ಜೂನ್ 20ರಂದು ಇಂಗ್ಲೆಂಡ್ಗೆ ತೆರಳಲು ಸಜ್ಜು
ರೋಹಿತ್ ಶರ್ಮಾ ಜೂನ್ 20ರಂದು ಇಂಗ್ಲೆಂಡ್ಗೆ ತೆರಳಲು ಸಿದ್ಧರಾಗಿದ್ದು, ದಕ್ಷಿಣ ಆಫ್ರಿಕಾ ವಿರುದ್ಧ ಸ್ವದೇಶದಲ್ಲಿ ನಡೆಯುತ್ತಿರುವ ಟಿ20 ಸರಣಿಯನ್ನು ಪೂರ್ಣಗೊಳಿಸಿದ ನಂತರ ಯುಕೆಗೆ ತೆರಳುವ ಆಟಗಾರರ ಗುಂಪಿನೊಂದಿಗೆ ತೆರಳಲಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ನಲ್ಲಿ ರೋಹಿತ್ ಶರ್ಮಾ ಭಾರತವನ್ನು ಮುನ್ನಡೆಸಲಿದ್ದಾರೆ. ಜುಲೈ 1 ರಿಂದ ಬರ್ಮಿಂಗ್ಹ್ಯಾಮ್ನಲ್ಲಿ ಭಾರತ ಮತ್ತು ಇಂಗ್ಲೆಂಡ್ ಕೊನೆಯ ಟೆಸ್ಟ್ನಲ್ಲಿ ಮುಖಾಮುಖಿಯಾಗಲಿವೆ.
ಭಾರತದ ಬಹುತೇಕ ಟೆಸ್ಟ್ ಆಟಗಾರರು ಯುಕೆಗೆ ತೆರಳಿದ್ದಾರೆ
ಗುರುವಾರ ಜೂನ್ 16ರಂದು ಬೆಳಿಗ್ಗೆ ಮುಂಬೈನಿಂದ ಮಾಜಿ ನಾಯಕ ವಿರಾಟ್ ಕೊಹ್ಲಿ, ವೇಗಿಗಳಾದ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ಚೇತೇಶ್ವರ ಪೂಜಾರ ಮತ್ತು ಆರಂಭಿಕ ಆಟಗಾರ ಶುಭಮನ್ ಗಿಲ್, ಆಲ್ರೌಂಡರ್ಗಳಾದ ರವೀಂದ್ರ ಜಡೇಜಾ ಮತ್ತು ಶಾರ್ದೂಲ್ ಠಾಕೂರ್ ಸೇರಿದಂತೆ ಭಾರತದ ಬಹುತೇಕ ಟೆಸ್ಟ್ ಆಟಗಾರರು ಯುಕೆಗೆ ತೆರಳಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯ ಭಾಗವಾಗಿರುವ ರಿಷಭ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಕೂಡ ಇಂಗ್ಲೆಂಡ್ನಲ್ಲಿ ಟೆಸ್ಟ್ ತಂಡವನ್ನು ರೋಹಿತ್ ಶರ್ಮಾರೊಂದಿಗೆ ಸೇರಿಕೊಳ್ಳಲಿದ್ದಾರೆ. ಇದೇ ವೇಳೆ ಗುರುವಾರ ಮುಂಬೈನಿಂದ ನಿರ್ಗಮಿಸಿದ ಟೆಸ್ಟ್ ಆಟಗಾರರ ಬ್ಯಾಚ್ನೊಂದಿಗೆ ಆಫ್ ಸ್ಪಿನ್ನರ್ ಆರ್. ಅಶ್ವಿನ್ ಕೂಡ ಕಾಣಿಸಿಕೊಂಡಿಲ್ಲ.
