ಅಂತಿಮ ದಿನದ ಮೊದಲ ಸೆಶನ್ನಲ್ಲಿ ಭಾರತಕ್ಕೆ ಹಿನ್ನಡೆ
ನಾಲ್ಕನೇ ದಿನದಾಟದ ಮುಕ್ತಾಯದಲ್ಲಿ ಟೀಮ್ ಇಂಡಿಯಾ ದಿನಾಟಕ್ಕೆ ಕೆಲವೇ ಓವರ್ಗಳ ಆಟ ಬಾಕಿಯಿರುವಾಗ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ ಕಿವೀಸ್ಗೆ ಅಂತಿಮ ಇನ್ನಿಂಗ್ಸ್ನಲ್ಲಿ 284 ರನ್ಗಳಿಸುವ ಸವಾಲು ನೀಡಿತ್ತು. ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ನಡೆಸಲು ಆರಂಭಿಸಿದ ನ್ಯೂಜಿಲೆಂಡ್ ತಂಡದ ಮೊದಲ ವಿಕೆಟ್ಅನ್ನು ಟೀಮ್ ಇಂಡಿಯಾ ಆರಂಭದಲ್ಲಿಯೇ ಪಡೆದುಕೊಂಡಿತ್ತು. ಮೂರು ರನ್ಗಳಿಗೆ ನ್ಯೂಜಿಲೆಂಡ್ ಮೊದಲ ವಿಕೆಟ್ ಕಳೆದುಕೊಂಡಿತ್ತು. ನಂತರ ನ್ಯೂಜಿಲೆಂಡ್ ತಂಡದ ನಾಲ್ಕನೇ ದಿನದಾಟದ ಅಂತ್ಯಕ್ಕಾಗುವಾದ ಕೇವಲ 14 ರನ್ಗಳಿಗೆ 1 ವಿಕೆಟ್ ಕಳೆದುಕೊಂಡಿತ್ತು. ಹೀಗಾಗಿ ಕೊನೆಯ ದಿನ ಭಾರತೀಯ ಬೌಲರ್ಗಳ ಕೈ ಮೇಲಾಗುತ್ತದೆ ಎಂಬ ಲೆಕ್ಕಾಚಾರಗಳು ನಡೆದಿತ್ತು.
ಈ ಜೋಡಿ ಬೇರ್ಪಡಿಸಲು ಹರಸಾಹಸ
ಆದರೆ ಅಂತಿಮ ದಿನದ ಮೊದಲ ಇನ್ನಿಂಗ್ಸ್ನಲ್ಲಿ ಕಿವೀಸ್ ಪಡೆ ಭಾರತದ ದಾಳಿಯನ್ನು ದಿಟ್ಟವಾಗಿ ಎದುರಿಸಿತು. ಆರಂಭಿಕ ಆಟಗಾರ ಟಾಮ್ ಲಾಥನ್ ಅವರೊಂದಿಗೆ ನೈಟ್ ವಾಚ್ ಮಾನ್ ಆಗಿ ಕಣಕ್ಕಿಳಿದ ವಿಲಿಯಮ್ ಸೋಮರ್ವಿಲ್ಲೆ ಭಾರತೀಯ ಬೌಲರ್ಗಳಿಗೆ ಅಡ್ಡಿಯಾದರು. ಈ ಜೋಡಿಯನ್ನು ಬೇರ್ಪಡಿಸುವುದೇ ತಂಡಕ್ಕೆ ಸವಾಲಾಗಿತ್ತು. ಎಚ್ಚರಿಕೆಯಿಂದ ಆಡಿದ ಈ ಜೋಡಿ ಎರಡನೇ ವಿಕೆಟ್ಗೆ ನಿರ್ಣಾಯಕ 76 ರನ್ಗಳ ಕೊಡುಗೆಯನ್ನು ನೀಡಿದರು. 110 ಎಸೆತ ಎದುರಿಸಿದ್ದ ಸೋಮರ್ವಿಲ್ಲೆ 36 ರನ್ಗಳಿಸಿದ್ದಾಗ ಉಮೇಶ್ ಯಾದವ್ಗೆ ವಿಕೆಟ್ ಒಪ್ಪಿಸುವ ಮೂಲಕ ಈ ಜೋಡಿ ಬೇರ್ಪಟ್ಟಿತು. ಈ ಜೊತೆಯಾಟ ನ್ಯೂಜಿಲೆಂಡ್ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಬಹಳ ಪ್ರಮುಖ ಪಾತ್ರವಹಿಸಿತ್ತು.
