ಕಳೆದೆರಡು ವರ್ಷಗಳಲ್ಲಿ ಹಲವಾರು ಕ್ರಿಕೆಟ್ ಟೂರ್ನಿಗಳಿಗೆ ಅಡ್ಡಿಯನ್ನುಂಟುಮಾಡಿದ್ದ ಕೊರೊನಾ ಸೋಂಕು ಈ ವರ್ಷವೂ ಸಹ ತನ್ನ ಅಡ್ಡಿ ಪಡಿಸುವ ಕಾರ್ಯವನ್ನು ಮುಂದುವರೆಸಿದಂತಿದೆ.
ಕೊಹ್ಲಿ ಮಾಡಿದ ಈ ಕೆಲಸವನ್ನು ಬೇರೆಯವರು ಮಾಡಿದ್ರೆ ಸುಮ್ಮನೆ ಇರುತ್ತಿದ್ರಾ ಎಂದು ಕಿಡಿಕಾರಿದ ಗವಾಸ್ಕರ್
ಸದ್ಯ ಕೆರಿಬಿಯನ್ ನಾಡಿನಲ್ಲಿ ಅಂಡರ್ 19 ಪುರುಷರ ವಿಶ್ವಕಪ್ ಟೂರ್ನಿ 2022ರ ಆವೃತ್ತಿ ನಡೆಯುತ್ತಿದ್ದು, ಟೀಮ್ ಇಂಡಿಯಾ ಅಂಡರ್ 19ನ 6 ಆಟಗಾರರಿಗೆ ಕೊರೊನಾ ಸೋಂಕು ತಗುಲಿದೆ ಎಂದು ವರದಿಯೊಂದು ತಿಳಿಸಿದೆ. ಟೂರ್ನಿಯಲ್ಲಿನ ತನ್ನ ಮೊದಲನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಅಂಡರ್ 19 ತಂಡದ ವಿರುದ್ಧ ಸೆಣಸಾಡಿದ ಭಾರತ ಅಂಡರ್ 19 ತಂಡ ಗೆಲುವನ್ನು ಸಾಧಿಸುವುದರ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿತ್ತು.
ಹೀಗೆ ಈ ಬಾರಿಯ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿನ ಮೊದಲನೇ ಪಂದ್ಯದಲ್ಲಿಯೇ ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದ ಭಾರತ ಅಂಡರ್ 19 ತಂಡ ಇಂದು ( ಜನವರಿ 19 ) ಐರ್ಲೆಂಡ್ ಅಂಡರ್ 19 ತಂಡದ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದಿದೆ. ಆದರೆ ಈ ಪಂದ್ಯದಲ್ಲಿ ಕಣಕ್ಕಿಳಿದಿರುವ ಟೀಂ ಇಂಡಿಯಾಗೂ, ದಕ್ಷಿಣ ಆಫ್ರಿಕಾ ತಂಡದ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಟೀಮ್ ಇಂಡಿಯಾಗೂ ಸಾಕಷ್ಟು ವ್ಯತ್ಯಾಸಗಳಿದ್ದು ತಂಡದ ನಾಯಕ ಮತ್ತು ಉಪನಾಯಕರೇ ತಂಡದಿಂದ ಹೊರಗುಳಿದಿದ್ದಾರೆ.
ನಾನೀಗ ನಾಯಕನಲ್ಲ, ಯಾರಿಗೂ ಹೆದರುವುದೂ ಇಲ್ಲ: ಆ ಆಟಗಾರನ ವಿರುದ್ಧ ಮೈದಾನದಲ್ಲೇ ಕೊಹ್ಲಿ ಕಿಡಿ!
ಭಾರತ ಅಂಡರ್ 19 ಕ್ರಿಕೆಟ್ ತಂಡದ ನಾಯಕ ಯಶ್ ಧುಲ್ ಹಾಗೂ ಉಪನಾಯಕ ಎಸ್ ಕೆ ರಶೀದ್ ಸೇರಿದಂತೆ ತಂಡದ ಒಟ್ಟು 6 ಆಟಗಾರರಿಗೆ ಕೊರೊನಾ ಸೋಂಕು ತಗುಲಿದ್ದು, ಐರ್ಲೆಂಡ್ ವಿರುದ್ಧದ ಇಂದಿನ ಪಂದ್ಯದಿಂದ ಹೊರಗುಳಿದಿದ್ದಾರೆ. ಹೀಗೆ ತಂಡದ ಪ್ರಮುಖ ಆಟಗಾರರೇ ಸೋಂಕಿಗೆ ಒಳಗಾದ ಕಾರಣ ಟೀಮ್ ಇಂಡಿಯಾ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಉಳಿದ 11 ಆಟಗಾರರನ್ನು ಬಳಸಿ ತಂಡ ರಚಿಸಿ ಕಣಕ್ಕಿಳಿದಿದೆ.