ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs PAK: ಪಂತ್, ಕಾರ್ತಿಕ್ ನಡುವಿನ ಆಯ್ಕೆ ಭಾರತಕ್ಕೆ ದೊಡ್ಡ ತಲೆನೋವು; ಚೇತೇಶ್ವರ ಪೂಜಾರ

IND vs PAK: Choice Between Rishabh Pant And Dinesh Karthik Is Big Headache For India Says Cheteshwar Pujara

ಭಾರತ ತಂಡವು ತಮ್ಮ 2022ರ ಏಷ್ಯಾ ಕಪ್ ಅಭಿಯಾನವನ್ನು ಇಂದು (ಆಗಸ್ಟ್ 28ರ ಭಾನುವಾರ) ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧದ ಪಂದ್ಯದೊಂದಿಗೆ ಪ್ರಾರಂಭಿಸಲಿದೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಭಾನುವಾರದ ಏಷ್ಯಾ ಕಪ್ ಹಣಾಹಣಿಯು ಬಹು ನಿರೀಕ್ಷಿತ ಪಂದ್ಯವಾಗಿದ್ದು, ಇಬ್ಬರೂ ಸಾಂಪ್ರದಾಯಿಕ ಎದುರಾಳಿಗಳು ಪರಸ್ಪರರ ವಿರುದ್ಧ ಸೆಣಸಲಿದ್ದಾರೆ.

Asia Cup 2022: ಟಿ20ಯಲ್ಲಿ ವಿಶೇಷ ದಾಖಲೆ ಸಾಧಿಸಲು ರೋಹಿತ್ ಶರ್ಮಾಗೆ ಬೇಕು 10 ರನ್Asia Cup 2022: ಟಿ20ಯಲ್ಲಿ ವಿಶೇಷ ದಾಖಲೆ ಸಾಧಿಸಲು ರೋಹಿತ್ ಶರ್ಮಾಗೆ ಬೇಕು 10 ರನ್

ಭಾರತವು 2021ರ ಟಿ20 ವಿಶ್ವಕಪ್ ಲೀಗ್ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಳ್ಳಲು ಎದುರು ನೋಡುತ್ತಿರುವಾಗ, ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡವು ತಮ್ಮ ಅದ್ಭುತ ಫಾರ್ಮ್ ಅನ್ನು ಮುಂದುವರಿಸಲು ನೋಡುತ್ತಿದೆ.

ಇದೇ ವೇಳೆ ರಿಷಭ್ ಪಂತ್ ಮತ್ತು ದಿನೇಶ್ ಕಾರ್ತಿಕ್ ಅವರನ್ನು ಆಡುವ 11ರ ಬಳಗದಲ್ಲಿ ಆಯ್ಕೆ ಮಾಡುವುದು ಭಾರತ ತಂಡಕ್ಕೆ ದೊಡ್ಡ ತಲೆನೋವಾಗಿದೆ ಎಂದು ಭಾರತದ ಕ್ರಿಕೆಟಿಗ ಚೇತೇಶ್ವರ ಪೂಜಾರ ಅಭಿಪ್ರಾಯಪಟ್ಟಿದ್ದಾರೆ.

ರಿಷಭ್ ಪಂತ್ ತಂಡದಲ್ಲಿ ಉತ್ತಮವಾಗಿ ಕಾಣುತ್ತಾರೆ

ರಿಷಭ್ ಪಂತ್ ತಂಡದಲ್ಲಿ ಉತ್ತಮವಾಗಿ ಕಾಣುತ್ತಾರೆ

ವಿಕೆಟ್ ಕೀಪರ್- ಬ್ಯಾಟ್ಸ್‌ಮನ್ ರಿಷಭ್ ಪಂತ್ ತಂಡದಲ್ಲಿ ಉತ್ತಮವಾಗಿ ಕಾಣುತ್ತಾರೆ, ಆದರೆ ದಿನೇಶ್ ಕಾರ್ತಿಕ್ ಐಪಿಎಲ್ 2022ರಲ್ಲಿ ತನ್ನ ಉತ್ತಮ ಪ್ರದರ್ಶನದ ನಂತರ ಈ ವರ್ಷ ತನ್ನನ್ನು ತಾನು ಫಿನಿಶರ್ ಆಗಿ ಮರುಶೋಧಿಸಿದ್ದಾನೆ.

ESPN Cricinfoನ ಟಿ20 Time:outನಲ್ಲಿ ಮಾತನಾಡುತ್ತಿದ್ದ ಚೇತೇಶ್ವರ ಪೂಜಾರ, "ಏಷ್ಯಾ ಕಪ್‌ನ ಪಾಕಿಸ್ತಾನ ವಿರುದ್ಧದ ಆರಂಭಿಕ ತಂಡದಲ್ಲಿ ದಿನೇಶ್ ಕಾರ್ತಿಕ್ ಮತ್ತು ರಿಷಭ್ ಪಂತ್‌ಗೆ ಸ್ಥಾನವಿದೆ ಎಂದು ಭಾವಿಸಿದರು ಮತ್ತು ನಂತರದ ತಂಡದೊಂದಿಗೆ ಹೋಗುವುದಾಗಿ ಹೇಳಿದ್ದಿ, ಪಂತ್ ಎಡಗೈ ಬ್ಯಾಟರ್ ಆಗಿರುವುದರಿಂದ ತಂಡದ ಸಮತೋಲನವನ್ನು ನೀಡುತ್ತದೆ," ಎಂದರು.

ಇಬ್ಬರ ಆಯ್ಕೆ ತಂಡದ ಮ್ಯಾನೇಜ್‌ಮೆಂಟ್‌ಗೆ ದೊಡ್ಡ ತಲೆನೋವು

ಇಬ್ಬರ ಆಯ್ಕೆ ತಂಡದ ಮ್ಯಾನೇಜ್‌ಮೆಂಟ್‌ಗೆ ದೊಡ್ಡ ತಲೆನೋವು

"ರಿಷಭ್ ಪಂತ್ ಮತ್ತು ದಿನೇಶ್ ಕಾರ್ತಿಕ್ ನಡುವಿನ ಆಯ್ಕೆ ತಂಡದ ಮ್ಯಾನೇಜ್‌ಮೆಂಟ್‌ಗೆ ದೊಡ್ಡ ತಲೆನೋವಾಗಿದೆ. ಏಕೆಂದರೆ ಇಬ್ಬರೂ ಟಿ20 ಸ್ವರೂಪದಲ್ಲಿ ನಿಜವಾಗಿಯೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನೀವು ನಂ.5ರಲ್ಲಿ ಬ್ಯಾಟ್ ಮಾಡಲು ಯಾರಾದರೂ ಬೇಕೇ ಅಥವಾ ನಂ. 6 ಅಥವಾ 7 ರಲ್ಲಿ ಬ್ಯಾಟ್ ಮಾಡುವ ಫಿನಿಶರ್ ಬೇಕೇ ಎಂಬುದು. ಹಾಗಾಗಿ ನಾನು ಹೇಳುತ್ತೇನೆ, ನಿಮಗೆ ನಂ. 5ರಲ್ಲಿ ರಿಷಭ್ ಪಂತ್ ಉತ್ತಮ ಆಯ್ಕೆ. ಆದರೆ ನೀವು 10 ಅಥವಾ 20 ಎಸೆತಗಳನ್ನು ಆಡುವ ಮತ್ತು 40-50 ರನ್ ನೀಡುವ ಉತ್ತಮ ಫಿನಿಶರ್‌ನೊಂದಿಗೆ ಬ್ಯಾಟಿಂಗ್ ಲೈನ್-ಅಪ್ ಹೊಂದಲು ಬಯಸಿದರೆ, ದಿನೇಶ್ ಕಾರ್ತಿಕ್ (ಡಿಕೆ) ಉತ್ತಮ ಆಯ್ಕೆ ಎಂದು ನಾನು ಭಾವಿಸುತ್ತೇನೆ," ಎಂದು ಅಭಿಪ್ರಾಯಪಟ್ಟರು.

