32 ರನ್ಗಳನ್ನು ನೀಡಿ ಮೂರು ವಿಕೆಟ್ ಪಡೆದ ಅರ್ಶ್ದೀಪ್
ತಿರುವನಂತಪುರಂನಲ್ಲಿ ಸ್ವಿಂಗಿಂಗ್ ಪಿಚ್ನಲ್ಲಿ 32 ರನ್ಗಳನ್ನು ನೀಡಿ ಮೂರು ವಿಕೆಟ್ಗಳೊಂದಿಗೆ ಪಂದ್ಯವನ್ನು ಅಂತ್ಯಗೊಳಿಸಿದ ಅರ್ಶ್ದೀಪ್ ಅವರನ್ನು ಎದುರಿಸುವಾಗ ದಕ್ಷಿಣ ಆಫ್ರಿಕಾ ಬ್ಯಾಟರ್ಗಳು ಮಂಕಾದಂತೆ ಕಾಣುತ್ತಿದ್ದರು.
ಪಾಕಿಸ್ತಾನದ ಮಾಜಿ ವಿಕೆಟ್ ಕೀಪರ್-ಬ್ಯಾಟರ್ ಕಮ್ರಾನ್ ಅಕ್ಮಲ್ ಅವರು ಅರ್ಶ್ದೀಪ್ ಸಿಂಗ್ ಅವರ ಪ್ರದರ್ಶನದ ಕುರಿತು ಮಾತನಾಡುತ್ತಾ, ಭಾರತದ ಎಡಗೈ ವೇಗದ ಐಕಾನ್ನೊಂದಿಗೆ ಹೋಲಿಕೆ ಮಾಡಿದರು.
"ಅರ್ಶ್ದೀಪ್ ಸಿಂಗ್ ನಂಬಲಾಗದ ಬೌಲರ್. ಭಾರತವು ತಮ್ಮ ಹೊಸ ಜಹೀರ್ ಖಾನ್ ಅನ್ನು ಕಂಡುಕೊಂಡಿದೆ ಎಂದು ನಾನು ಭಾವಿಸುತ್ತೇನೆ," ಎಂದು ಕಮ್ರಾನ್ ಅಕ್ಮಲ್ ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಿದ ವೀಡಿಯೊದಲ್ಲಿ ಹೇಳಿದ್ದಾರೆ.
ಅರ್ಶ್ದೀಪ್ ಸಿಂಗ್ ಬೌಲಿಂಗ್ ಬುದ್ಧಿವಂತಿಕೆ ಮತ್ತು ಪ್ರಬುದ್ಧತೆ
"ಅರ್ಶ್ದೀಪ್ ಅವರು ಪೇಸ್ ಮತ್ತು ಸ್ವಿಂಗ್ ಎರಡನ್ನೂ ಹೊಂದಿದ್ದಾರೆ ಮತ್ತು ಅವರು ಬೌಲಿಂಗ್ ಬುದ್ಧಿವಂತಿಕೆಯನ್ನು ಹೊಂದಿದ್ದಾರೆ. ಅವರು ಮಾನಸಿಕವಾಗಿ ಪ್ರಬಲರಾಗಿದ್ದಾರೆ ಮತ್ತು ಅವರ ಸಾಮರ್ಥ್ಯಗಳನ್ನು ತಿಳಿದಿದ್ದಾರೆ. ಪಂದ್ಯದ ಪರಿಸ್ಥಿತಿಗಳಿಗೆ ಅನುಗುಣವಾಗಿ ಅವುಗಳನ್ನು ಬಳಸುತ್ತಾರೆ," ಎಂದು ಪಾಕಿಸ್ತಾನ ಮಾಜಿ ಕ್ರಿಕೆಟಿಗ ಕಮ್ರಾನ್ ಅಕ್ಮಲ್ ವಿವರಿಸಿದರು.
ಯುವಕನಾಗಿದ್ದರೂ, ಅರ್ಶ್ದೀಪ್ ಸಿಂಗ್ ಬೌಲಿಂಗ್ ಬುದ್ಧಿವಂತಿಕೆ ಮತ್ತು ಪ್ರಬುದ್ಧತೆಯನ್ನು ಹೊಂದಿದ್ದಾರೆ, ಇದು ಭಾರತ ತಂಡಕ್ಕೆ ಉತ್ತಮ ಸಂಕೇತವಾಗಿದೆ ಎಂದರು.
ಜಹೀರ್ ಖಾನ್ ನಂತರ ಎಡಗೈ ಆಟಗಾರನ ಅಗತ್ಯವಿದೆ
"ಅರ್ಶ್ದೀಪ್ ಮೊದಲು ರಿಲೀ ರೊಸ್ಸೌವ್ ಅವರ ಮೊದಲ ವಿಕೆಟ್ ಪಡೆದರು ಮತ್ತು ನಂತರ ಕ್ವಿಂಟನ್ ಡಿ ಕಾಕ್ ಅವರನ್ನು ಬಲೆಗೆ ಕೆಡವಿದರು. ಇದರ ನಂತರ ಡೇವಿಡ್ ಮಿಲ್ಲರ್ ಅವರನ್ನು ಬೌಲ್ಡ್ ಮಾಡುವ ಮೂಲಕ ಅತ್ಯುತ್ತಮ ವಿಕೆಟ್ ಪಡೆದರು. ಅರ್ಶ್ದೀಪ್ ಸಿಂಗ್ ಅದ್ಭುತ ಮತ್ತು ಬೌಲಿಂಗ್ ಮಾಡುತ್ತಾರೆ. ಅವರು ಪ್ರಬುದ್ಧರಾಗಿದ್ದಾರೆ, ವೇಗವನ್ನು ಹೊಂದಿದ್ದಾರೆ ಮತ್ತು ಇನ್ನೂ ಚಿಕ್ಕವರಾಗಿದ್ದಾರೆ. ಇದು ಟೀಮ್ ಇಂಡಿಯಾಕ್ಕೆ ಉತ್ತಮ ಸಂಕೇತವಾಗಿದೆ, ಏಕೆಂದರೆ ಅವರಿಗೆ ಜಹೀರ್ ಖಾನ್ ನಂತರ ಎಡಗೈ ಆಟಗಾರನ ಅಗತ್ಯವಿದೆ," ಎಂದು ಕಮ್ರಾನ್ ಅಕ್ಮಲ್ ತಿಳಿಸಿದರು.
ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ಗೆ 15 ಮಂದಿಯ ತಂಡದಲ್ಲಿ ಅರ್ಶ್ದೀಪ್ ಸಿಂಗ್ ಆಯ್ಕೆಯಾಗಿದ್ದಾರೆ ಎಂಬುದು ಗಮನಾರ್ಹ.
ಟಿ20 ವಿಶ್ವಕಪ್ಗಾಗಿ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಶ್ದೀಪ್ ಸಿಂಗ್
ಸ್ಟ್ಯಾಂಡ್ಬೈ ಆಟಗಾರರು: ಮೊಹಮ್ಮದ್. ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹಾರ್.