ಕ್ರಿಕೆಟ್ನಲ್ಲಿ ಬಂದಿರುವ ಪ್ರಬುದ್ಧತೆ
"ಹಾರ್ದಿಕ್ ಪಾಂಡ್ಯ ಅವರ ಬ್ಯಾಟಿಂಗ್ ಮತ್ತು ಒಟ್ಟಾರೆ ಅವರ ಕ್ರಿಕೆಟ್ನಲ್ಲಿ ಬಂದಿರುವ ಪ್ರಬುದ್ಧತೆಯನ್ನು ನೋಡುವುದು ಖುಷಿಯಾಗುತ್ತದೆ. ಅವರು ತಮ್ಮ ಸ್ವಲ್ಪ ಜವಾಬ್ದಾರಿಯಿಂದ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ. ಈ ಹಿಂದೆ ಅವರು ಸೂಪರ್ಸ್ಟಾರ್ಗಳ ತಂಡದಲ್ಲಿ ಆಡಿದಾಗ, ಅಂದರೆ, ಮುಂಬೈ ಇಂಡಿಯನ್ಸ್ ಆಗಿರಲಿ ಅಥವಾ ಭಾರತವೇ ಆಗಿರಲಿ ಸೂಪರ್ಸ್ಟಾರ್ಗಳ ತಂಡದಲ್ಲಿ ಬೆಳೆದಿದ್ದೇನೆ ಎಂದುಕೊಂಡಿದ್ದರು".
"ನಾನು ನನ್ನ ಆಟವನ್ನು ಆಡುತ್ತೇನೆ, ಏಕೆಂದರೆ ಉಳಿದ ಆಟಗಾರರು ನನ್ನನ್ನು ನೋಡಿಕೊಳ್ಳುತ್ತಾರೆ. ನಾನು ವಿಫಲವಾದರೆ ಅವರು ಮುನ್ನಡೆಸುತ್ತಾರೆ," ಎಂದುಕೊಳ್ಳುತ್ತಿದ್ದರು ಎಂದು ಸುನಿಲ್ ಗವಾಸ್ಕರ್ ಹೇಳಿದರು.
ಪಾಂಡ್ಯ ತಮ್ಮ ಜವಾಬ್ದಾರಿಯನ್ನು ತಿಳಿದಿದ್ದಾರೆ
"ಆದರೆ ಹಾರ್ದಿಕ್ ಪಾಂಡ್ಯ ಇದೀಗ ನಾಯಕನಾಗಿ, ಅವರು ತಮ್ಮ ಜವಾಬ್ದಾರಿಯನ್ನು ತಿಳಿದಿದ್ದಾರೆ. ಅವರು ತಮ್ಮ ತಂಡವನ್ನು ತಾನೇ ಮುನ್ನಡೆಸಬೇಕೆಂದು ಅವರಿಗೆ ತಿಳಿದಿದೆ. ಅದು ಅವರನ್ನು ಕ್ರಿಕೆಟಿಗನಾಗಿ ಮಾತ್ರ ಸುಧಾರಿಸಿದೆ ಮತ್ತು ಅದು ಭಾರತೀಯ ಕ್ರಿಕೆಟ್ಗೆ ಒಳ್ಳೆಯದು," ಎಂದು ಮಾಜಿ ಭಾರತೀಯ ಕ್ರಿಕೆಟ್ ನಾಯಕ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟರು.
ಭಾರತ ತಂಡದ ನಾಯಕತ್ವದ ವಿಷಯದಲ್ಲಿ ಬಿಸಿಸಿಐ ಆಯ್ಕೆಗಾರರು ಮುಂದಿನ ಆಯ್ಕೆಗಳನ್ನು ನೋಡುತ್ತಿದ್ದಾರೆ. ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್ ಮತ್ತು ರಿಷಭ್ ಪಂತ್ ಅವರಂತಹವರು ಟೀಮ್ ಇಂಡಿಯಾದ ಭವಿಷ್ಯದ ನಾಯಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆ.
0-2 ರಿಂದ ಹಿನ್ನಡೆಯಲ್ಲಿದ್ದ ನಂತರ 2-2 ರಿಂದ ಸಮಬಲ
ದಕ್ಷಿಣ ಆಫ್ರಿಕಾದಲ್ಲಿ ನಡೆದ 3 ಏಕದಿನ ಪಂದ್ಯಗಳ ನಾಯಕತ್ವವನ್ನು ಕೆಎಲ್ ರಾಹುಲ್ ಅವರಿಗೆ ನೀಡಲಾಯಿತು. ಅವರು ದಕ್ಷಿಣ ಆಫ್ರಿಕಾ ವಿರುದ್ಧ 5 ಟಿ20 ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಬೇಕಾಗಿತ್ತು. ಆದರೆ ಅವರು ಗಾಯದ ಕಾರಣದಿಂದಾಗಿ ಅವರು ಮುನ್ನಡೆಸಲಿಲ್ಲ.
ನಂತರ ರಿಷಭ್ ಪಂತ್ ಅವರನ್ನು ಭಾರತದ ನಾಯಕರನ್ನಾಗಿ ಮಾಡಲಾಯಿತು ಮತ್ತು ಅವರು ಸರಣಿಯಲ್ಲಿ 0-2 ರಿಂದ ಹಿನ್ನಡೆಯಲ್ಲಿದ್ದ ನಂತರ ಸರಣಿಯನ್ನು 2-2 ರಿಂದ ಸಮಬಲಗೊಳಿಸುವಲ್ಲಿ ಯಶಸ್ವಿಯಾದರು. ನಾಯಕತ್ವದಲ್ಲಿ ಅಪಾರ ಪ್ರಬುದ್ಧತೆಯನ್ನು ತೋರಿಸಿದರು. ಇದೀಗ ಎರಡು ಪಂದ್ಯಗಳ ಸರಣಿಯಲ್ಲಿ ಭಾರತದ ಯುವ ತಂಡವನ್ನು ಮುನ್ನಡೆಸುವಾಗ ನಾಯಕನಾಗಿ ಅದ್ಭುತ ಪ್ರದರ್ಶನ ನೀಡುವ ಸರದಿ ಹಾರ್ದಿಕ್ ಪಾಂಡ್ಯ ಅವರದ್ದಾಗಿದೆ.
ಐರ್ಲೆಂಡ್ ವಿರುದ್ಧ ಭಾರತ ತಂಡ
ಹಾರ್ದಿಕ್ ಪಾಂಡ್ಯ (ನಾಯಕ), ಭುವನೇಶ್ವರ್ ಕುಮಾರ್ (ಉಪ ನಾಯಕ), ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಆರ್. ಬಿಷ್ಣೋಯ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಶ್ದೀಪ್ ಸಿಂಗ್, ಉಮ್ರಾನ್ ಮಲಿಕ್.