ಟೀಂ ಇಂಡಿಯಾಕ್ಕೆ ಬೇಕು ಹೆಚ್ಚುವರಿ ಬೌಲರ್
ತಂಡದಲ್ಲಿ ಶಹಬಾಜ್ ಅಹ್ಮದ್ ಮತ್ತು ದೀಪಕ್ ಚಾಹರ್ ಅವರಂತಹವರು ಇದ್ದರೂ, ಟೀಮ್ ಇಂಡಿಯಾ ಕೇವಲ ಐದು ಬೌಲಿಂಗ್ ಆಯ್ಕೆಗಳೊಂದಿಗೆ ಮೊದಲನೇ ಏಕದಿನ ಪಂದ್ಯವನ್ನಾಡಿದರು. ಆಲ್ ರೌಂಡರ್ ಶಾರ್ದೂಲ್ ಠಾಕೂರ್ ಮಾತ್ರ ತಮ್ಮ ಎಂಟು ಓವರ್ಗಳಿಂದ 2/35 ಅಂಕಗಳೊಂದಿಗೆ ತಂಡದ ಅತ್ಯುತ್ತಮ ಬೌಲರ್ ಆಗಿದ್ದರು.
ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ (1/39) ಕೂಡ ಆರ್ಥಿಕವಾಗಿ ಮಿಂಚಿದರು. ಆದಾಗ್ಯೂ, ಇತರ ಮೂವರು ಬೌಲರ್ಗಳಾದ ಮೊಹಮ್ಮದ್ ಸಿರಾಜ್ (0/49), ಅವೇಶ್ ಖಾನ್ (0/51) ಮತ್ತು ರವಿ ಬಿಷ್ಣೋಯ್ (1/69) ಉತ್ತಮ ಬೌಲಿಂಗ್ ಪ್ರದರ್ಶನ ನೀಡಲಿಲ್ಲ. ಟೀಮ್ ಇಂಡಿಯಾಗೆ ಬೇರೆ ಯಾವುದೇ ಬೌಲಿಂಗ್ ಆಯ್ಕೆಗಳಿಲ್ಲದ ಕಾರಣ, ಇವರನ್ನೇ ಕೊನೆಯವರೆಗೂ ಬೌಲಿಂಗ್ ಮಾಡಿಸಲಾಯಿತು.
ಭಾರತ ಎರಡನೇ ಪಂದ್ಯದಲ್ಲಿ ಹೆಚ್ಚುವರಿ ಬೌಲರ್ ಹೊಂದುವ ಬಗ್ಗೆ ಚಿಂತಿಸಬೇಕಿದೆ. ಕೇವಲ 5 ಬೌಲಿಂಗ್ ಆಯ್ಕೆಯೊಂದಿಗೆ ಆಡುವುದು ಈ ಸಮಯದಲ್ಲಿ ಪ್ರಯೋಜನಕ್ಕೆ ಬಾರದು, ನೀವು 6-7 ಬೌಲಿಂಗ್ ಆಯ್ಕೆಗಳನ್ನು ಹೊಂದಿರಬೇಕು ಎಂದು ವಾಸಿಂ ಜಾಫರ್ ಹೇಳಿದ್ದಾರೆ.
ಮತ್ತೊಮ್ಮೆ ಎಡವಿದ ವಿಂಡೀಸ್: 2ನೇ ಟಿ20 ಪಂದ್ಯದಲ್ಲಿಯೂ ಗೆದ್ದು ಬೀಗಿದ ಆಸ್ಟ್ರೇಲಿಯಾ
ಟೀಂ ಇಂಡಿಯಾ ಬ್ಯಾಟಿಂಗ್ ಶಕ್ತಿ ಹೆಚ್ಚಿಸಿಕೊಳ್ಳಬೇಕು
ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಆಡುವ ಹನ್ನೊಂದರ ಬಳಗವನ್ನು ಆಯ್ಕೆ ಮಾಡುವಲ್ಲಿ ಎಡವಿದ್ದು ಸೋಲಿಗೆ ಒಂದು ಕಾರಣವಾಯಿತು. ಸಂಜು ಸ್ಯಾಮ್ಸನ್ ಅತ್ಯುತ್ತಮವಾಗಿ ಆಡಿದರೂ, ಶಾರ್ದೂಲ್ ಠಾಕೂರ್ ಔಟಾದ ನಂತರ ಸ್ಯಾಮ್ಸನ್ಗೆ ಯಾರೂ ಸರಿಯಾದ ಬೆಂಬಲ ನೀಡದ ಕಾರಣ ಭಾರತ ಸೋಲನುಭವಿಸಿತು.
ಎರಡನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ದೀಪಕ್ ಚಹಾರ್, ಶಹಬಾಜ್ ಅಥವಾ ಇಬ್ಬರನ್ನು ಕರೆತರುವ ಬಗ್ಗೆ ಯೋಚಿಸಬೇಕಾಗಿದೆ. ಅವರ ಉಪಸ್ಥಿತಿಯು ಆತಿಥೇಯರಿಗೆ ಹೆಚ್ಚುವರಿ ಬೌಲಿಂಗ್ ಆಯ್ಕೆಗಳನ್ನು ನೀಡುವುದಲ್ಲದೆ, ಬ್ಯಾಟಿಂಗ್ನಲ್ಲೂ ಸಹಾಯ ಮಾಡಲಿದೆ.
ಫೀಲ್ಡಿಂಗ್ನಲ್ಲಿ ಸುಧಾರಣೆಯಾಗಬೇಕು
ಫೀಲ್ಡಿಂಗ್ನಲ್ಲಿ ಟೀಂ ಇಂಡಿಯಾ ಸಾಕಷ್ಟು ಸುಧಾರಣೆಯಾಗಬೇಕಾಗಿದೆ. ಪ್ರಸ್ತುತ ಪೀಳಿಗೆಯ ಅತ್ಯುತ್ತಮ ಫೀಲ್ಡರ್ ರವೀಂದ್ರ ಜಡೇಜಾ ಅನುಪಸ್ಥಿತಿ ಸ್ಪಷ್ಟವಾಗಿ ಕಾಡುತ್ತಿದೆ. ಪಾಕಿಸ್ತಾನದ ವಿರುದ್ಧ ಭಾರತದ ಸೂಪರ್ 4 ಪಂದ್ಯದಲ್ಲಿ ಅರ್ಶ್ದೀಪ್ ಸಿಂಗ್ ಆಸಿಫ್ ಅಲಿ ನೀಡಿದ ಕ್ಯಾಚ್ ಕೈಬಿಟ್ಟಿದ್ದರು.
ಭಾರತ ಇತ್ತೀಚೆಗೆ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಯನ್ನು ಗೆದ್ದಿದ್ದರೂ, ಅವರ ಫೀಲ್ಡಿಂಗ್ ಪ್ರಯತ್ನ ಉತ್ತಮವಾಗಿರಲಿಲ್ಲ. ಪ್ರತಿಯೊಂದು ಪಂದ್ಯದಲ್ಲೂ ಅವರು ಕಳಪೆ ಫೀಲ್ಡಿಂಗ್ ಮಾಡಿದ್ದರು. ಮೊದಲನೇ ಏಕದಿನ ಪಂದ್ಯದಲ್ಲೂ ಟೀಮ್ ಇಂಡಿಯಾ ಮೂರು ಕ್ಯಾಚ್ಗಳನ್ನು ಕೈಬಿಟ್ಟರು.
ಗಿಲ್ ಒಂಬತ್ತನೇ ಓವರ್ನಲ್ಲಿ ಜನೆಮನ್ ಮಲಾನ್ ನೀಡಿದ ಕ್ಯಾಚ್ ಬಿಟ್ಟರೆ. ಗಾಯಕ್ವಾಡ್ 37 ನೇ ಓವರ್ನಲ್ಲಿ ಮಿಲ್ಲರ್ ನೀಡಿದ ಅವಕಾಶ ಕೈ ಚೆಲ್ಲಿದರು. ಕ್ಲಾಸೆನ್ ನೀಡಿದ ಕ್ಯಾಚ್ಅನ್ನು ಹಿಡಿಯಲು ಸಿರಾಜ್ ವಿಫಲರಾದರು. ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲಿಂಗ್ ಜೊತೆಗೆ ಫಿಲ್ಡಿಂಗ್ ಬಗ್ಗೆ ಕೂಡ ಹೆಚ್ಚಿನ ಗಮನ ನೀಡಬೇಕಿದೆ.