ಕೇವಲ ಮೂರು ಗೆಲುವುಗಳೊಂದಿಗೆ 12ನೇ ಸ್ಥಾನದಲ್ಲಿರುವ ಜಿಂಬಾಬ್ವೆ
ಜಿಂಬಾಬ್ವೆ ಪ್ರಸ್ತುತ 13 ತಂಡಗಳ ಪೂಲ್ನಲ್ಲಿ 15 ಪಂದ್ಯಗಳಲ್ಲಿ ಕೇವಲ ಮೂರು ಗೆಲುವುಗಳೊಂದಿಗೆ 12ನೇ ಸ್ಥಾನದಲ್ಲಿದೆ. ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಭಾರತ ತಂಡ ಕೊನೆಯ ಬಾರಿಗೆ ಜಿಂಬಾಬ್ವೆಗೆ ಪ್ರಯಾಣಿಸಿತ್ತು. ಜೂನ್-ಜುಲೈ 2016ರಲ್ಲಿ ಮೆನ್ ಇನ್ ಬ್ಲೂ ಮೂರು ಏಕದಿನ ಪಂದ್ಯಗಳು ಮತ್ತು ಅಷ್ಟೇ ಟಿ20 ಪಂದ್ಯಗಳನ್ನು ಆಡಿದ್ದರು.
"ಕಳೆದ ಕೆಲವು ವರ್ಷಗಳಿಂದ ಭಾರತೀಯ ಕ್ರಿಕೆಟ್ ಮತ್ತು ಐಪಿಎಲ್ ಅನ್ನು ಹೆಚ್ಚು ವೀಕ್ಷಿಸಿರುವ ನಮಗೆ ತಿಳಿದಿದೆ, ಭಾರತವು ಬಹುಶಃ ಮೂರು ಅಥವಾ ನಾಲ್ಕು ತಂಡಗಳನ್ನು ಕಳಿಸಬಹುದು ಎಂದು. ಬಹುಶಃ ವಿಶ್ವ ಕ್ರಿಕೆಟ್ನಲ್ಲಿ ಮೊದಲ, ಎರಡನೇ, ಮೂರನೇ, ನಾಲ್ಕನೆಯದ್ದಾಗಿರಬಹುದು. ಅವರು ನಮಗೆ ಯಾವುದೇ ತಂಡವನ್ನು ಕಳುಹಿಸಿದರೂ, ಅವರು ಆಡುವ ಅಂತಾರಾಷ್ಟ್ರೀಯ ಕ್ರಿಕೆಟ್ನ ಪ್ರಮಾಣಕ್ಕೆ ಸಂಬಂಧಿಸಿದಂತೆ ಅದು ಬಲಿಷ್ಠ ಮತ್ತು ಅನುಭವಿ ತಂಡವಾಗಲಿದೆ ಎಂದು ನಮಗೆ ತಿಳಿದಿದೆ ಮತ್ತು ಇದು ನಮಗೆ ಕಠಿಣ ಕೆಲಸವಾಗಲಿದೆ ಎಂದು ಡೇವ್ ಹೌಟನ್ ಹೇಳಿದ್ದಾರೆ," ಎಂದು ಸ್ಪೋರ್ಟ್ಸ್ಟಾರ್ ಉಲ್ಲೇಖಿಸಿದೆ.
ಉತ್ತಮ ಕ್ರಿಕೆಟ್ ಆಡುವುದನ್ನು ವೀಕ್ಷಿಸಲಿದ್ದೇವೆ
"ಆದರೆ ಕಳೆದ ರಾತ್ರಿಯ ಆಟದ ನಂತರ ನಾವು ಕೆಲವು ದಿನಗಳವರೆಗೆ ಚದುರಿಹೋಗುವ ಮೊದಲು, ಭಾರತವು ಇಲ್ಲಿಗೆ ಬರುವುದು ನಮಗೆ ನಿಜವಾಗಿಯೂ ರನ್ ಗಳಿಸಲು ಮತ್ತು ವಿಶ್ವದ ಅತ್ಯುತ್ತಮ ತಂಡಗಳ ವಿರುದ್ಧ ಉತ್ತಮ ಫಲಿತಾಂಶಗಳನ್ನು ಪಡೆಯಲು ಉತ್ತಮ ಅವಕಾಶವಾಗಿದೆ ಎಂದು ನಾನು ಡ್ರೆಸ್ಸಿಂಗ್ ಕೋಣೆಯಲ್ಲಿ ಹುಡುಗರಿಗೆ ಹೇಳಿದ್ದೇನೆ. ಭಾರತ ತಂಡದಿಂದ ನಿಜವಾಗಿಯೂ ಉತ್ತಮ ಕ್ರಿಕೆಟ್ ಆಡುವುದನ್ನು ವೀಕ್ಷಿಸಲಿದ್ದೇವೆ ಎಂದು ನಾವು ನಂಬಬೇಕೆಂದು ನಾನು ಬಯಸುತ್ತೇನೆ. ಆದರೆ ನಾವು ಸವಾಲು ಹಾಕಲು ಬಯಸುತ್ತೇವೆ, ಈ ಮೂರು ಪಂದ್ಯಗಳಲ್ಲಿ ನಾವು ನಿಜವಾಗಿಯೂ ಭಾರತಕ್ಕೆ ಕಠಿಣ ಸವಾಲೊಡ್ಡುವ ಎಚ್ಚರಿಕೆ ಎಂದು ನಾನು ಭಾವಿಸುತ್ತೇನೆ," ಎಂದು ಜಿಂಬಾಬ್ವೆ ಕೋಚ್ ಹೌಟನ್ ಹೇಳಿದ್ದಾರೆ.
ಜಿಂಬಾಬ್ವೆ ಸರಣಿಗೆ ಟೀಮ್ ಇಂಡಿಯಾ ತಂಡ
ಕೆಎಲ್ ರಾಹುಲ್ (ನಾಯಕ) ಶಿಖರ್ ಧವನ್ (ಉಪನಾಯಕ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ದೀಪಕ್ ಚಾಹರ್.