ಭಾರತದ ಬ್ಯಾಟಿಂಗ್ ಕುಸಿತಕ್ಕೆ ರಹಾನೆ ಕಾರಣ?
ಲುಂಗಿ ಎನ್ಗಿಡಿ ಎಸೆತದಲ್ಲಿ ರಹಾನೆ 48 ರನ್ಗಳಿಗೆ ಔಟಾದರು. ಇದಕ್ಕೂ ಮೊದಲು ಅಜೇಯ 122ರನ್ ಗಳಿಸಿದ್ದ ರಾಹುಲ್ ಕೇವಲ ಒಂದು ರನ್ ಗಳಿಸಿ ವಿಕೆಟ್ ಒಪ್ಪಿಸುತ್ತಿದ್ದಂತೆ ಭಾರತದ ಬ್ಯಾಟ್ಸ್ಮನ್ಗಳ ಪೆವಿಲಿಯನ್ ಪರೇಡ್ ಆರಂಭವಾಯಿತು.
ಭಾರತದ ಬ್ಯಾಟಿಂಗ್ ದೊಡ್ಡ ಮಟ್ಟಿಗೆ ಕುಸಿತ ಕಾಣಲು ಅಜಿಂಕ್ಯ ರಹಾನೆ ಕಾರಣ ಎಂಬುದು ಭಾರತದ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಆರೋಪಿಸಿದ್ದಾರೆ. ರಾಹುಲ್ ಔಟಾದ ಬಳಿಕ ತಂಡದ ಬೆನ್ನಲುಬು ಆಗಿ ರಹಾನೆ ಆಡಬೇಕಿತ್ತು. ಆದರೆ ಅಜಿಂಕ್ಯ ರಹಾನೆ ಸುಲಭವಾಗಿ ಲುಂಗಿ ಎನ್ಗಿಡಿಗೆ ವಿಕೆಟ್ ಒಪ್ಪಿಸಿದ್ರು. ಇದಾದ ಬಳಿಕ ರಿದಂನಲ್ಲಿ ಬೌಲ್ ಮಾಡಿದ ಎನ್ಗಿಡಿ 6 ವಿಕೆಟ್ ಕಬಳಿಸಿ ಭಾರತೀಯರ ಕುಸಿತಕ್ಕೆ ಕಾರಣವಾದ್ರು.
ಇಂಗ್ಲೆಂಡ್ಗೆ ಹೀನಾಯ ಸೋಲು: ''ತುಂಬಾ ಮುಜುಗರ ಆಗಿದೆ'' ಎಂದ ಮೈಕಲ್ ವಾನ್!
ರಹಾನೆ ಆರಂಭದಲ್ಲಿಯೂ ಸ್ವಲ್ಪ ಎಚ್ಚರ ತಪ್ಪಿದರು: ಬಂಗಾರ್
ಸ್ಟಾರ್ ಸ್ಪೋರ್ಟ್ಸ್ನಲ್ಲಿ ಮಾತನಾಡಿದ ಸಂಜಯ್ ಬಂಗಾರ್, "ಅವರು (ರಹಾನೆ) ಆರಂಭದಲ್ಲಿ ಸ್ವಲ್ಪ ಎಚ್ಚರದಿಂದಿದ್ದರು, ಅವರು ಚೆಂಡಿನ ಮೇಲೆ ಕಣ್ಣಿಟ್ಟಿದ್ದರು, ಆದ್ರೆ ಅವರು ಎಚ್ಚರ ತಪ್ಪಿದರು. ಹೀಗಾಗಿಯೇ ಕ್ರೀಸ್ನಲ್ಲಿ ಉಳಿಯಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.
ರಹಾನೆ-ರಾಹುಲ್ ನಡುವೆ ಉತ್ತಮ ಜೊತೆಯಾಟ ಇತ್ತು
ಅಂದಹಾಗೆ, ರಾಹುಲ್ ಜೊತೆ 79 ರನ್ ಜೊತೆಯಾಟವನ್ನು ಹಂಚಿಕೊಳ್ಳುವ ಮೂಲಕ ರಹಾನೆ ಭಾರತದ ಸ್ಕೋರ್ ಹೆಚ್ಚಿಸಿದರು. ಇಬ್ಬರೂ ಬ್ಯಾಟ್ಸ್ಮನ್ಗಳು ಉತ್ತಮ ಶಿಸ್ತನ್ನು ಪ್ರದರ್ಶಿಸಿದ್ರು. ಆದರೆ ಅದು ಮಂಗಳವಾರ ಮುರಿದುಬಿತ್ತು. ಭಾರತ 7 ವಿಕೆಟ್ ನಷ್ಟಕ್ಕೆ ಕೇವಲ 55 ರನ್ ಸೇರಿಸಿತು ಮತ್ತು ಶಾರ್ದೂಲ್ ಠಾಕೂರ್ 4 ರನ್, ಆರ್ ಅಶ್ವಿನ್ 4 ರನ್ ಮತ್ತು ರಿಷಬ್ ಪಂತ್ 8 ರನ್ ಗಳಿಸಿ ಔಟಾದರು. ಲುಂಗಿ ಎನ್ಗಿಡಿ 71ಕ್ಕೆ 6 ವಿಕೆಟ್ ಪಡೆದರು, ಕಗಿಸೊ ರಬಾಡ ಮಂಗಳವಾರ ಮೂರು ವಿಕೆಟ್ ಪಡೆದರು.
ಇದಕ್ಕೆ ಉತ್ತರವಾಗಿ ದಕ್ಷಿಣ ಆಫ್ರಿಕಾ ಭಾರತದ ಬೌಲಿಂಗ್ ದಾಳಿಗೆ ನಲುಗಿ 197 ರನ್ಗಳಿಗೆ ಆಲೌಟ್ ಆಗಿದ್ದು 130 ರನ್ಗಳ ಹಿನ್ನಡೆ ಅನುಭವಿಸಿದೆ.