ದ್ರಾವಿಡ್ ಸರ್ ಆತಂಕಕ್ಕೊಳಗಾಗಿದ್ದರು
ಪಂದ್ಯದ ಚೇಸಿಂಗ್ ತಂಡದ ಆಟಗಾರರಿಗೆ ತುಂಬಾ ಫನ್ ನೀಡಿತ್ತು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಶ್ರೇಯಸ್ ಅಯ್ಯರ್ ತಂಡದ ಆಟಗಾರರೆಲ್ಲಾ ಒಟ್ಟಿಗೆ ಕುಳಿತಿದ್ದ ಸಂದರ್ಭದಲ್ಲಿ ತಮ್ಮೊಟ್ಟಿಗೆ ಕುಳಿತಿದ್ದ ರಾಹುಲ್ ದ್ರಾವಿಡ್ ಸರ್ ಆತಂಕಕ್ಕೊಳಗಾಗಿದ್ದರು ಹಾಗೂ ಪದೇ ಪದೇ ಸಂದೇಶವನ್ನು ರವಾನಿಸುತ್ತಿದ್ದರು ಎಂದು ಹೇಳಿಕೆ ನೀಡಿದ್ದಾರೆ.
ಅಕ್ಷರ್ ಪಟೇಲ್ ಪ್ರದರ್ಶನವನ್ನು ಕೊಂಡಾಡಿದ ಅಯ್ಯರ್
ಇನ್ನೂ ಮುಂದುವರಿದು ಮಾತನಾಡಿದ ಶ್ರೇಯಸ್ ಅಯ್ಯರ್ ಈ ಪಂದ್ಯದಲ್ಲಿ ತಂಡದ ಹಲವು ಆಟಗಾರರು ಒತ್ತಡದ ನಡುವೆಯೂ ಉತ್ತಮ ಪ್ರದರ್ಶನವನ್ನು ನೀಡಿದರು ಎಂದು ಹೇಳಿದ್ದಾರೆ. ಹಾಗೂ ಈ ರೀತಿಯ ಒತ್ತಡದ ಪಂದ್ಯಗಳ ಅನುಭವ ತಂಡದ ಆಟಗಾರರಿಗೆ ಈ ಹಿಂದೆಯೇ ಸಾಕಷ್ಟು ಬಾರಿ ಆಗಿದ್ದರಿಂದ, ಇದೇನೂ ಹೊಸದಾಗಿರಲಿಲ್ಲ ಹಾಗೂ ಇದೊಂದು ಮತ್ತೊಂದು ಪಂದ್ಯವಾಗಿತ್ತಷ್ಟೇ ಎಂದು ಶ್ರೇಯಸ್ ಅಯ್ಯರ್ ತಿಳಿಸಿದ್ದಾರೆ. ತಂಡದ ಆಟಗಾರರೆಲ್ಲಾ ಉತ್ತಮ ಪ್ರದರ್ಶನ ನೀಡಿದ್ದು, ಅದರಲ್ಲಿಯೂ ಅಕ್ಷರ್ ಪಟೇಲ್ ತುಂಬಾ ಅದ್ಭುತವಾಗಿ ಪಂದ್ಯವನ್ನು ಫಿನಿಶ್ ಮಾಡಿದರು ಎಂದು ಅಯ್ಯರ್ ಪ್ರಶಂಸಿಸಿದ್ದಾರೆ.
ಅರ್ಧಶತಕ ಬಾರಿಸಿ ಉತ್ತಮ ಆಟವನ್ನಾಡಿದ ಶ್ರೇಯಸ್ ಅಯ್ಯರ್
ಟೀಮ್ ಇಂಡಿಯಾ 17.2 ಓವರ್ಗಳಲ್ಲಿ 79 ರನ್ಗಳಿಗೆ ತನ್ನ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾಗ ನಾಲ್ಕನೇ ವಿಕೆಟ್ಗೆ ಜತೆಯಾದ ಸಂಜು ಸ್ಯಾಮ್ಸನ್ ಮತ್ತು ಶ್ರೇಯಸ್ ಐಯ್ಯರ್ ಜೋಡಿ 99 ರನ್ಗಳ ಅಮೂಲ್ಯವಾದ ಜತೆಯಾಟವನ್ನಾಡಿ ತಂಡಕ್ಕೆ ಆಸರೆಯಾದರು. ಶ್ರೇಯಸ್ ಅಯ್ಯರ್ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದು 71 ಎಸೆತಗಳಲ್ಲಿ 63 ರನ್ ಕಲೆ ಹಾಕುವುದರ ಮೂಲಕ ಉತ್ತಮ ಪ್ರದರ್ಶನ ನೀಡಿದರು.