ರಾಹುಲ್ ಬದಲಿಗೆ ಇನ್ನಿಂಗ್ಸ್ ಆರಂಭಿಸುವುದು ಯಾರು
ನಾಯಕ ರೋಹಿತ್ ಶರ್ಮಾ ಜೊತೆ ಆರಂಭಿಕನಾಗಿ ಕಣಕ್ಕಿಳಿಯುತ್ತಿದ್ದ ರಾಹುಲ್ ಬದಲಿಗೆ ಈಗ ಯಾರು ಇನ್ನಿಂಗ್ಸ್ ಆರಂಭಿಸಲಿದ್ದಾರೆ ಎಂದು ನೋಡಬೇಕಿದೆ. ವಿರಾಟ್ ಕೊಹ್ಲಿ ಬದಲಿಗೆ ಶ್ರೇಯಸ್ ಅಯ್ಯರ್ ತಂಡದಲ್ಲಿ ಸ್ಥಾನಪಡೆಯುವ ಸಾಧ್ಯತೆ ಇದ್ದು, ಆರಂಭಿಕರಾಗಿ ರಿಷಬ್ ಪಂತ್ ಕಣಕ್ಕಿಳಿಯುವ ಸಾಧ್ಯತೆ ಇದೆ.
ಆದಾಗ್ಯೂ, ವಿಶ್ರಾಂತಿ ಪಡೆದ ಜೋಡಿಯು ವಿಶ್ವಕಪ್ಗೆ ಮೊದಲು ಭಾರತದ ಅಂತಿಮ ಟಿ20 ಪಂದ್ಯವನ್ನು ಆಡಬೇಕಿತ್ತು ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.
T20 World Cup: ಬುಮ್ರಾ ಬದಲಿಗೆ ಸ್ಥಾನ ಪಡೆಯಲು ರೇಸ್ನಲ್ಲಿರುವ ಆಟಗಾರರು ಇವರು
ಈ ಸಮಯದಲ್ಲಿ ವಿಶ್ರಾಂತಿ ಏಕೆ ನೀಡಬೇಕಿತ್ತು
ಎಲ್ಲವೂ ಉತ್ತಮವಾಗಿ ನಡೆಯುತ್ತಿರುವಾಗ ವಿಶ್ರಾಂತಿ ಏಕೆ ಬೇಕು ಎಂದು ನಾನು ವೈಯಕ್ತಿಕವಾಗಿ ಭಾವಿಸುತ್ತೇನೆ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ. "ಪ್ರಾಕ್ಟೀಸ್ ಮುಂದುವರಿಯುತ್ತದೆ, ಅದು ನೆಟ್ ಸೆಷನ್ಗಳು ಅಥವಾ ಅಭ್ಯಾಸ ಪಂದ್ಯಗಳಾಗಿರಲಿ, ಆದರೆ ಅಂತರರಾಷ್ಟ್ರೀಯ ಪಂದ್ಯ ಉಳಿದಿರುವಾಗ, ಅದನ್ನು ಯಾಕೆ ತಪ್ಪಿಸಿಕೊಳ್ಳಬೇಕು." ಎಂದು ಚೋಪ್ರಾ ಪ್ರಶ್ನಿಸಿದ್ದಾರೆ.
ಪುನರಾವರ್ತಿತ ಗಾಯದ ಸಮಸ್ಯೆಗಳಿಂದಾಗಿ ಹಲವಾರು ಪಂದ್ಯಗಳನ್ನು ಕಳೆದುಕೊಂಡ ನಂತರ ರಾಹುಲ್ ಏಷ್ಯಾಕಪ್ನಲ್ಲಿ ತಂಡಕ್ಕೆ ವಾಪಸಾಗಿದ್ದರು. ಜುಲೈನಲ್ಲಿ ಭಾರತದ ಇಂಗ್ಲೆಂಡ್ ಪ್ರವಾಸದ ನಂತರ ಕೊಹ್ಲಿಗೆ ದೀರ್ಘ ವಿರಾಮವನ್ನು ನೀಡಲಾಯಿತು. ಏಷ್ಯಾಕಪ್ಗೆ ಹಿಂದಿರುಗುವ ಮೊದಲು ಕೆರಿಬಿಯನ್ ಮತ್ತು ಜಿಂಬಾಬ್ವೆ ಪ್ರವಾಸಗಳಿಗಾಗಿ ಅವರು ವಿಶ್ರಾಂತಿ ಪಡೆದರು.