ತಡೆಯಾದ ರಚಿನ್ ರವೀಂದ್ರ
ನ್ಯೂಜಿಲೆಂಡ್ ತಂಡದ ಆಲ್ರೌಂಡರ್ ರಚಿನ್ ರವೀಂದ್ರ ಇದೇ ಮೊದಲ ಬಾರಿಗೆ ಟೆಸ್ಟ್ ಪಂದ್ಯದಲ್ಲಿ ಕಿವೀಸ್ ಪಡೆಯನ್ನು ಪ್ರತಿನಿಧಿಸುತ್ತಿದ್ದಾರೆ. ಬೌಲರ್ ಆಗಿ ವಿಫಲವಾದ ರಚಿನ್ ರವೀಂದ್ರ ಈ ಪಂದ್ಯದಲ್ಲಿ ತಂಡ ಸೋಲದಂತೆ ಕಾಪಾಡಲು ಮಹತ್ವದ ಪಾತ್ರವಹಿಸಿದರು ಎಂಬುದು ಗಮನಾರ್ಹ ಸಂಗತಿ. ರಾಚಿನ್ ರವೀಂದ್ರ ಕ್ರೀಸ್ಗೆ ಇಳಿದಾಗ ತಂಡ ಅಕ್ಷರಶಃ ಸೋಲಿನ ದವಡೆಯಲ್ಲಿತ್ತು. 138/7 ವಿಕೆಟ್ ಕಳೆದುಕೊಂಡಿದ್ದಾಗ ರವೀಂದ್ರ ಕಣಕ್ಕಿಳಿದಿದ್ದರು. ಆಗ ಪಂದ್ಯದ ಮುಕ್ತಾಯಕ್ಕೆ ಇನ್ನು 20ಕ್ಕೂ ಹೆಚ್ಚು ಓವರ್ಗಳ ಅಗತ್ಯವಿತ್ತು. ಆದರೆ ಕಿವೀಸ್ ಕೈಯಲ್ಲಿದ್ದಿದ್ದು ಕೇವಲ ಮೂರು ವಿಕೆಟ್ ಮಾತ್ರ. ಈ ಪರಿಸ್ಥಿತಿಯನ್ನು ಅರಿತ ಕಿವೀಸ್ ತಂಡದ ಈ ಆಟಗಾರ ಅತ್ಯಂತ ತಾಳ್ಮೆಯ ಆಟವನ್ನು ಆಡಿದರು. ಮತ್ತೊಂದು ತುದಿಯಲ್ಲಿ ಎರಡು ವಿಕೆಟ್ ಕಳೆದುಕೊಂಡರು ಕೂಡ ಅಂತಿಮ ಹಂತದಲ್ಲಿ ಅಜೀಜ್ ಪಟೇಲ್ ಜೊತೆಗೆ ಸೇರಿಕೊಂಡು ಭಾರತೀಯ ಬೌಲರ್ಗಳ ದಾಳಿಯನ್ನು ವಿಫಲಗೊಳಿಸಿದರು. ಅಂತಿಮವಾಗಿ ಮಂದಗತಿಯಿಂದ ಪಂದ್ಯವನ್ನು ಅಂತ್ಯಗೊಳಿಸಲು ನಿರ್ಧರಿಸಿದಾಗ ಕಿವೀಸ್ ಪಡೆ 165 ರನ್ಗಳಿಗೆ 9 ವಿಕೆಟ್ ಕಳೆದುಕೊಂಡಿತ್ತು. ರಚಿನ್ ರವೀಂದ್ರ ಬರೊಬ್ಬರಿ 91 ಎಸೆತಗಳನ್ನು ಎದುರಿಸಿ ಅಜೇಯವಾಗುಳಿದಿದ್ದರು. ಈ ಮೂಲಕ ತಂಡವನ್ನು ಸೋಲಿನಿಂದ ಪಾರು ಮಾಡಿದ್ದರು. ಅಜೀಜ್ ಪಟೇಲ್ ಕೂಡ 23 ಎಸೆತ ಎದುರಿಸಿದ 2 ರನ್ಗಳಿಸುವ ಮೂಲಕ ಅಜೇಯವಾಗಿ ಉಳಿದಿದ್ದರು.
ಗೆಲುವಿಗೆ ಅಡ್ಡಿಯಾದ ಸೂರ್ಯ
ಇನ್ನು ಟೀಮ್ ಇಂಡಿಯಾದ ಗೆಲುವಿಗೆ ಅಡ್ಡಿಯಾದ ಮತ್ತೊಂದು ಪ್ರಮುಖ ಅಂಶವೆಂದರೆ ಸೂರ್ಯ. ದಿನದಂತ್ಯದಲ್ಲಿ ಮೋಡ ಬೆಳಕಿನಾಟ ಪೂರ್ಣ ಪ್ರಮಾಣದ ಆಟ ಸಾಗಲು ಬಿಡಲಿಲ್ಲ. ದಿನದಾಟದ ನಿಗದಿತ ಓವರ್ಗಳು ಸಂಪೂರ್ಣವಾಗುವ ಮುನ್ನವೇ ಬೆಳಕಿನ ಅಭಾವ ಉಂಟಾಗಿತ್ತು. ಅನೇಕ ಬಾರಿ ಅಂಪಾಯರ್ಗಳು ಪರಿಶೀಲಿಸಿದ ಬಳಿಕ ಪಂದ್ಯ ಮುಂದುವರಿಸುವುದು ಅಸಾಧ್ಯ ಎಂದು ನಿರ್ಧರಿಸಿದರು. ಹೀಗಾಗಿ ಅಂತಿಮ ಹಂತದಲ್ಲಿ ಇದ್ದ ಸಣ್ಣ ಅವಕಾಶವೂ ಟೀಮ್ ಇಂಡಿಯಾದ ಕೈ ತಪ್ಪಿತು. ಹೀಗಾಗಿ ಭಾರತ ಡ್ರಾಗೆ ತೃಪ್ತಿಪಟ್ಟುಕೊಂಡಿದೆ.