ಗಾಯದ ಬಗ್ಗೆ ಮಾಹಿತಿ ನೀಡಿದ್ದ ರೋಹಿತ್
ಇನ್ನು ಈ ಪಂದ್ಯದ ಮುಕ್ತಾಯದ ಬಳಿಕ ರೋಹಿತ್ ಶರ್ಮಾ ಮಾತನಾಡುತ್ತಾ ಗಾಯದ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ. "ಈ ಕ್ಷಣಕ್ಕೆ ಪರವಾಗಿಲ್ಲ. ಮುಂದಿನ ಪಂದ್ಯಕ್ಕೆ ಕೆಲ ದಿನಗಳ ಸಮಯವಿದೆ. ಆ ವೇಳೆಗೆ ಎಲ್ಲವೂ ಸರಿಯಾಗಬಹುದು ಎನಿಸುತ್ತದೆ" ಎಂದಿದ್ದರು ರೋಹಿತ್ ಶರ್ಮಾ. ಈ ಸರಣಿಯ ಮೊದಲ ಪಂದ್ಯದಲ್ಲಿ 44 ಎಸೆತಗಳಿಂದ 64 ರನ್ಗಳಿಸಿ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ರೋಹಿತ್ ಶರ್ಮಾ ಎರಡನೇ ಪಂದ್ಯದಲ್ಲಿ ಮೊದಲ ಎಸೆತದಲ್ಲಿಯೇ ವಿಕೆಟ್ ಕಳೆದುಕೊಂಡಿದ್ದರು. ಆದರೆ ಮೂರನೇ ಪಂದ್ಯದಲ್ಲಿ ಅದ್ಭುತ ಲಯದಲ್ಲಿದ್ದಂತೆ ಕಂಡುಬಂದಿದ್ದರಾದರೂ ಗಾಯದ ಕಾರಣ ಹೆಚ್ಚು ಹೊತ್ತು ಕ್ರೀಸ್ನಲ್ಲಿ ಇರಲು ಸಾಧ್ಯವಾಗಲಿಲ್ಲ.
4ನೇ ಪಂದ್ಯದಲ್ಲಿ ರೋಹಿತ್ ಆಡಲಿದ್ದಾರೆ ಎನ್ನುತ್ತಿದೆ ವರದಿ
ರೋಹಿತ್ ಶರ್ಮಾ ಸದ್ಯ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು ಅಂತಿಮ ಎರಡು ಪಂದ್ಯಗಳಲ್ಲಿ ಅವರು ಭಾವಹಿಸಲಿದ್ದಾರೆ ಎಂದು ಕ್ರಿಕ್ಬಜ್ ವರದಿ ಮಾಡಿದೆ. ಆದರೆ ಮುಂದಿನ ದಿನಗಳಲ್ಲಿ ಭಾರತ ಏಷ್ಯಾಕಪ್ ಹಾಗೂ ಟಿ20 ವಿಶ್ವಕಪ್ನಲ್ಲಿ ಭಾಗವಹಿಸಲಿರುವ ಕಾರಣ ರೋಹಿತ್ ಶರ್ಮಾ ಫಿಟ್ನೆಸ್ ಬಹಳಷ್ಟು ಮುಖ್ಯವಾಗಿದ್ದು ಈ ನಿಟ್ಟಿನಲ್ಲಿ ಮ್ಯಾನೇಜ್ಮೆಂಟ್ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.
ರೋಹಿತ್ ಸ್ಥಾನ ತುಂಬಲು ಸಿದ್ಧವಾಗಿದ್ದಾರೆ ಯುವ ಆಟಗಾರರು
ಅಂತಿಮ ಎರಡು ಪಂದ್ಯಗಳಲ್ಲಿ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಲು ನಿರ್ಧರಿಸಿದರೆ ಆರಂಭಿಕನಾಗಿ ರೋಹಿತ್ ಶರ್ಮಾ ಸ್ಥಾನವನ್ನು ಇಶಾನ್ ಕಿಶನ್ ತುಂಬಬಹುದಾಗಿದೆ. ಆದರೆ ತಂಡವನ್ನು ಯಾರು ಮುನ್ನಡೆಸುವುದು ಎಂಬುದು ಪ್ರಶ್ನೆ. ಇತ್ತೀಚೆಗಷ್ಟೇ ಭಾರತ ತಂಡವನ್ನು ಮುನ್ನಡೆಸಿರುವ ರಿಷಭ್ ಪಂತ್ ಹಾಗೂ ಹಾರ್ದಿಕ್ ಪಾಂಡ್ಯ ತಂಡದಲ್ಲಿದ್ದು ನಾಯಕತ್ವದ ಹೊಣೆಗಾರಿಗೆಯನ್ನು ಈ ಯುವ ಆಟಗಾರರಿಗೆ ನೀಡಬಹುದು.
ಯುಎಸ್ ವೀಸಾ ಪಡೆದ ಭಾರತ ಹಾಗೂ ವೆಸ್ಟ್ ಇಂಡೀಸ್ ಆಟಗಾರರು
ಇನ್ನು ಅಂತಿಮ ಎರಡು ಪಂದ್ಯಗಳು ಯುನೈಟೆಡ್ ಸ್ಟೇಟ್ಸ್ನ ಫ್ಲೋರಿಡಾದಲ್ಲಿ ಆಯೋಜನೆಯಾಗಲಿದೆ. ಹೀಗಾಗಿ ಭಾರತ ಹಾಗೂ ವೆಸ್ಟ್ ಇಂಡೀಸ್ ಎರಡೂ ತಂಡಗಳ ಎಲ್ಲಾ ಆಟಗಾರರಿಗೆ ಹಾಗೂ ಸಹಾಯಕ ಸಿಬ್ಬಂದಿಗಳಿಗೆ ಯುಎಸ್ ವೀಸಾ ದೊರೆತಿದೆ. ವೀಸಾ ವಿಚಾರವಾಗಿ ಕೆಲ ಗೊಂದಲಗಳು ಮೂಡಿದ್ದ ಕಾರಣ ಆತಂಕ ಮೂಡಿಸಿತ್ತು. ಆದರೆ ಗಯಾನ ಸರ್ಕಾರ ರಾಜತಾಂತ್ರಿಕವಾಗಿ ಮಧ್ಯಪ್ರವೇಶಿಸಿದ ಕಾರಣ ಈ ಗೊಂದಲಕ್ಕೆ ತೆರೆಬಿದ್ದಿದ್ದು ಎಲ್ಲಾ ಆಟಗಾರರು ಕೂಡ ವೀಸಾ ಪಡೆದುಕೊಂಡಿದ್ದಾರೆ.