ಬೌಲಿಂಗ್ನಲ್ಲಿ ಬದಲಾವಣೆ ನಿರೀಕ್ಷೆ
ಪ್ರತಿಷ್ಠೆಗೋಸ್ಕರ ಪ್ರಮುಖವೆನಿಸಿರುವ ಕೊನೇಯ ಏಕದಿನ ಪಂದ್ಯದಲ್ಲಿ ಕೊಹ್ಲಿ ಪಡೆ ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ಮಾಡುವ ನಿರೀಕ್ಷೆಯಿದೆ. ಅಂತಾರಾಷ್ಟ್ರೀಯ ಪ್ರವಾಸ ಮಾಡಿದ್ದ ಭಾರತದ ವೇಗಿ ನವದೀಪ್ ಸೈನಿ ಮೊದಲೆರಡು ಪಂದ್ಯಗಳಲ್ಲಿ ತಂತ್ರಗಾರಿಕೆಯೇ ಇಲ್ಲದವರಂತೆ ಕಾಣಿಸಿದರು. ಹೀಗಾಗಿ ಸೈನಿ ಬದಲಾಯಿಸುವ ಸಾಧ್ಯತೆಯಿದೆ.
ಸೈನಿಯಿಂದ ದುಬಾರಿ ರನ್
ದ್ವಿತೀಯ ಏಕದಿನ ಪಂದ್ಯದಲ್ಲಿ ನವದೀಪ್ ಸೈನಿ ದುಬಾರಿ ರನ್ ನೀಡಿದ್ದರು. ಏಳು ಓವರ್ ಎಸೆದಿದ್ದ ಸೈನಿ ಒಂದೂ ವಿಕೆಟ್ ಪಡೆಯದೆ 70 ರನ್ ನೀಡಿದ್ದರು. ಹೀಗಾಗಿ ಸೈನಿಗೆ 10 ಓವರ್ಗಳನ್ನು ನೀಡುವ ಬದಲು 1 ಓವರ್ ಅನ್ನು ಮಯಾಂಕ್ ಅಗರ್ವಾಲ್ ಎಸೆದಿದ್ದರು. ಇನ್ನು ಒಂದಿಷ್ಟು ಓವರ್ಗಳನ್ನು ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಎಸೆದಿದ್ದರು.
ಬದಲಾಗೋ ಬೌಲರ್ ಯಾರು?
ಕೊನೇ ಏಕದಿನ ಪಂದ್ಯಕ್ಕೆ ಸೈನಿ ಬದಲಿಗೆ ಬೇರೆ ಬೌಲರ್ ಅನ್ನು ಕೊಹ್ಲಿ ಅವರು ತಂಡಕ್ಕೆ ಕರೆತರುವ ನಿರೀಕ್ಷೆ ಹೆಚ್ಚಿದೆ. ಒಂದೋ ಸುಮಾರು 27 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ವೇಗಿ ಶಾರ್ದೂಲ್ ಠಾಕೂರ್ ಅಥವಾ ಯಾರ್ಕರ್ ಸ್ಪೆಷಾಲಿಸ್ಟ್ ತಂಗರಾಸು ನಟರಾಜನ್ ಪ್ಲೇಯಿಂಗ್ XIನಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ.
ಬೂಮ್ರಾ ಕತೆಯೇನು?
ಟೀಮ್ ಇಂಡಿಯಾದ ಬಹು ನಿರೀಕ್ಷಿತ ವೇಗಿ ಜಸ್ಪ್ರೀತ್ ಬೂಮ್ರಾ ಕೂಡ ಈ ಸಾರಿ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಎರಡು ಏಕದಿನ ಪಂದ್ಯಗಳಲ್ಲಿ ಕೇವಲ 2 ವಿಕೆಟ್ ಪಡೆದಿದ್ದಾರೆ. ಅದೂ ಕೂಡ ಹೆಚ್ಚು ರನ್ಗಳನ್ನು ನೀಡಿ. ಆದರೆ ಬೂಮ್ರಾ ಮತ್ತು ಶಮಿ ತಂಡದ ಪ್ರಮುಖ ವೇಗಿಗಳಾಗಿರುವುದರಿಂದ ಇವರಲ್ಲಿ ಬದಲಾವಣೆ ಸಾಧ್ಯತೆ ಕಡಿಮೆಯಿದೆ.