ಭಾರತಕ್ಕೆ ಫಿನಿಶರ್ ಪಾತ್ರದಲ್ಲಿ ಹಾರ್ದಿಕ್ ಪಾಂಡ್ಯ

ಭಾರತಕ್ಕೆ ಫಿನಿಶರ್ ಪಾತ್ರದಲ್ಲಿ ಹಾರ್ದಿಕ್ ಪಾಂಡ್ಯ

"ವೈಯಕ್ತಿಕವಾಗಿ ನಾನು ಭಾವಿಸುತ್ತೇನೆ, ತಂಡದ ಮ್ಯಾನೇಜ್‌ಮೆಂಟ್‌ ಅನ್ನು ತಿಳಿದುಕೊಳ್ಳುವುದು ಮತ್ತು ತಂಡದ ಸುತ್ತ ವಿಷಯಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ತಿಳಿದುಕೊಳ್ಳುವುದರಿಂದ, ಅವರು ರಿಷಭ್ ಪಂತ್ ಅವರೊಂದಿಗೆ ಹೋಗಬಹುದು ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಅವನು ಎಡಗೈ ಆಟಗಾರ ಮತ್ತು ಎಡ-ಬಲ ಸಂಯೋಜನೆಯೊಂದಿಗೆ ತಂಡಕ್ಕೆ ಸ್ವಲ್ಪ ಸಮತೋಲನವನ್ನು ನೀಡುತ್ತಾನೆ," ಎಂದು ಚೇತೇಶ್ವರ ಪೂಜಾರ ತಿಳಿಸಿದರು.

ದಿನೇಶ್ ಕಾರ್ತಿಕ್ ಅನುಪಸ್ಥಿತಿಯಲ್ಲಿ ಭಾರತಕ್ಕೆ ಫಿನಿಶರ್ ಪಾತ್ರವನ್ನು ಯಾರು ನಿರ್ವಹಿಸಬಹುದು ಎಂದು ಕೇಳಿದಾಗ, ಸರಿಯಾದ ಅಭ್ಯರ್ಥಿ ಹಾರ್ದಿಕ್ ಪಾಂಡ್ಯ ಎಂದು ಚೇತೇಶ್ವರ ಪೂಜಾರ ಭಾವಿಸಿಸಿದ್ದು, ರಿಷಭ್ ಪಂತ್ ಅವರು ಅದನ್ನು ನಿರ್ವಹಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುವುದರಿಂದ ಆ ಪಾತ್ರವನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಹಾರ್ದಿಕ್ ಒಂದನೇ ಬಾಲ್‌ನಿಂದ ಹೊಡೆಯಬಲ್ಲ

ಹಾರ್ದಿಕ್ ಒಂದನೇ ಬಾಲ್‌ನಿಂದ ಹೊಡೆಯಬಲ್ಲ

"ನಾನು ಫಿನಿಶರ್ ಪಾತ್ರಕ್ಕೆ ಹಾರ್ದಿಕ್ ಪಾಂಡ್ಯಗೆ ಆದ್ಯತೆ ನೀಡುತ್ತೇನೆ. ಏಕೆಂದರೆ ಅವನು ಒಂದನೇ ಬಾಲ್‌ನಿಂದ ಹೊಡೆಯಬಲ್ಲವನು ಮತ್ತು ಅವನ ಸ್ಟ್ರೈಕ್ ರೇಟ್ 150ಕ್ಕಿಂತ ಹೆಚ್ಚಿದೆ. ರಿಷಭ್ ಆ ಕೆಲಸವನ್ನು ಮಾಡಬಹುದೆಂದು ನಾನು ಭಾವಿಸುವುದಿಲ್ಲ. ಏಕೆಂದರೆ ಅವರಿಗೆ ಸ್ವಲ್ಪ ಸಮಯ ಬೇಕಾಗುತ್ತದೆ ಮತ್ತು ರಿಷಭ್ ಬ್ಯಾಟಿಂಗ್‌ಗೆ ಬಂದರೆ, ಅದು ಎಲ್ಲೋ 10 ಅಥವಾ 12 ಓವರ್‌ಗಳಾಗಿರಬೇಕು ಮತ್ತು ಅವರು 8-10 ಓವರ್‌ಗಳನ್ನು ಪಡೆದರೆ, ಅವರು ಅದಕ್ಕಿಂತ 50 ಅಥವಾ ಸ್ವಲ್ಪ ಹೆಚ್ಚು ಗಳಿಸಬಹುದು," ಎಂದು ಕ್ರಿಕೆಟಿಗ ಚೇತೇಶ್ವರ ಪೂಜಾರ ವಿವರಿಸಿದರು.

Story first published: Sunday, August 28, 2022, 17:41 [IST]
Other articles published on Aug 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X