ಟಾಪ್ ಆರ್ಡರ್ ವೈಫಲ್ಯ, ಎಡವಿದ ಟೀಂ ಇಂಡಿಯಾ
40 ಓವರ್ಗಳಲ್ಲಿ 250 ರನ್ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯುವಲ್ಲಿ ವಿಫಲಗೊಂಡಿತು. ಶಿಖರ್ ಧವನ್, ಶುಭಮನ್ ಗಿಲ್ ಸಿಂಗಲ್ ಡಿಜಿಟ್ಗೆ ಔಟಾದ್ರೆ, ರುತುರಾಜ್ ಗಾಯಕ್ವಾಡ್ ಹಾಗೂ ಇಶಾನ್ ಕಿಶನ್ ಉತ್ತಮ ಆಟವಾಡುವಲ್ಲಿ ಎಡವಿದ್ರು. ಆದ್ರೆ ಶ್ರೇಯಸ್ ಅಯ್ಯರ್ 37 ಎಸೆತಗಳಲ್ಲಿ 50ರನ್ ಕಲೆಹಾಕಿ ತಂಡಕ್ಕೆ ಆಧಾರವಾದ್ರು.
ಪಂದ್ಯದ ಅಂತ್ಯದವರೆಗೂ ಅಜೇಯರಾಗಿ ಉಳಿದ ಸಂಜು ಸ್ಯಾಮ್ಸನ್ ಅದ್ಭುತ ಆಟವಾಡಿದ್ರೂ ಸಹ ತಂಡವನ್ನ ಗೆಲುವಿನ ದಡ ತಲುಪಿಸುವಲ್ಲಿ ಎಡವಿದ್ರು. 63 ಎಸೆತಗಳಲ್ಲಿ ಅಜೇಯ 83ರನ್ ಕಲೆಹಾಕಿದ ಸಂಜುಗೆ ಶಾರ್ದೂಲ್ ಠಾಕೂರ್ 33ರನ್ ಕಲೆಹಾಕಿ ಸಾಥ್ ಕೊಟ್ಟರೂ ಭಾರತ ಗೆಲುವಿನ ಗೆರೆ ದಾಟಲಿಲ್ಲ. 9ರನ್ಗಳಿಂದ ಪಂದ್ಯ ಸೋತ ಭಾರತದ ಈ ಹಿನ್ನಡೆಗೆ ಪ್ರಮುಖ ನಾಲ್ಕು ಕಾರಣಗಳೇನು ಎಂಬುದನ್ನ ಈ ಕೆಳಗೆ ಕಾಣಬಹುದು.
ಕ್ಯಾಚ್ಗಳನ್ನ ಕೈ ಚೆಲ್ಲಿದ ಭಾರತ
ಭಾರತ ತಂಡದ ಸೋಲಿಗೆ ಪ್ರಮುಖ ಕಾರಣ ಅವರು ಕ್ಯಾಚ್ಗಳನ್ನು ಕೈಬಿಟ್ಟಿರುವುದು. ಅವೇಶ್ ಖಾನ್ ಎಸೆದ ಏಕೈಕ ಓವರ್ ನಲ್ಲಿ ಮೊಹಮ್ಮದ್ ಶಮಿ ಮತ್ತು ರವಿ ಬಿಷ್ಣೋಯಿ ಸತತ 2 ಕ್ಯಾಚ್ ಕೈ ಚೆಲ್ಲಿದರು ಮತ್ತು ಅದೇ ಓವರ್ನಲ್ಲಿ ಇಶಾನ್ ಕಿಶನ್ ಫೀಲ್ಡಿಂಗ್ ಲೈನ್ನಿಂದ ಬೌಂಡರಿ ತಪ್ಪಿಸಿದರು. ಇದರಿಂದಾಗಿ ಆ ಓವರ್ನಲ್ಲಿ 16 ರನ್ಗಳು ಅನಗತ್ಯವಾಗಿ ಹೋಯಿತು. ಇದರಲ್ಲಿ ದಕ್ಷಿಣ ಆಫ್ರಿಕಾ 10 ಹೆಚ್ಚುವರಿ ರನ್ ಗಳಿಸಿದ್ದು ಭಾರತದ ಸೋಲಿಗೆ ಕಾರಣ ಎಂದು ಪರಿಗಣಿಸಲಾಗಿದೆ.
ಆರಂಭಿಕರ ಕಳಪೆ ಬ್ಯಾಟಿಂಗ್, ಉತ್ತಮ ಆರಂಭ ಪಡೆಯಲಿಲ್ಲ!
