ಐದು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ
ಹೊಸ ಬಾಲ್ನಲ್ಲಿ ಉತ್ತಮವಾಗಿ ಆರಂಭಗೊಂಡು, ಪವರ್ಪ್ಲೇಯಲ್ಲಿ ಮೂರು ವಿಕೆಟ್ಗಳನ್ನು ಕಬಳಿಸಿದ ನಂತರವೂ, ಭಾರತ ತಂಡ ಹೆಂಡ್ರಿಕ್ ಕ್ಲಾಸೆನ್ ಮತ್ತು ನಾಯಕ ತೆಂಬಾ ಬವುಮಾ ನಡುವಿನ 41 ಎಸೆತಗಳಲ್ಲಿ ಸ್ಥಿರವಾದ 64 ರನ್ಗಳ ಜೊತೆಯಾಟವನ್ನು ಬೇಗನೆ ಮುರಿಯಲಾಗಲಿಲ್ಲ.
ಈ ಇಬ್ಬರು ಆಟಗಾರರು ದಕ್ಷಿಣ ಆಫ್ರಿಕಾದ ಇನ್ನಿಂಗ್ಸ್ ಅನ್ನು ಸ್ಥಿರಗೊಳಿಸಿದಾಗ ಪಂದ್ಯವು ಆವೇಗವನ್ನು ಕಳೆದುಕೊಂಡಿತು. 13ನೇ ಓವರ್ನ ಎರಡನೇ ಎಸೆತದಲ್ಲಿ ತೆಂಬಾ ಬವುಮಾ ಔಟಾದ ನಂತರ, ಕ್ಲಾಸೆನ್ ಬ್ಯಾಟಿಂಗ್ ಜವಾಬ್ದಾರಿ ತೆಗೆದುಕೊಂಡರು ಮತ್ತು ದಕ್ಷಿಣ ಆಫ್ರಿಕಾವನ್ನು ಗೆಲುವಿನ ಗಡಿ ದಾಟಿಸಿದರು. ಆ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದರು.
40 ಓವರ್ವರೆಗೆ ಹೋರಾಡುವುದು ಹೇಗೆ ಎಂಬುದನ್ನು ಅರ್ಥ ಮಾಡಿಸಬೇಕು
"ಕ್ಲಾಸೆನ್-ಬವುಮಾ ಉತ್ತಮ ಜೊತೆಯಾಟವನ್ನು ನಿರ್ಮಿಸುತ್ತಿದ್ದಾಗ ಭಾರತ ತಂಡದಲ್ಲಿ ಜೋಶ್ ಕಡಿಮೆಯಾಗುತ್ತಿದೆ ಎಂದು ನೀವು ಭಾವಿಸಬಹುದು, ಇದು ಮೈದಾನದಲ್ಲಿ ಸ್ಪಷ್ಟವಾಗಿತ್ತು. ಕೋಚ್ ರಾಹುಲ್ ದ್ರಾವಿಡ್ ಮತ್ತವರ ಕಂಪನಿಯು ಪರಿಹರಿಸಬೇಕಾದ ವಿಷಯಗಳು ಮತ್ತು ಅದನ್ನು ತ್ವರಿತವಾಗಿ ಮಾಡಬೇಕಾಗಿದೆ. ಏಕೆಂದರೆ 3ನೇ ಟಿ20 ಮೊದಲು ನಡುವೆ ಕೇವಲ ಒಂದು ದಿನವಿದ್ದು, ದ್ರಾವಿಡ್ ಅವರು ಮತ್ತೆ ತಂಡವಾಗಿ ಗುಂಪುಗೂಡಬೇಕು, ಕೆಲವು ಕಠಿಣ ಸಂಭಾಷಣೆಗಳನ್ನು ನಡೆಸಬೇಕು. 40 ಓವರ್ಗಳವರೆಗೆ ಹೋರಾಡುವುದು ಹೇಗೆ ಎಂಬುದನ್ನು ಆಟಗಾರರಿಗೆ ಅರ್ಥ ಮಾಡಿಸಬೇಕು," ಎಂದು ಜಹೀರ್ ಖಾನ್ ಕ್ರಿಕ್ಬಜ್ನೊಂದಿಗಿನ ಚರ್ಚೆಯಲ್ಲಿ ಹೇಳಿದರು.
