ಹೊಸ ಮುಖ ಪೃಥ್ವಿ ಶಾಗೆ ಅವಕಾಶ
ಈಗಾಗಲೇ ದೇಸಿ ಕ್ರಿಕೆಟ್ನಲ್ಲಿ ಭರವಸೆ ಮೂಡಿಸಿರುವ ಭಾರತ ಅಂಡರ್ 19 ವಿಶ್ವಕಪ್ ವಿಜೇತ ತಂಡದ ನಾಯಕ ಪೃಥ್ವಿ ಶಾ ಅವರು ಈ ಪಂದ್ಯದಿಂದ ಭಾರತ ತಂಡಕ್ಕೆ ಪ್ರವೇಶ ಗಿಟ್ಟಿಸಿಕೊಳ್ಳುವ ಸಾಧ್ಯತೆ ಇದೆ. ಟೂರ್ನಿಯಲ್ಲಿ ಸಂಪೂರ್ಣ ವಿಫಲರಾಗಿರುವ ಕರ್ನಾಟಕದ ಕೆ.ಎಲ್.ರಾಹುಲ್ ಅವರ ಬದಲಿಗೆ ಪೃಥ್ವಿ ಶಾ ಅವರು ಆಡುವ ಸಾಧ್ಯತೆ ಇದೆ.
ಹನುಮ ವಿಹಾರಿಗೆ ಅವಕಾಶ
ಭಾರತವು ಇಂಗ್ಲೆಂಡ್ನಲ್ಲಿ ಐದು ಬ್ಯಾಟ್ಸ್ಮನ್ಗಳೊಂದಿಗೆ ಕಣಕ್ಕಿಳಿಯುವ ತಂತ್ರ ಅನುಸರಿಸಿತ್ತು. ಆದರೆ ಈಗ ಕೊನೆಯ ಪಂದ್ಯ ಆದ್ದರಿಂದ ಕಳೆದುಕೊಳ್ಳಲು ಏನೂ ಇಲ್ಲ ಹಾಗಾಗಿ ಪ್ರಯೋಗಕ್ಕಾಗಿ ಆರು ಬ್ಯಾಟ್ಸ್ಮನ್ಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯೂ ಇದೆ. ಹಾಗಾದಲ್ಲಿ ಹನುಮ ವಿಹಾರಿ ಅಥವಾ ಕರುಣ್ ನಾಯರ್ಗೆ ಅವಕಾಶ ಸಿಗುವ ಸಾಧ್ಯತೆ ಇದೆ.
ಅನಧಿಕೃತ ಟೆಸ್ಟ್: ಭಾರತ 'ಎ' ವಿರುದ್ಧ ಆಸ್ಟ್ರೇಲಿಯಾ 'ಎ'ಗೆ 98 ರನ್ ಜಯ
ಅಶ್ವಿನ್ ಬದಲು ಜಡೇಜಾ
ಭಾರತ ತಂಡದ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಬದಲಿಗೆ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ಅವಕಾಶ ಪಡೆಯುವ ಸಾಧ್ಯತೆಯೂ ಇದೆ. ಅಶ್ವಿನ್ ಅವರು ಗಾಯಾಳುವಾಗಿರುವ ಕಾರಣ ಅವರು ತಂಡದಿಂದ ಹೊರಗುಳಿಯಲಿದ್ದಾರೆ. ಉತ್ತಮ ಆಲ್ರೌಂಡರ್ ಕೂಡಾ ಆಗಿರುವ ಜಡೇಜಾ ಅವರಿಗೆ ಆಡುವ 11 ರ ಬಳಗದಲ್ಲಿ ಅವಕಾಶ ಸಿಕ್ಕರೆ ಆಶ್ಚರ್ಯವಿಲ್ಲ.
ಬ್ಯಾಟಿಂಗ್ ಆರ್ಡರ್ ಬದಲಾವಣೆ
ಆರಂಭಿಕ ಬ್ಯಾಟ್ಸ್ಮನ್ ಸ್ಥಾನದಲ್ಲಿ ಈ ಸರಣಿಯಲ್ಲಿ ಸತತವಾಗಿ ವಿಫಲವಾಗಿರುವ ಕೆ.ಎಲ್.ರಾಹುಲ್ ಅವರನ್ನು ನಾಲ್ಕನೇ ಸ್ಥಾನಕ್ಕೆ ಕಳುಹಿಸಿ ಅಜಿಂಕ್ಯಾ ರಹಾನೆಯನ್ನು ಆರಂಭಿಕ ಬ್ಯಾಟ್ಸ್ಮನ್ ಸ್ಥಾನಕ್ಕೆ ಕಳುಹಿಸುವ ಪ್ರಮುಖ ಬದಲಾವಣೆ ಮಾಡುವ ಸಾಧ್ಯತೆ ಇದೆ. ಹೀಗಾದಲ್ಲಿ ತಮ್ಮ ಫಾರ್ಮ್ ಮರಳಿ ಪಡೆಯಲು ಒದ್ದಾಡುತ್ತಿರುವ ರಾಹುಲ್ಗೆ ಉತ್ತಮ ಅವಕಾಶ ದೊರೆತಂತಾಗುತ್ತದೆ.
ಬೂಮ್ರಾಗೆ ವಿಶ್ರಾಂತಿ
ಈ ಸರಣಿಯ ಭಾರತದ ಅತಿಮುಖ್ಯ ಬೌಲಿಂಗ್ ಸಕಾರಾತ್ಮಕ ಅಂಶವಾದ ಜಸ್ಪ್ರೀತ್ ಬುಮ್ರಾ ಅವರಿಗೆ ಈ ಪಂದ್ಯದಲ್ಲಿ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಅವರು ಗಾಯಗೊಂಡು ಆ ನಂತರ ಸರಣಿಗೆ ಮರಳಿದ್ದರು. ಮುಂದೆ ಏಷ್ಯಾ ಕಪ್ಗೂ ಅವರು ಆಯ್ಕೆ ಆಗಿರುವ ಕಾರಣ ಫಿಟ್ನೆಸ್ಗಾಗಿ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ.
ರಿಷಬ್ ಪಂಥ್ ಹೊರಕ್ಕೆ
ಉತ್ತಮ ಪ್ರದರ್ಶನ ತೋರಲು ದಿನೇಶ್ ಕಾರ್ತಿಕ್ ವಿಫಲರಾದ ಕಾರಣ ಅವಕಾಶ ಪಡೆದಿದ್ದ ರಿಷಬ್ ಪಂಥ್ ಸಹ ಸಿಕ್ಕ ಅವಕಾಶ ಬಳಸಿಕೊಳ್ಳದೆ ವಿಫಲರಾದ ಕಾರಣ ಅವರ ಸ್ಥಾನಕ್ಕೆ ಮತ್ತೆ ದಿನೇಶ್ ಕಾರ್ತಿಕ್ ಅವರನ್ನೆ ಸೇರಿಸಿಕೊಳ್ಳುವ ಸಾಧ್ಯತೆಯೂ ಇದೆ.