ಅವರಿಗೆ ಬದಲಾಗಿ ಯಾರು ಆಡುತ್ತಾರೆ?
ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಸದ್ಯಕ್ಕೆ ಹಾರ್ದಿಕ್ ಪಾಂಡ್ಯ ವಿಶ್ರಾಂತಿ ಪಡೆದಿದ್ದಾರೆ. ಅವರು 5ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ, ಮತ್ತು ವೇಗದ ಬೌಲಿಂಗ್ ವಿಭಾಗದಲ್ಲಿ ಭಾರತದ ಶಕ್ತಿಯಾಗಿದ್ದರು. ಈಗ ರಾಹುಲ್ ಮತ್ತು ಕೊಹ್ಲಿ ಸರಣಿಯ ಕೊನೆಯ ಪಂದ್ಯದಲ್ಲಿ ವಿಶ್ರಾಂತಿ ನೀಡಿದ್ದು, ತಂಡದ ಬ್ಯಾಟಿಂಗ್ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.
ಗಾಯಗೊಂಡಿರುವ ದೀಪಕ್ ಹೂಡಾ ಬದಲಿಗೆ ತಂಡಕ್ಕೆ ಬಂದಿರುವ ಶ್ರೇಯಸ್ ಅಯ್ಯರ್ ಸಮರ್ಥ ಅಭ್ಯರ್ಥಿಗಳಲ್ಲಿ ಸೇರಿದ್ದಾರೆ. ಭಾರತ ತನ್ನ ಪ್ಲೇಯಿಂಗ್ ಇಲೆವೆನ್ನಲ್ಲಿ ಕೇವಲ ಐದು ಬ್ಯಾಟರ್ಗಳೊಂದಿಗೆ ಸ್ಪರ್ಧೆಗೆ ಹೋಗಬೇಕಾಗುತ್ತದೆ ಎಂದು ಆಕಾಶ್ ಚೋಪ್ರಾ ಹೇಳಿದರು
ಆಲ್ರೌಂಡರ್ ಶಹಬಾಜ್ ಅಹ್ಮದ್ಗೆ ನೀಡಿ
"ವಿರಾಟ್ ಕೊಹ್ಲಿ ಸುದೀರ್ಘ ವಿರಾಮದ ನಂತರ ಏಷ್ಯಾಕಪ್ಗೆ ಬಂದರು, ಆಸ್ಟ್ರೇಲಿಯಾ ಸರಣಿಗೂ ಮೊದಲು 12 ದಿನಗಳ ವಿರಾಮವಿತ್ತು. ಈಗ ಅವರಿಗೆ ಮತ್ತೊಂದು 15 ದಿನಗಳ ವಿರಾಮ ಸಿಗಲಿದೆ."
ಶಹಬಾಜ್ ಅಹ್ಮದ್ ಈ ಪಂದ್ಯದಲ್ಲಿ ಸಮರ್ಥವಾಗಿ ಪದಾರ್ಪಣೆ ಮಾಡಬಹುದು. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಗಾಗಿ ಆಲ್ ರೌಂಡರ್ ನಿಯಮಿತವಾಗಿ ಕೆಳ-ಮಧ್ಯಮ ಕ್ರಮಾಂಕದಲ್ಲಿ ಪಿಂಚ್ ಹಿಟ್ಟರ್ ಆಗಿ ಕಾಣಿಸಿಕೊಂಡಿದ್ದಾರೆ. ಅಕ್ಟೋಬರ್ 4, ಮಂಗಳವಾರ ಇಂದೋರ್ನಲ್ಲಿ ಭಾರತವು ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯ ಮೂರನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಎದುರಿಸಲಿದೆ.