ಸಿಡ್ನಿ: ಕುತೂಹಲಕಾರಿ ಭಾರತ vs ಆಸ್ಟ್ರೇಲಿಯಾ ಸರಣಿ ಆರಂಭಕ್ಕೂ ಮುನ್ನವೇ ಭಾರತಕ್ಕೆ ಹಿನ್ನಡೆಯ ಸಂಗತಿಯೊಂದು ಕೇಳಿ ಬಂದಿದೆ. ಭಾರತ ಟೆಸ್ಟ್ ತಂಡದಲ್ಲಿ ಹೆಸರಿಸಲ್ಪಟ್ಟಿದ್ದ ರೋಹಿತ್ ಶರ್ಮಾ ಮತ್ತು ಇಶಾಂತ್ ಶರ್ಮಾ ಆಡುವ ತಂಡದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆಯಿದೆ. ಹೀಗಾಗಿ ಬದಲಿ ಆಟಗಾರರಿಗಾಗಿ ಹುಡುಕಾಟ ಶುರುವಾಗಿದೆ.
ತಂದೆಗೋಸ್ಕರ ಸಿರಾಜ್ ಟೆಸ್ಟ್ ಸರಣಿ ಗೆಲ್ಲಬಯಸಿದ್ದಾರೆ: ಇಸ್ಮಾಯಿಲ್
ತಂಡದ ಪ್ರಮುಖ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಗಾಯದ ಸಮಸ್ಯೆಯಲ್ಲಿದ್ದಾರೆ. ಇತ್ತ ಇಶಾಂತ್ ಶರ್ಮಾ ಕೂಡ ಗಾಯಗೊಂಡು ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ರೋಹಿತ್, ಇಶಾಂತ್ ಇಬ್ಬರೂ ಟೆಸ್ಟ್ ಸರಣಿಗೆ ಬೇಕಾದಷ್ಟು ಫಿಟ್ ಆಗಿ ಇಲ್ಲ ಎಂದು ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿರುವ ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ಒಂದು ವೇಳೆ ರೋಹಿತ್ ಮತ್ತು ಇಶಾಂತ್ ಇಬ್ಬರೂ ಟೆಸ್ಟ್ ಸರಣಿಯಲ್ಲಿ ಭಾಗವಹಿಸದಿದ್ದರೆ ಟೀಮ್ ಇಂಡಿಯಾ ಇನ್ನಷ್ಟು ದುರ್ಬಲಗೊಳ್ಳುತ್ತದೆ. ಯಾಕೆಂದರೆ ನಾಯಕ ವಿರಾಟ್ ಕೊಹ್ಲಿ ಕೂಡ ಪಿಂಕ್ ಬಾಲ್ ಟೆಸ್ಟ್ ಒಂದರಲ್ಲಿ ಆಡಿ ಇನ್ನುಳಿದ 3 ಟೆಸ್ಟ್ಗಳಿಂದ ವಿಶ್ರಾಂತಿ ಪಡೆಯಲಿದ್ದಾರೆ. ಹೀಗಾಗಿ ಮುಖ್ಯವಾಗಿ ಬ್ಯಾಟ್ಸ್ಮನ್ಗಾಗಿ ಎದುರು ನೋಡುತ್ತಿರುವ ತಂಡ ನಿರ್ವಹಣಾ ಸಮಿತಿ ಶ್ರೇಯಸ್ ಐಯ್ಯರ್ ಅವರತ್ತ ಚಿತ್ತ ನೆಟ್ಟಿದೆ.
ಭಾರತದ ವಿರುದ್ಧ ಸರಣಿಗೂ ಮುನ್ನ ಪ್ರತಿಜ್ಞೆ ಮಾಡಿದ ಡೇವಿಡ್ ವಾರ್ನರ್
ಆಸ್ಟ್ರೇಲಿಯಾ ವಿರುದ್ಧ ಏಕದಿನ ಮತ್ತು ಟಿ20ಐ ತಂಡದಲ್ಲಿ ಶ್ರೇಯಸ್ ಹೆಸರಿಸಲ್ಪಟ್ಟಿದ್ದಾರೆ. ಆದರೆ ಟೆಸ್ಟ್ ತಂಡದಲ್ಲಿ ಶ್ರೇಯಸ್ ಇಲ್ಲ. ತಂಡ ನಿರ್ವಹಣಾ ಸಮಿತಿ ಈಗ ರೋಹಿತ್ ಬದಲಿಗೆ ಶ್ರೇಯಸ್ ಅವರನ್ನು ಟೆಸ್ಟ್ ತಂಡಕ್ಕೆ ಮೀಸಲು ಆಟಗಾರರಾಗಿ ಸೇರಿಸಿಕೊಳ್ಳುವತ್ತ ಯೋಚಿಸುತ್ತಿದೆ ಎನ್ನಲಾಗಿದೆ. ಈ ಬಗ್ಗೆ ಬಿಸಿಸಿಐ ಇನ್ನೂ ಅಂತಿಮ ನಿರ್ಧಾರ ಪ್ರಕಟಿಸಿಲ್ಲ.