ಬೌಲರ್ಗಳ ಜೊತೆ ಕೋಚ್ಗಳ ಚರ್ಚೆ
ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಎಲ್ಲಾ ಮಾದರಿಯಲ್ಲಿ ಸತತ 9ನೇ 50 ಪ್ಲಸ್ ರನ್ ಬಾರಿಸಿದ್ದಾರೆ. ಇದರಿಂದಾಗಿ ಮುಲ್ತಾನ್ನಲ್ಲಿ ನಡೆಯುತ್ತಿರುವ ಂಊರು ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಕಿಸ್ತಾನ 2-0 ಅಂತರದಿಂದ ವಶಕ್ಕೆ ಪಡೆದುಕೊಂಡಿದೆ. ಮೊದಲ ಪಂದ್ಯದಲ್ಲಿ ಭರ್ಜರಿ ಶತಕ ಗಳಿಸಿದ ಬಳಿಕ ಅಜಂ ಎರಡನೇ ಪಂದ್ಯದಲ್ಲಿಯೂ 93 ಎಸೆತಗಳಲ್ಲಿ 77 ರನ್ಗಳನ್ನು ಬಾರಿಸಿ ಮಿಂಚಿದ್ದಾರೆ. ಆದರೆ ಫೀಲ್ಡಿಂಗ್ನ ಸಂದರ್ಭದಲ್ಲಿ ನಡೆದುಕೊಂಡ ವಿವಾದಾತ್ಮಕ ರೀತಿಯಿಂದಾಗಿ ಪಾಕಿಸ್ತಾನ ತಂಡಕ್ಕೆ ದುಬಾರಿಯಾಯಿತು. ಎದುರಾಳಿ ವೆಸ್ಟ್ ಇಂಡೀಸ್ ತಂಡಕ್ಕೆ ಐದು ರನ್ಗಳನ್ನು ದಂಡದ ರೂಪದಲ್ಲಿ ನೀಡಲಾಯಿತು.
ಲೆಂತ್ನಲ್ಲಿ ಬದಲಾವಣೆ, ಯಾರ್ಕರ್ ದಾಳಿ
ಮೊದಲ ಪಂದ್ಯದಲ್ಲಿ ಭಾರತದ ಬೌಲಿಂಗ್ ದಾಳಿ ದುರ್ಬಲವೆನಿಸಲು ಕಾರಣವಾಗಿದ್ದು ಯಾರ್ಕರ್ ಎಸೆತಗಳ ಕೊರತೆ. ಹರ್ಷಲ್ ಪಟೇಲ್ ಎಂದಷ್ಟು ಯಾರ್ಕರ್ ಎಸೆತಗಳನ್ನು ಪ್ರಯತ್ನಿಸಿದರೂ ಅದು ಫುಲ್ಟಾಸ್ ಆಗಿ ಪರಿವರ್ತನೆಯಾಗಿತ್ತು. ವಿಪರ್ಯಾಸವೆಂದರೆ ಭುವನೇಶ್ವರ್ ಕುಮಾರ್ ಹಾಗೂ ಆವೇಶ್ ಖಾನ್ ಅವರಿಂದ ಯಾರ್ಕರ್ ಎಸೆತಗಳೇ ಬರಲಿಲ್ಲ. ಹೀಗಾಗಿ ಎರಡನೇ ಪಂದ್ಯದಲ್ಲಿ ಕೋಚ್ ದ್ರಾವಿಡ್ ಅವರು ಬೌಲರ್ಗಳಿಂದ ಹೆಚ್ಚಿನ ಯಾರ್ಕರ್ ನಿರೀಕ್ಷಿಸುತ್ತಿದ್ದಾರೆ.
ಮಿಲ್ಲರ್ ಮಿರುದ್ಧ ಚಾಹಲ್ ಬಳಕೆ
ಕಳೆದ ಪಂದ್ಯದಲ್ಲಿ ನಾಯಕ ರಿಷಭ್ ಪಂತ್ ಬೌಲರ್ಗಳನ್ನು ಬಳಸಿಕೊಂಡ ಬಗ್ಗೆ ಚರ್ಚೆಗಳಿ ನಡೆದಿದೆ. ಅದರಲ್ಲೂ ಐಪಿಎಲ್ನಲ್ಲಿ ಪರ್ಪಲ್ ಕ್ಯಾಪ್ ಧರಿಸಿದ ಯುಜುವೇಂದ್ರ ಚಾಹಲ್ ಅವರನ್ನು ಬಳಸಿಕೊಂಡ ರೋತಿಗೆ ಭಾರೀ ಟೀಕೆಗಳು ವ್ಯಕ್ತವಾಗಿದೆ. ಚಾಹಲ್ ಕೇವಲ 2.1 ಓವರ್ಗಳನ್ನು ಮಾತ್ರವೇ ಬಳಸಿದ್ದರು. ಹೀಗಾಗಿ ಈ ಪಂದ್ಯದಲ್ಲಿ ಅಭಿಮಾನಿಗಳು ಕಳೆದ ಪಂದ್ಯದಲ್ಲಿ ಅಜೇಯವಾಗುಳಿದಿದ್ದ ಡೇಚಿಡ್ ಮಿಲ್ಲರ್ ವಿರುದ್ಧ ಚಾಹಲ್ ಅವರನ್ನು ಬಳಸಲು ನಿರೀಕ್ಷಿಸುತ್ತಿದ್ದಾರೆ.
ಆಪ್ತ ಸ್ನೇಹಿತನನ್ನು ಬಳಸಲು ಸಲಹೆ
ಕಳೆದ ಪಂದ್ಯದಲ್ಲಿ ಭಾರತದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಬೌಲಿಂಗ್ನಲ್ಲಿ ಮಿಂಚಲು ವಿಫಲವಾದರು. ಬೌಲಿಂಗ್ ಮಾಡಿದ ಒಂದು ಓವರ್ನಲ್ಲಿ ಹಾರ್ದಿಕ್ 18 ರನ್ ಬಿಟ್ಟುಕೊಟ್ಟರು. ಹಾಗಿದ್ದರೂ ಎರಡನೇ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ಡೇವಿಡ್ ಮಿಲ್ಲರ್ ವಿರುದ್ಧ ಬಳಸಬಹುದು ಎಂಬುದು ಲೆಕ್ಕಾಚಾರ. ಐಪಿಎಲ್ನಲ್ಲಿ ಗುಜರಾತ್ ಟೈಟನ್ಸ್ ತಂಡದ ಎರಡು ಪ್ರಮುಖ ಆಧಾರ ಸ್ಥಂಬಗಳಾಗಿದ್ದ ಹಾರ್ದಿಕ್ ಪಾಂಡ್ಯ ಹಾಗೂ ಡೇವಿಡ್ ಮಿಲ್ಲರ್ ಪರಸ್ಪರ ಒಪ್ಪರನ್ನೊಬ್ಬರು ಚೆನ್ನಾಗಿ ಅರಿತುಕೊಂಡಿದ್ದಾರೆ. ಇದು ಭಾರತೀಯ ತಂಡಕ್ಕೆ ಲಾಭವಾಗಬಹುದು.