ಆಸ್ಟ್ರೇಲಿಯಾ ಕೋಚ್ ಚರ್ಚೆ
ರವೀಂದ್ರ ಜಡೇಜಾ ಬದಲಿಗೆ ಯುಜುವೇಂದ್ರ ಚಾಹಲ್ ಮೈದಾನಕ್ಕಿಳಿದಾಗ ಆಸ್ಟ್ರೇಲಿಯಾ ಕೋಚ್ ಜಸ್ಟಿನ್ ಲ್ಯಾಂಗರ್ ಅವರು ಮ್ಯಾಚ್ ರೆಫರೀ ಡೇವಿಡ್ ಬೂನ್ ಜೊತೆ ಚರ್ಚೆ ನಡೆಸಿದರು. ಲ್ಯಾಂಗರ್ ಜೊತೆ ಆಸೀಸ್ ನಾಯಕ ಆ್ಯರನ್ ಫಿಂಚ್ ಕೂಡ ಜೊತೆಗಿದ್ದರು. ಚಾಹಲ್ಗೆ ಬೌಲಿಂಗ್ಗೆ ಅವಕಾಶ ಕೊಡಬಾರದು ಎನ್ನುವ ವಾದ ಲ್ಯಾಂಗರ್ ಮತ್ತು ಫಿಂಚ್ ಅವರದ್ದಾಗಿತ್ತು. ಆದರೆ ರೆಫರೀ ಬೂನ್ ಅದಕ್ಕೆ ಒಪ್ಪಲಿಲ್ಲ.
ಚಾಹಲ್ ಮಾರಕ ಬೌಲಿಂಗ್
ಜಡೇಜಾ ಬದಲು ಮೈದಾನಕ್ಕಿಳಿದ ಚಾಹಲ್ ಆಸ್ಟ್ರೇಲಿಯಾದ ಪ್ರಮುಖ ವಿಕೆಟ್ಗಳನ್ನು ಉರುಳಿಸಿದರು. ನಾಯಕ ಆ್ಯರನ್ ಫಿಂಚ್ (35 ರನ್), ಸ್ಟೀವ್ ಸ್ಮಿತ್ (12) ಮತ್ತು ಮ್ಯಾಥ್ಯೂ ವೇಡ್ (7) ವಿಕೆಟ್ಗಳು ಲಭಿಸಿದವು. ಚಾಹಲ್ 4 ಓವರ್ಗೆ 25 ರನ್ ನೀಡಿ 3 ವಿಕೆಟ್ ಮುರಿದು ಗಮನ ಸೆಳೆದಿದ್ದರು. ಪಂದ್ಯ ಕೂಡ 11 ರನ್ನಿಂದ ಭಾರತ ಗೆದ್ದಿತು.
ಏನಿದು ಕನ್ಕಶನ್ ಸಬ್ಸ್ಟಿಟ್ಯೂಟ್ ನಿಯಮ?
2019ರಲ್ಲಿ ಲಾರ್ಡ್ಸ್ನಲ್ಲಿ ನಡೆದಿದ್ದ ಆ್ಯಷನ್ ಟೆಸ್ಟ್ನಲ್ಲಿ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಎಸೆತಕ್ಕೆ ಸ್ಟೀವ್ ಸ್ಮಿತ್ ಗಾಯಗೊಂಡಾಗ ಸ್ಮಿತ್ ಬದಲಿಗೆ ಮಾರ್ನಸ್ ಲ್ಯಾಬುಶೇನ್ ಅವರನ್ನು ಮೈದಾನಕ್ಕಿಳಿಸಲಾಗಿತ್ತು. ಇದು ಕನ್ಕಶನ್ ಸಬ್ಸ್ಟಿಟ್ಯೂಟ್ನ ಮೊದಲ ಉದಾಹರಣೆ. ಆಟಗಾರನಿಗೆ ತಲೆಗೆ ಹೊಡೆತ ಬಿದ್ದಾಗ, ಗಾಯವಾದಾಗ ಬೇರೆ ಆಟಗಾರರನ್ನು ಮೈದಾನಕ್ಕಿಳಿಸುವ ನಿಯಮವಿದು. ಈ ನಿಯಮವನ್ನು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳು ತಮ್ಮ ದೇಸಿ ಕ್ರಿಕೆಟ್ ವೇಳೆ ಬಳಸಿಕೊಂಡಿದ್ದವು. ಈಗ ಐಸಿಸಿ ಕೂಡ ಈ ನಿಯಮವನ್ನು ಎಲ್ಲಾ ಕ್ರಿಕೆಟ್ ಮಾದರಿಗೆ ತಂದಿದೆ.
ನೂತನ ಕನ್ಕಶನ್ ಸಬ್ಸ್ಟಿಟ್ಯೂಟ್ ನಿಯಮವೇನು?
ಐಸಿಸಿ ಹೊಸ ಕನ್ಕಶನ್ (ಸಂಘರ್ಷಣೆ) ಸಬ್ಸಿಸ್ಟಿಟ್ಯೂಟ್ ನಿಯಮದ ಪ್ರಕಾರ ಬ್ಯಾಟ್ಸ್ಮನ್ ಗಾಯಗೊಂಡಾಗ ಆತನಿಗೆ ಬದಲಿ ಆಟಗಾರನನ್ನು ಬ್ಯಾಟಿಂಗ್ ತಂಡ ಮೈದಾನಕ್ಕಿಳಿಸಬಹುದು. ಅದರೆ ಬರುವ ಬದಲಿ ಆಟಗಾರನನ್ನು ಬೌಲಿಂಗ್ ಮಾಡದಂತೆ ತಡೆಯುವ ಶಕ್ತಿ ಮ್ಯಾಚ್ ರೆಫರೀಗೆ ಇರುತ್ತದೆ. ಉದಾಹರಣೆ: ಅಪ್ಪಟ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ ಒಂದು ವೇಳೆ ಗಾಯಗೊಂಡರೆ ಆಸ್ಟ್ರೇಲಿಯಾ ತಂಡ ಮಿಚೆಲ್ ಮಾರ್ಷ್ ಅವರನ್ನು ಮೈದಾನಕ್ಕಿಳಿಸಬಹುದು. ಆದರೆ ಮ್ಯಾಚ್ ರೆಫರೀಗೆ ಮಾರ್ಷ್ ಅವರನ್ನು ಬೌಲಿಂಗ್ ಮಾಡದಂತೆ ತಡೆಯುವ ಶಕ್ತಿಯಿರುತ್ತದೆ.ಹಾಗಂತ ಆಸ್ಟ್ರೇಲಿಯಾ-ಭಾರತ ಪಂದ್ಯದಲ್ಲಿ ಚಾಹಲ್ ಅವರನ್ನು ಬೌಲಿಂಗ್ ಮಾಡದಂತೆ ರೆಫರೀ ಬೂನ್ ತಡೆಯಲಿಲ್ಲ. ಯಾಕೆಂದರೆ ಜಡೇಜಾ ಕೂಡ ಸ್ಪಿನ್ ಬೌಲರ್!