ಅದೇ ರೀತಿ ಭಾರತ ತಂಡದ ಆರಂಭಿಕರು ಕಳಪೆ ಆಟವಾಡಿದರು. ಶಿಖರ್ ಧವನ್ 4 ರನ್ ಮತ್ತು ಶುಭಮನ್ ಗಿಲ್ 3 ರನ್ ಗಳಿಸಿ ಔಟಾದರು. ಇನ್ನು ರುತುರಾಜ್ ಗಾಯಕ್ವಾಡ್ ಟೆಸ್ಟ್ ಇನ್ನಿಂಗ್ಸ್ ನಂತೆ ಆಡಿದರು. 42 ಎಸೆತಗಳಲ್ಲಿ 19 ರನ್ ಕಲೆಹಾಕಿದ ಗಾಯಕ್ವಾಡ್ ಆಟದಲ್ಲಿ ಯಾವುದೇ ತಪ್ಪಿಲ್ಲವಾದ್ರೂ, ಅವರ ಹೋರಾಟ 19 ರನ್ ಗೆ ಮುಕ್ತಾಯಗೊಂಡಿದ್ದು, ಭಾರತಕ್ಕೆ ಭಾರೀ ಹಿನ್ನಡೆಯಾಯಿತು. ಇನ್ನು ಇಶಾನ್ ಕಿಶನ್ ಕೂಡ 37 ಎಸೆತಗಳಲ್ಲಿ 20 ರನ್ಗಳನ್ನ ಕಲೆಹಾಕಿ ವಿಕೆಟ್ ಒಪ್ಪಿಸಿದ್ರು. ಆದ್ರೆ ಇವರಿಬ್ಬರಿಗೆ ಹೋಲಿಸಿದ್ರೆ, ಶಾರ್ದೂಲ್ ಠಾಕೂರ್ ಕೊಂಚ ವೇಗವಾಗಿ 33 ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದ್ದನ್ನ ಕಾಣಬಹುದು.
ಭಾರತ vs ದ. ಆಫ್ರಿಕಾ: ಸಂಜು ಸ್ಯಾಮ್ಸನ್ ಹೋರಾಟ ವ್ಯರ್ಥ: ಧವನ್ ಪಡೆಗೆ ಸೋಲಿನ ಕಹಿ
39ನೇ ಓವರ್ನಲ್ಲಿ ಸಂಜು ಸ್ಯಾಮ್ಸನ್ಗೆ ಸ್ಟ್ರೈಕ್ ಸಿಗಲಿಲ್ಲ
ಪಂದ್ಯದ 38.3ನೇ ಓವರ್ನಲ್ಲಿ ಅವೇಶ್ ಖಾನ್ ನಾಲ್ಕು ಎಸೆತದಲ್ಲಿ 2 ರನ್ ಗಳಿಸಿದರು. ಆ ಓವರ್ನಲ್ಲಿ ಕೇವಲ 7 ರನ್ಗಳು ಬಂದವು. ಅವೇಶ್ ಖಾನ್ 4 ಎಸೆತಗಳನ್ನು ಎದುರಿಸಿ ವ್ಯರ್ಥವಾದರು. ಒಂದು ವೇಳೆ ಸಿಂಗಲ್ ತೆಗೆದುಕೊಂಡು ಸಂಜು ಸ್ಯಾಮ್ಸನ್ಗೆ ನೀಡಿದ್ದರೂ ಸುಲಭವಾಗಿ ಸಂಜು ಹೆಚ್ಚುವರಿಯಾಗಿ 10 ರನ್ ಗಳಿಸುತ್ತಿದ್ದರು. ಈ ಮೂಲಕ ಟೀಂ ಇಂಡಿಯಾ ಅತ್ಯಂತ ಸುಲಭವಾಗಿಯೇ ಪಂದ್ಯವನ್ನ ಗೆದ್ದು ಬಿಡುತ್ತಿತ್ತು.
ತಂಡದ ಆಯ್ಕೆಯಲ್ಲಿಯೇ ಎಡವಟ್ಟು
ಅದೇ ರೀತಿ ಇಂದಿನ ಪಂದ್ಯದಲ್ಲಿ ಭಾರತ ತಂಡ ಬ್ಯಾಟ್ಸ್ಮನ್ಗಳಿಲ್ಲದೆ ಕೇವಲ 6 ಬ್ಯಾಟ್ಸ್ಮನ್ಗಳು ಮತ್ತು 5 ಬೌಲರ್ಗಳನ್ನು ಹೊಂದಿತ್ತು. ಇದು ಕೂಡ ಭಾರತದ ಸೋಲಿಗೆ ಒಂದು ಕಾರಣವಾಗಿದೆ. ಆಲ್ರೌಂಡರ್ ಶಹಬಾಜ್ ಅಹ್ಮದ್ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿಲ್ಲ ಮತ್ತು ರವಿ ಬಿಷ್ನೋಯಿ ಅವರನ್ನ ಸೇರಿಸಿಕೊಂಡು ಇಬ್ಬರು ಸ್ಪಿನ್ನರ್ಗಳನ್ನ ಭಾರತ ಆಡಿಸಿದ್ದು ಹೆಚ್ಚುವರಿ ಬ್ಯಾಟರ್ ಇಲ್ಲದಂತಾಗಿ ಹಿನ್ನಡೆಯಾಗಿದೆ.