ಲೀಸೆಸ್ಟರ್ಶೈರ್ ವಿರುದ್ಧ 4 ದಿನಗಳ ಅಭ್ಯಾಸ ಪಂದ್ಯ
ಜೂನ್ 26 ಮತ್ತು 28ರಂದು ಐರ್ಲೆಂಡ್ ವಿರುದ್ಧ ಹಾರ್ದಿಕ್ ಪಾಂಡ್ಯ ನಾಯಕತ್ವದ ಟಿ20 ತಂಡವು 2 ಟಿ20 ಪಂದ್ಯಗಳನ್ನು ಆಡಲಿರುವಂತೆಯೇ ಭಾರತವು ಜೂನ್ 24ರಿಂದ 27ರವರೆಗೆ ಲೀಸೆಸ್ಟರ್ಶೈರ್ ವಿರುದ್ಧ 4 ದಿನಗಳ ಅಭ್ಯಾಸ ಪಂದ್ಯವನ್ನು ಆಡಲಿದೆ.
ಕಳೆದ ವರ್ಷ ಇಂಗ್ಲೆಂಡ್ನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಭಾರತವು ಲಾರ್ಡ್ಸ್ ಮತ್ತು ಓವಲ್ನಲ್ಲಿ ಗೆದ್ದು 2-1 ಮುನ್ನಡೆ ಸಾಧಿಸಿದಾಗ ರೋಹಿತ್ ಶರ್ಮಾ ಅವರು ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಅಗ್ರ ಕ್ರಮಾಂಕ ಬ್ಯಾಟಿಂಗ್ನಲ್ಲಿ ಅಗ್ರಸ್ಥಾನದಲ್ಲಿದ್ದರು. ರೋಹಿತ್ ಶರ್ಮಾ 4 ಟೆಸ್ಟ್ಗಳಲ್ಲಿ 368 ರನ್ ಗಳಿಸಿದರು. ಇಂಗ್ಲೆಂಡ್ನ ಮಾಜಿ ನಾಯಕ ಜೋ ರೂಟ್ ಅವರು 564 ರನ್ ಗಳಿಸಿದ್ದಾರೆ.
ಏಕೈಕ ಟೆಸ್ಟ್ಗೆ ರಾಹುಲ್ ಭಾರತ ತಂಡದ ಭಾಗವಾಗುವ ಸಾಧ್ಯತೆ ಕಡಿಮೆ
ಮುಂಬೈ ಇಂಡಿಯನ್ಸ್ನೊಂದಿಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ಅಭಿಯಾನವನ್ನು ಪೂರ್ಣಗೊಳಿಸಿದ ನಂತರ ರೋಹಿತ್ ಶರ್ಮಾ ಮಾಲ್ಡೀವ್ಸ್ನಲ್ಲಿ ತಮ್ಮ ಕುಟುಂಬದೊಂದಿಗೆ ವಿಶ್ರಾಂತಿ ಮುಗಿಸಿದ ನಂತರ ಭಾರತಕ್ಕೆ ಮರಳಿದರು. ರಿಷಭ್ ಪಂತ್ ನಾಯಕತ್ವದಲ್ಲಿ ಟಿ20 ಸರಣಿ ಆಡುತ್ತಿರುವ ತಂಡದಿಂದ ರೋಹಿತ್, ಕೊಹ್ಲಿ, ಬುಮ್ರಾ, ಶಮಿ ಮತ್ತು ಜಡೇಜಾ ಮುಂತಾದವರಿಗೆ ವಿಶ್ರಾಂತಿ ನೀಡಲಾಗಿದೆ.
ಈ ಮಧ್ಯೆ, ಗಾಯದಿಂದ ಹೊರಗುಳಿಯುವ ಮೊದಲು ದಕ್ಷಿಣ ಆಫ್ರಿಕಾ ಸರಣಿಯ ಟಿ20 ತಂಡದ ನಾಯಕರಾಗಿ ಹೆಸರಿಸಲ್ಪಟ್ಟ ಕೆಎಲ್ ರಾಹುಲ್ ಅವರು ಇನ್ನೂ ಚೇತರಿಸಿಕೊಳ್ಳದ ಕಾರಣ ಏಕೈಕ ಟೆಸ್ಟ್ಗೆ ಭಾರತ ತಂಡದ ಭಾಗವಾಗುವ ಸಾಧ್ಯತೆ ಕಡಿಮೆ ಇದ್ದು, ಭಾರತಕ್ಕೆ ಅಲ್ಪ ಹಿನ್ನಡೆಯಾದಂತಿದೆ.