ದುಬಾರಿ ರನ್ ನೀಡಿದ ಬೂಮ್ರಾ
ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆರಂಭಿಕ ಎರಡು ಪಂದ್ಯಗಳು ಮುಗಿದಿದ್ದು, ಮೊದಲ ಪಂದ್ಯದಲ್ಲಿ ಬೂಮ್ರಾ 10 ಓವರ್ಗಳಲ್ಲಿ 73 ರನ್ ನೀಡಿ 1 ವಿಕೆಟ್, ದ್ವಿತೀಯ ಪಂದ್ಯದಲ್ಲಿ 10 ಓವರ್ ಎಸೆದು 79 ರನ್ ನೀಡಿ 1 ವಿಕೆಟ್ ಪಡೆದಿದ್ದರು. ಎರಡೂ ಪಂದ್ಯಗಳನ್ನು ಸೋತಿರುವ ಭಾರತ ಏಕದಿನ ಸರಣಿಯನ್ನೂ ಕಳೆದುಕೊಂಡಿದೆ.
ಬೂಮ್ರಾ ಬೆನ್ನಿಗೆ ರಾಹುಲ್
ಆದರೆ ನಿಯಮಿತ ಓವರ್ ಕ್ರಿಕೆಟ್ನಲ್ಲಿ ಉಪನಾಯಕರಾಗಿರುವ ಕೆಎಲ್ ರಾಹುಲ್ ಬೂಮ್ರಾ ಅವರನ್ನು ಬೆಂಬಲಿಸಿ ಮಾತನಾಡಿದ್ದಾರೆ. 'ಬೂಮ್ರಾ ಒಬ್ಬ ಚಾಂಪಿಯನ್ ಬೌಲರ್. ಆತನ ಉಪಸ್ಥಿತಿ ತುಂಬಾ ಅಮೂಲ್ಯವಾಗಿದೆ. ಬೂಮ್ರಾ ಮೌಲ್ಯ ನಮಗೆ ಗೊತ್ತು,' ಎಂದು ರಾಹುಲ್ ಹೇಳಿದ್ದಾರೆ.
ಬೂಮ್ರಾ ಮೌಲ್ಯ ನಮಗೆ ಗೊತ್ತು
'ಎಂಥ ದೊಡ್ಡ ಬೌಲರ್ ಆದರೂ ನಿಮ್ಮ ಪ್ರದರ್ಶನ ಕಮ್ಬ್ಯಾಕ್ ಮಾಡಿಕೊಳ್ಳಲು ನಿಮಗೊಂದು ಸಮಯ ಬರುತ್ತದೆ. ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿಕೆಟ್ಗಳು ಬ್ಯಾಟಿಂಗ್ಗೆ ಹೆಚ್ಚು ಅನುಕೂಲಕಾರಿ. ಇಂಥ ವಿಕೆಟ್ಗಳಲ್ಲಿ ಟೌಪ್ ಬೌಲರ್ ಕೂಡ ವಿಕೆಟ್ ಪಡೆಯದಿರುವುದನ್ನು ನೀವು ಗಮನಿಸಿರಬಹುದು. ಹೀಗಾಗಿ ಬೂಮ್ರಾ ಹಿನ್ನಡೆ ಒಪ್ಪಿಕೊಳ್ಳಬಹುದಾದಂಥದ್ದು,' ಎಂದು ರಾಹುಲ್, ಬೂಮ್ರಾ ಅವರನ್ನು ಸಮರ್ಥಿಸಿದ್ದಾರೆ.
3ನೇ ಪಂದ್ಯ ಪ್ರತಿಷ್ಠೆಯದ್ದು
ಮೂರು ಪಂದ್ಯಗಳ ಏಕದಿನ ಸರಣಿಯ ಕಡೇ ಪಂದ್ಯ ಡಿಸೆಂಬರ್ 2ರ ಬುಧವಾರ ನಡೆಯಲಿದೆ. ಇದು ಆಸ್ಟ್ರೇಲಿಯಾ ಪಾಲಿಗೆ ಔಪಚಾರಿಕವಾಗಿದ್ದರೆ, ಭಾರತದ ಪಾಲಿಗೆ ಪ್ರತಿಷ್ಠೆಯ ಪಂದ್ಯ. ಈ ಪಂದ್ಯದಲ್ಲಿ ಭಾರತ ಗೆದ್ದು ವೈಟ್ ವಾಷ್ ಮುಖಭಂಗ ತಪ್ಪಿಸಿಕೊಳ್ಳಬೇಕಿದೆ.