ಉಡುಪಿ, ಏಪ್ರಿಲ್ 23: ಮುಂದಿನ ವಿಶ್ವಕಪ್ ಭಾರತ ಗೆಲ್ಲಲಿದೆ ಎಂದು ದಿ ವಾಲ್ ಖ್ಯಾತಿಯ ಮಾಜಿ ಕ್ರಿಕೆಟ್ ತಾರೆ ರಾಹುಲ್ ದ್ರಾವಿಡ್ ಭವಿಷ್ಯ ನುಡಿದಿದ್ದಾರೆ. ಉಡುಪಿಯ ಮಣಿಪಾಲ್ ದಲ್ಲಿ ಆಯೋಜಿಸಲಾಗಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮತದಾನದ ಜಾಗೃತಿ ಮೂಡಿಸಿದ ದ್ರಾವಿಡ್ ಗೆ ಮತದಾನದ ಹಕ್ಕಿಲ್ಲ
ತವರಿನಲ್ಲಿ ಇಂಗ್ಲೆಂಡ್ ತಂಡ ಬಲಿಷ್ಟ ತಂಡವಾಗಿದೆ. ಇಂಗ್ಲೆಂಡ್ ಜೊತೆ ಆಸ್ಟೇಲಿಯಾ ಮತ್ತು ಭಾರತ ಫೈನಲ್ ಬರುವ ಅರ್ಹತೆ ಹೊಂದಿವೆ. ಆದರೆ ಸರಣಿಯಲ್ಲಿ ಭಾರತ ವಿಶ್ವಕಪ್ ಗೆಲ್ಲಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕ ಚುನಾವಣೆ: ಬಿಜೆಪಿ ಆಹ್ವಾನಕ್ಕೆ ಒಲ್ಲೆ ಎಂದ ಕುಂಬ್ಳೆ-ದ್ರಾವಿಡ್
ಭಾರತೀಯ ತಂಡ ದಲ್ಲಿ ನಾಲ್ಕನೇ ಕ್ರಮಾಂಕದ ಆಟಗಾರರ ಆಯ್ಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಆಟಗಾರರನ್ನು ಆಯ್ಕೆ ಮಾಡುವುದು ಆಯ್ಕೆ ಸಮಿತಿಗೆ ಬಿಟ್ಟ ವಿಚಾರ. ರಾಯಡು, ಪಂತ್, ಅಜಿಂಕೆ ರಹಾನೆ, ಪಾಂಡೆ ಹೀಗೆ ಉತ್ತಮ ಆಟಗಾರರಿದ್ದಾರೆ.ಆದ್ರೆ ತಂಡದ ಸಮತೋಲನಕ್ಕಾಗಿ ಆಯ್ಕೆ ಸಮಿತಿ ಕೂಲಂಕುಶವಾಗಿ ಪರಿಶೀಲಿಸಿ ತಂಡದ ಆಯ್ಕೆ ಮಾಡುತ್ತಾರೆ ಎಂದು ಅವರು ತಿಳಿಸಿದರು.
ಇಂದಿರಾನಗರದಲ್ಲಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಮತದಾನ
ಆಯ್ಕೆ ಸಂದರ್ಭ ಕೆಲವು ಆಟಗಾರರಿಗೆ ನೋವಾಗುವುದು ಸಹಜ. ಆದ್ರೆ 15 ಮಂದಿಯನ್ನು ಮಾತ್ರ ಆಯ್ಕೆ ಮಾಡಲು ಸಾದ್ಯ ಎಂದು ಅವರು ಹೇಳಿದರು .