ಮೊದಲ ಓವರ್ನಲ್ಲಿ ಹೆಂಡ್ರಿಕ್ಸ್ನ ಔಟ್
148/6 ಸಾಧಾರಣ ಮೊತ್ತವನ್ನು ರಕ್ಷಿಸುವ ಭಾರತಕ್ಕೆ ಆರಂಭದಲ್ಲಿಯೇ ವಿಕೆಟ್ಗಳ ಅಗತ್ಯವಿತ್ತು. ಮೊದಲ ಓವರ್ನಲ್ಲಿ ಹೆಂಡ್ರಿಕ್ಸ್ನ ಔಟಾಗಿ ಹೋದ ಹೋದ ನಂತರ ಭುವನೇಶ್ವರ್ ಕುಮಾರ್, ಡ್ವೈನ್ ಪ್ರಿಟೋರಿಯಸ್ ಅವರನ್ನು ಔಟ್ ಮಾಡಿದರು. ಮೊದಲ ಪಂದ್ಯದಂತೆ ಸಿಕ್ಸರ್ ಬಾರಿಸಲು ಪ್ರಯತ್ನಿಸಿದರು, ಆದರೆ ಪ್ರತಿಫಲವನ್ನು ಪಡೆಯಲಿಲ್ಲ. ಏಕೆಂದರೆ ಪ್ರಿಟೋರಿಯಸ್ ಅನುಭವಿ ವೇಗದ ಬೌಲರ್ನ ನಾಕಲ್ಬಾಲ್ನಿಂದ ಮೋಸಗೊಂಡರು.
ಆನತರ ಆರನೇ ಓವರ್ನಲ್ಲಿ ಭುವನೇಶ್ವರ್ ಕುಮಾರ್ ತಮ್ಮ ಮೂರನೇ ವಿಕೆಟ್ ಅನ್ನು ನಿಪ್-ಬ್ಯಾಕ್ನೊಂದಿಗೆ ಅಪಾಯಕಾರಿ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಅವರನ್ನು ಔಟ್ ಮಾಡಿದರು. ಫೀಲ್ಡಿಂಗ್ ನಿರ್ಬಂಧಗಳನ್ನು ತೆಗೆದುಹಾಕಿದ ನಂತರವೂ ಹೆಚ್ಚು ಸ್ಕೋರ್ ಮಾಡುವುದರ ಮೇಲೆ ನಿಯಂತ್ರಣ ಹೇರಲು ಭಾರತ ಪ್ರಯತ್ನಿಸಿತು. ಪವರ್ಪ್ಲೇ ನಂತರ ದಕ್ಷಿಣ ಆಫ್ರಿಕಾ ತಂಡವನ್ನು ಕೇವಲ 36/3ಕ್ಕೆ ನಿಯಂತ್ರಿಸಿತ್ತು.
ಉಳಿದ ಮೂರೂ ಪಂದ್ಯಗಳನ್ನು ಸತತವಾಗಿ ಗೆಲ್ಲಬೇಕಿದೆ
"ಮೊದಲ ಪಂದ್ಯದಲ್ಲಿ ಭಾರತವು ಇಕ್ಕಟ್ಟಿನ ಪರಿಸ್ಥಿತಿಯಲ್ಲಿತ್ತು. ಆದರೆ ಎರಡನೇ ಪಂದ್ಯದಲ್ಲಿ ಭಾರತದ ಬೌಲರ್ಗಳು ಚೆಂಡಿನೊಂದಿಗೆ ಉತ್ತಮ ಆರಂಭವನ್ನು ಹೊಂದಿದ್ದರು. ಭುವನೇಶ್ವರ್ ಕುಮಾರ್ ಅವರು ಅತ್ಯುತ್ತಮವಾಗಿ ಬೌಲ್ ಮಾಡಿದರು, ಆದರೆ ಅವರು ಪಂದ್ಯಗಳನ್ನು ಗೆಲ್ಲಿಸಿಕೊಂಡು ಬರಲು ಸಾಧ್ಯವಾಗಲಿಲ್ಲ".
ದಕ್ಷಿಣ ಆಫ್ರಿಕಾ ನಾಯಕ ಟೆಂಬಾ ಬವುಮಾ ಮತ್ತು ಅವರ ತಂಡಕ್ಕೆ 0-2 ಮುನ್ನಡೆಯನ್ನು ಬಿಟ್ಟುಕೊಟ್ಟ ನಂತರ ಭಾರತ ತಂಡವು ಜೂನ್ 14, ಮಂಗಳವಾರದಂದು ತಮ್ಮ ಮೊದಲ ಪಂದ್ಯ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ ಮತ್ತು ಈ ಸರಣಿಯನ್ನು ವಶಪಡಿಸಿಕೊಳ್ಳಬೇಕಾದರೆ ಉಳಿದ ಮೂರೂ ಪಂದ್ಯಗಳನ್ನು ಸತತವಾಗಿ ಗೆಲ್ಲಬೇಕಿದೆ.