ವೇಗದ ಪಿಚ್ ಸವಾಲು
ಮೊದಲ ಪಂದ್ಯವು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ನಡೆಯುವುದರಿಂದ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿರುವ ಕೆಲವು ಆಟಗಾರರು ಕೂಡ ಇದರಲ್ಲಿ ಆಡಲಿದ್ದಾರೆ. ಬಳಿಕ ಅವರು ನೆರೆಯ ಆಸ್ಟ್ರೇಲಿಯಾಕ್ಕೆ ತೆರಳಲಿದ್ದಾರೆ. ಫಾರ್ಮ್ ಕಂಡುಕೊಳ್ಳಲು ಪ್ರಯತ್ನಿಸುತ್ತಿರುವ ಪ್ರಮುಖ ಆಟಗಾರರು ಅಲ್ಲಿನ ವಾತಾವರಣ ಮತ್ತು ಪಿಚ್ಗೆ ಹೊಂದಿಕೊಳ್ಳಲಿ ಎಂಬ ಉದ್ದೇಶದಿಂದ ಈ ಅವಕಾಶ ಕಲ್ಪಿಸಲಾಗಿದೆ.
ವಿಂಡೀಸ್, ಆಸೀಸ್ ವಿರುದ್ಧದ ಟಿ20 ಸರಣಿಗೆ ತಂಡ ಪ್ರಕಟ, ಧೋನಿ ಔಟ್!
ರಹಾನೆ ನೇತೃತ್ವ
ನಾಲ್ಕು ದಿನಗಳ ಆಟದ ಮೊದಲ ಪಂದ್ಯದಲ್ಲಿ ಅಜಿಂಕ್ಯ ರಹಾನೆ ತಂಡವನ್ನು ಮುನ್ನಡೆಸಲಿದ್ದಾರೆ. ಆಸ್ಟ್ರೇಲಿಯಾ ಸರಣಿಗೆ ಆಯ್ಕೆಯಾಗಿರುವ ಮುರಳಿ ವಿಜಯ್, ಪೃಥ್ವಿ ಶಾ, ಪಾರ್ಥಿವ್ ಪಟೇಲ್, ರೋಹಿತ್ ಶರ್ಮಾ, ಹನುಮ ವಿಹಾರಿ ಕೂಡ ಇದರಲ್ಲಿ ಆಡಲಿದ್ದಾರೆ.
ವಿಂಡೀಸ್ ಸರಣಿಯ ಕೊನೆಯ ಮೂರು ಪಂದ್ಯ: ತಂಡಕ್ಕೆ ಮರಳಿದ ಭುವಿ, ಬೂಮ್ರಾ
ಕರುಣ್ ನಾಯರ್ ನಾಯಕ
ನಂತರದ ಎರಡು ಪಂದ್ಯಗಳಿಗೆ ಕನ್ನಡಿಗ ಕರುಣ್ ನಾಯರ್ ನಾಯಕರಾಗಿರಲಿದ್ದಾರೆ. ಕರ್ನಾಟಕದ ಮಯಾಂಕ್ ಅಗರವಾಲ್, ಆರ್. ಸಮರ್ಥ್ ಮತ್ತು ಕೆ. ಗೌತಮ್ ಕೂಡ ಸ್ಥಾನ ಪಡೆದುಕೊಂಡಿದ್ದಾರೆ. ಯುವ ವಿಕೆಟ್ ಕೀಪರ್ಗಳಾದ ಇಶಾನ್ ಕಿಶನ್ ಮತ್ತು ಶ್ರೀಕರ್ ಭರತ್, ಸ್ಪಿನ್ನರ್ ಶಜಬಾಜ್ ನದೀಮ್, ವೇಗಿಗಳಾದ ರಜನೀಶ್ ಗುರ್ಬಾನಿ, ನವದೀಪ್ ಸೈನಿ, ದೀಪಕ್ ಚಾಹರ್, ಮೊಹಮದ್ ಸಿರಾಜ್ ಅವರಂತಹ ಆಟಗಾರರಿಗೆ ಉತ್ತಮ ಪರೀಕ್ಷೆಯಾಗಲಿದೆ.
