ಆತ ಕಣ್ಸೆಳೆಯುವ ಪ್ರತಿಭೆ
"ನಾವು ಒಂದೇ ಬ್ಯಾಚ್ನ ಆಟಗಾರರು ಅಲ್ಲ. ಆದರೆ ಆತನ ಆಟವನ್ನು ನಾನು ಜ್ಯೂನಿಯರ್ ಕ್ರಿಕೆಟ್ ಹಾಗೂ ನೆಟ್ನಲ್ಲಿ ಸಾಕಷ್ಟು ಬಾರಿ ನೋಡಿದ್ದೇನೆ. ಆತ ನಿಮ್ಮ ಕಣ್ಣು ಸೆಳೆಯುವಂತಾ ವಿಶೇಷ ಪ್ರತಿಭೆ ಹೊಂದಿರುವ ಆಟಗಾರ" ಎಂದು ಎರಡನೇ ಪಂದ್ಯಕ್ಕೆ ಮುನ್ನ ವರ್ಚುವಲ್ ಪ್ರೆಸ್ ಕಾನ್ಫರೆನ್ಸ್ನಲ್ಲಿ ಹೇಳಿದರು.
ವೇಗವಾಗಿ ಬೌಲಿಂಗ್ ಮಾಡುವ ಸಾಮರ್ಥ್ಯ
ಇನ್ನು ಇದೇ ಸಂದರ್ಭದಲ್ಲಿ ಪ್ರಸಿದ್ಧ್ ಕೃಷ್ಣ ಅವರ ಸಾಮರ್ಥ್ಯದ ಬಗ್ಗೆ ಕೆಎಲ್ ರಾಹುಲ್ ಮಾತನಾಡಿದರು. "ಆತ ಓರ್ವ ಎತ್ತರದ ಆಟಗಾರನಾಗಿದ್ದು ವೇಗವಾಗಿ ಬೌಲಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಸಾಕಷ್ಟು ಬೌನ್ಸ್ಗಳನ್ನು ಎಸೆಯಬಲ್ಲವರಾಗಿದ್ದಾರೆ. ಕಳೆದ ಕೆಲ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಆಡಿದ ನಂತರ ಆತನೋರ್ವ ಧೈರ್ಯವಂತ ಆಟಗಾರ ಎಂದು ನಾನು ಕಂಡುಕೊಂಡೆ" ಎಂದು ಕೆಎಲ್ ರಾಹುಲ್ ಪ್ರಸಿದ್ಧ್ ಕೃಷ್ಣ ಬಗ್ಗೆ ವಿವರಿಸಿದರು.
ಕೌಶಲ್ಯ ಮಾತ್ರವಲ್ಲ ಆಟವನ್ನು ಅರ್ಥೈಸುವುದರಲ್ಲು ಮುಂದು
"ಆತ ಆಟದ ಬಗ್ಗೆ ಸಾಕಷ್ಟು ಸೂಕ್ಷ್ಮತೆಗಳನ್ನು ಅರಿತುಕೊಂಡಿದ್ದಾರೆ. ಅದು ಕೇವಲ ಕೌಶಲ್ಯದ ವಿಚಾರವಾಗಿ ಮಾತ್ರವಲ್ಲ. ಅಟವನ್ನು ಅರ್ಥ ಮಾಡಿಕೊಳ್ಳುವುದು ಹಾಗೂ ಅರಿತುಕೊಳ್ಳುವ ವಿಚಾರದಲ್ಲಿಯೂ ಪ್ರಸಿದ್ಧ್ ಅತ್ಯುತ್ತಮ ಆಟಗಾರ. ತುಂಬಾ ವೇಗವಾಗಿ ಕಲಿಯುವ ಸಾಮರ್ಥ್ಯ ಆತನಲ್ಲಿದೆ. ಈಗಾಗಲೇ ಹೇಳಿದಂತೆ ತುಂಬಾ ಧೈರ್ಯಶಾಲಿ ಮತ್ತು ಸಾಕಷ್ಟು ಆಕ್ರಮಣಶೀಲತೆಯೊಂದಿಗೆ ಆಡುತ್ತಾರೆ" ಎಂದಿದ್ದಾರೆ ಕೆಎಲ್ ರಾಹುಲ್.
ಎರಡನೇ ಪಂದ್ಯದಲ್ಲಿಯೂ ಕಣಕ್ಕಿಳಿಯುವ ನಿರೀಕ್ಷೆ
ಪ್ರಸಿದ್ಧ್ ಕೃಷ್ಣ ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಅದ್ಭುತ ಆಟವನ್ನು ಪ್ರದರ್ಶಿಸಿ ತಂಡದ ಗೆಲುವಿನಲ್ಲಿ ತಮ್ಮದೇ ಕೊಡುಗೆಯನ್ನು ನೀಡಿದ್ದಾರೆ. ಹೀಗಾಗಿ ಶುಕ್ರವಾರ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿಯೂ ಆಡುವ ಬಳಗದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.