರದಿಂದ ಇಶಾನ್ ಕಿಶಾನ್, ಸಂಜು ಸ್ಯಾಮ್ಸನ್ ಮತ್ತು ರಿಷಬ್ ಪಂತ್ ಮುಂದಿನ ದಿನಗಳಲ್ಲಿ ಅವಕಾಶ ಪಡೆಯುವ ಸಾಧ್ಯತೆ ಕ್ಷೀಣವಾಗಿದೆ. ಕೆಎಲ್ ರಾಹುಲ್ ಗಾಯ ಅಥವಾ ಅನುಪಸ್ಥಿತಿಯಲ್ಲಿ ಮಾತ್ರ ಇತತರಿಗೆ ಅವಕಾಶ ಸಿಗಲಿದೆ.
IND vs BAN 1st ODI : ಭಾರತ ವಿರುದ್ಧ ಈ ಸಾಧನೆ ಮಾಡಿದ ಬಾಂಗ್ಲಾದ ಮೊದಲ ಸ್ಪಿನ್ನರ್ ಶಕೀಬ್ ಅಲ್ ಹಸನ್
ಸಂಜು ಸ್ಯಾಮ್ಸನ್ಗೆ ಅನ್ಯಾಯ
ಸದ್ಯದ ಪರಿಸ್ಥಿತಿಯಲ್ಲಿ ನತದೃಷ್ಟ ಕ್ರಿಕೆಟಿಗ ಎಂದರೆ ಅದು ಸಂಜು ಸ್ಯಾಮ್ಸನ್ ಎನ್ನಬಹುದು. ಉತ್ತಮ ಪ್ರದರ್ಶನ ನೀಡಿದ ಬಳಿಕವೂ ಅವರನ್ನು ತಂಡಕ್ಕೆ ಮಾಡುವುದಿಲ್ಲ. ಒಂದು ವೇಳೆ ತಂಡಕ್ಕೆ ಆಯ್ಕೆಯಾದರೂ ಅವರದ್ದು ಬೆಂಚ್ ಕಾಯುವ ಕೆಲಸವಷ್ಟೇ ಎನ್ನುವಂತಾಗಿದೆ. ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಅವರು ಸ್ಥಾನ ಪಡೆದರೂ, ಸರಣಿಯಲ್ಲಿ ಆಡಿದ್ದು ಕೇವಲ ಒಂದು ಪಂದ್ಯದಲ್ಲಿ ಮಾತ್ರ.
ರಿಷಬ್ ಪಂತ್ಗೆ ಹೆಚ್ಚಿನ ಅವಕಾಶ ನೀಡುವ ದೃಷ್ಟಿಯಿಂದ ಸಂಜು ಸ್ಯಾಮ್ಸನ್ರನ್ನು ಸಂಪೂರ್ಣವಾಗಿ ಕಡೆಗಣಿಸಲಾಯಿತು. ಅದಾದ ನಂತರ ಬಾಂಗ್ಲಾದೇಶದ ವಿರುದ್ಧದ ಸರಣಿಗೆ ಸ್ಯಾಮ್ಸನ್ ಆಯ್ಕೆ ಕೂಡ ಆಗಲಿಲ್ಲ. ಪಂತ್ ಹೊರಬಿದ್ದ ಬಳಿಕ ಅವರ ಬದಲಿಗೆ ರಜತ್ ಪಾಟಿದಾರ್ ಆಯ್ಕೆಯಾಗಿದ್ದಾರೆ.
ತಂಡದಿಂದ ಹೊರಬಿದ್ದ ರಿಷಬ್ ಪಂತ್
ಸತತ ವೈಫಲ್ಯದಿಂದ ಸಾಕಷ್ಟು ಟೀಕೆಗೆ ಗುರಿಯಾಗಿರುವ ರಿಷಬ್ ಪಂತ್ರನ್ನು ಗಾಯದ ಕಾರಣ ನೀಡಿ ಬಿಸಿಸಿಐ ಬಾಂಗ್ಲಾದೇಶದ ವಿರುದ್ಧದ ಏಕದಿನ ತಂಡದಿಂದ ಕೈಬಿಡಲಾಗಿದೆ. ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಿದ ಬಳಿಕ ಪಂತ್ ವೈದ್ಯರ ತಪಾಸಣೆಗೆ ಒಳಗಾಗಿದ್ದರು.
ಪಂತ್ ಬಗ್ಗೆ ಮಾತನಾಡಿದ ಕೆಎಲ್ ರಾಹುಲ್, "ಕಳೆದ ಆರು ತಿಂಗಳಿನಿಂದ ನಾವು ಅನೇಕ ಏಕದಿನ ಪಂದ್ಯಗಳಲ್ಲಿ ಆಡಿಲ್ಲ. 2020-21ರಲ್ಲಿ ನಾನು ವಿಕೆಟ್ ಕೀಪಿಂಗ್ ಮಾಡುತ್ತಿದ್ದೆ. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದೇನೆ. ಈಗ ಮತ್ತೆ ಅದೇ ಜವಾಬ್ದಾರಿ ನಿಭಾಯಿಸುವಂತೆ ಕೇಳಲಾಗಿದೆ. ಪಂತ್ ಬಿಡುಗಡೆಗೆ ಕಾರಣ ಏನು ಎಂದು ನನಗೆ ತಿಳಿದಿಲ್ಲ. ವೈದ್ಯಕೀಯ ತಂಡ ಸರಿಯಾಗಿ ತಪಾಸಣೆ ಮಾಡಿದ ಬಳಿಕ ಈ ಬಗ್ಗೆ ತಿಳಿಸಬಹುದು" ಎಂದು ಕೆಎಲ್ ರಾಹುಲ್ ಹೇಳಿದರು.
ಇಶಾನ್ ಕಿಶಾನ್ಗೂ ಅವಕಾಶ ಸಿಗೋದು ಡೌಟು
ಮತ್ತೊಬ್ಬ ವಿಕೆಟ್ ಕೀಪರ್ ಇಶಾನ್ ಕಿಶಾನ್ ಅವಕಾಶ ಪಡೆಯೋದು ಕೂಡ ಅನುಮಾನವಾಗಿದೆ. ಕೆಎಲ್ ರಾಹುಲ್ ಮುಖ್ಯ ವಿಕೆಟ್ ಕೀಪರ್ ಆಗಿರಲಿದ್ದು, ಇವರ ಅನುಪಸ್ಥಿತಿಯಲ್ಲಿ ಪಂತ್ಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಇಶಾನ್ ಕಿಶಾನ್ಗೆ ಅವಕಾಶ ಸಿಗೋದು ಕಷ್ಟವಾಗಲಿದೆ.
2023ರ ಏಕದಿನ ವಿಶ್ವಕಪ್ ಗಮನದಲ್ಲಿಟ್ಟುಕೊಂಡು ತಂಡದ ಆಡಳಿತ ಮಂಡಳಿ ಈ ಕ್ರಮಕ್ಕೆ ಮುಂದಾಗಿದೆ. ತಂಡದಲ್ಲಿ ಆಲ್ರೌಂಡರ್ ಗೆ ಅವಕಾಶ ಮಾಡಿಕೊಡಲು ಕೆಎಲ್ ರಾಹುಲ್ಗೆ ವಿಕೆಟ್ ಕೀಪಿಂಗ್ ಜವಾಬ್ದಾರಿ ವಹಿಸಲಾಗಿದೆ ಎಂದು ಹೇಳಲಾಗಿದೆ.