ಏಕದಿನಕ್ಕೆ ಪಾಂಡೆ ನಾಯಕ
ಬಳಿಕ ಮೂರು ಏಕದಿನ ಪಂದ್ಯಗಳು ನಡೆಯಲಿದ್ದು, ಮನೀಶ್ ಪಾಂಡೆ ತಂಡವನ್ನು ಮುನ್ನಡೆಸಲಿದ್ದಾರೆ. ರಾಷ್ಟ್ರೀಯ ತಂಡದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಸ್ಥಾನ ಪಡೆಯಲು ತೀವ್ರ ಪೈಪೋಟಿ ಎದುರಿಸುತ್ತಿರುವ ಪಾಂಡೆಗೆ ಈ ಸರಣಿ ಬಹುದೊಡ್ಡ ಅವಕಾಶವಾಗಿದೆ.
ಗಾಯದ ಕಾರಣ ಆಸ್ಟ್ರೇಲಿಯಾದ ಟೆಸ್ಟ್ ಸರಣಿಯಲ್ಲಿ ಸ್ಥಾನ ಪಡೆಯದ ಹಾರ್ದಿಕ್ ಪಾಂಡ್ಯ, ನ್ಯೂಜಿಲೆಂಡ್ನ ಏಕದಿನ ಸರಣಿಯಲ್ಲಿ ಎ ತಂಡದಲ್ಲಿ ಆಡಲಿದ್ದಾರೆ.
ಮೊದಲ ಪಂದ್ಯಕ್ಕೆ ತಂಡ
ಅಜಿಂಕ್ಯ ರಹಾನೆ (ನಾಯಕ), ಮುರಳಿ ವಿಜಯ್, ಪೃಥ್ವಿ ಶಾ, ಮಯಾಂಕ್ ಅಗರವಾಲ್, ಹನುಮ ವಿಹಾರಿ, ರೋಹಿತ್ ಶರ್ಮಾ, ಪಾರ್ಥಿವ್ ಪಟೇಲ್ (ವಿಕೆಟ್ ಕೀಪರ್), ಕೆ.ಎಸ್. ಭರತ್ (ವಿಕೆಟ್ ಕೀಪರ್), ಕೆ. ಗೌತಮ್, ಶಹಬಾಜ್ ನದೀಮ್, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ದೀಪಕ್ ಚಾಹರ್, ರಜನೀಶ್ ಗುರ್ಬಾನಿ, ವಿಜಯ್ ಶಂಕರ್.
2&3ನೇ ನಾಲ್ಕು ದಿನದ ಪಂದ್ಯಕ್ಕೆ
ಕರುಣ್ ನಾಯರ್ (ನಾಯಕ), ಮಯಂಕ್ ಅಗರವಾಲ್, ಅಭಿಮನ್ಯು ಈಶ್ವರನ್, ಆರ್. ಸಮರ್ಥ್, ಅಂಕಿತ್ ಭಾವ್ನೆ, ಶುಭ್ಮನ್ ಗಿಲ್, ವಿಜಯ್ ಶಂಕರ್, ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಕೆ. ಗೌತಮ್, ಶಹಬಾಜ್ ನದೀಮ್, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ದೀಪಕ್ ಚಾಹರ್, ರಜನೀಶ್ ಗುರ್ಬಾನಿ.
ಮೂರು ಏಕದಿನ ಸರಣಿ
ಮನೀಶ್ ಪಾಂಡೆ (ನಾಯಕ), ಮಯಾಂಕ್ ಅಗರವಾಲ್, ಅನ್ಮೋಲ್ ಪ್ರೀತ್ ಸಿಂಗ್, ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್, ಅಂಕಿತ್ ಭಾವ್ನೆ, ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಕೃಣಾಲ್ ಪಾಂಡ್ಯ, ಸಿದ್ಧಾರ್ಥ್ ಕೌಲ್, ದೀಪಕ್ ಚಾಹರ್, ಖಲೀಲ್ ಅಹ್ಮದ್.