ಕಾಂಬ್ಳಿ ಮಾಡಿರುವ ವಿವಾದಾತ್ಮಕ ಟ್ವೀಟ್ ಹೀಗಿದೆ
'ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿರುವ ಅಜಿಂಕ್ಯ ರಹಾನೆಗೆ ವಿಶ್ರಾಂತಿ ನೀಡುವ ಸಮಯವಿದು ಹಾಗೂ ಅಜಿಂಕ್ಯ ರಹಾನೆ ಬದಲು ಸೂರ್ಯಕುಮಾರ್ ಯಾದವ್ ಅವರಿಗೆ ತಂಡದಲ್ಲಿ ಸ್ಥಾನ ನೀಡಬೇಕು. ನಾಲ್ಕು ವೇಗದ ಬೌಲರ್ಗಳನ್ನು ಆಡಿಸುವ ಬದಲು ರವಿಚಂದ್ರನ್ ಅಶ್ವಿನ್ ಅವರಿಗೆ ಅವಕಾಶ ನೀಡುವುದು ಒಳಿತು. ನಾನೇನಾದರೂ ನಾಯಕನಾಗಿದ್ದರೆ ಕಳಪೆ ಪ್ರದರ್ಶನ ನೀಡುತ್ತಿರುವ ಮಧ್ಯಮ ಕ್ರಮಾಂಕದ ಪ್ರತಿಯೊಬ್ಬ ಬ್ಯಾಟ್ಸ್ಮನ್ ಬಳಿಯೂ ಹೋಗಿ ವೈಯಕ್ತಿಕವಾಗಿ ಮಾತನಾಡಿ ಉತ್ಸಾಹವನ್ನು ತುಂಬುತ್ತಿದ್ದೆ' ಎಂದು ವಿನೋದ್ ಕಾಂಬ್ಳಿ ಟ್ವೀಟ್ ಮಾಡುವ ಮೂಲಕ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ದೇಶದ ವಿಷಯ ಬಂದಾಗ ರಾಜ್ಯದ ಪರ ನಿಲ್ಲುವುದನ್ನು ಬಿಡಿ ಎಂದ ನೆಟ್ಟಿಗ
ಅಂತಾರಾಷ್ಟ್ರೀಯ ತಂಡದಲ್ಲಿ ಉತ್ತಮ ಆಟಗಾರರಿಗೆ ಸ್ಥಾನ ಸಿಗಬೇಕು ನಿಜ ಆದರೆ ರಾಜ್ಯವನ್ನು ತಲೆಯಲ್ಲಿಟ್ಟುಕೊಂಡು ನಮ್ಮ ರಾಜ್ಯದ ಆಟಗಾರರಿಗೆ ಅವಕಾಶ ನೀಡಬೇಕು ಎನ್ನುವುದು ತಪ್ಪು ಎಂದು ವಿನೋದ್ ಕಾಂಬ್ಳಿ ಟ್ವೀಟ್ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ. 'ಅಜಿಂಕ್ಯ ರಹಾನೆಯನ್ನು ತಂಡದಿಂದ ಹೊರಗಿಟ್ಟು ಸೂರ್ಯಕುಮಾರ್ ಯಾದವ್ ಅವರಿಗೆ ಅವಕಾಶ ನೀಡಿ ಎನ್ನುವುದು ತಪ್ಪು, ಸೂರ್ಯಕುಮಾರ್ ಯಾದವ್ ಅವರಿಗಿಂತ ಮಯಾಂಕ್ ಅಗರ್ವಾಲ್ ಮತ್ತು ಹನುಮ ವಿಹಾರಿ ಉತ್ತಮ ಪ್ರದರ್ಶನ ನೀಡಬಲ್ಲ ಸಾಮರ್ಥ್ಯವುಳ್ಳ ಆಟಗಾರರಾಗಿದ್ದಾರೆ. ದೇಶದ ವಿಷಯ ಬಂದಾಗ ನಿಮ್ಮ ರಾಜ್ಯದ ಆಟಗಾರರನ್ನು ಸಮರ್ಥಿಸಿಕೊಳ್ಳುವುದನ್ನು ಬಿಡಿ. ಮೊದಲು ಭಾರತ ನಂತರ ಮುಂಬೈ ಮಿಸ್ಟರ್ ಕಾಂಬ್ಳಿ' ಎಂದು ನೆಟ್ಟಿಗನೊಬ್ಬ ಕಾಂಬ್ಳಿ ವಿರುದ್ಧ ಕಿಡಿಕಾರಿದ್ದಾನೆ.
ರಹಾನೆಯನ್ನು ತಂಡದಿಂದ ಕೈ ಬಿಡುವುದು ಸುಲಭವಲ್ಲ
ರಹಾನೆಯನ್ನು ತಂಡದಿಂದ ಕೈಬಿಡಬೇಕು ಎಂದು ಟ್ವೀಟ್ ಮಾಡಿರುವ ಕಾಂಬ್ಳಿ ವಿರುದ್ಧ ಮತ್ತೊಬ್ಬ ನೆಟ್ಟಿಗ ಕಿಡಿಕಾರಿದ್ದು 'ಅಜಿಂಕ್ಯ ರಹಾನೆ ಕಳೆದ ಕೆಲವು ಇನ್ನಿಂಗ್ಸ್ನಲ್ಲಿ ವಿಫಲರಾಗಿದ್ದಾರೆ ಎಂಬ ಕಾರಣಕ್ಕೆ ತಂಡದಿಂದ ಕೈಬಿಡಲಾಗುವುದಿಲ್ಲ, ರಹಾನೆ ಮಧ್ಯಮ ಕ್ರಮಾಂಕದಲ್ಲಿ ಬೇಕಾಗುವ ಅತ್ಯಂತ ಪ್ರಮುಖ ಆಟಗಾರ' ಎಂದು ಟ್ವೀಟ್ ಮಾಡಿದ್ದಾನೆ.