ರಹಾನೆ ಔಟಾಗಲು ಕಾರಣ
ನ್ಯೂಜಿಲೆಂಡ್ ವಿರುದ್ಧ ಮೊದಲ ಪಂದ್ಯದ ಮೊದಲ ದಿನದಾಟದ ಮುಕ್ತಾಯದ ಬಳಿಕ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅಜಿಂಕ್ಯಾ ರಹಾನೆ ಪದೇ ಪದೇ ಯಾವ ಕಾರಣಕ್ಕಾಗಿ ಎಡವುತ್ತಿದ್ದಾರೆ ಎಂದು ಲಕ್ಷ್ಮಣ್ ವಿವರಿಸಿದ್ದಾರೆ. ಅಜಿಂಕ್ಯಾ ರಹಾನೆ ಕ್ರೀಸ್ಗೆ ಬಂದ ನಂತರ ಕೈಲ್ ಜ್ಯಾಮಿಸನ್ ರಹಾನೆಗೆ ಶಾರ್ಟ್ ಪಿಚ್ ಎಸೆತಗಳನ್ನು ಹಾಕುತ್ತಿದ್ದರು. ಶಾರ್ಟ್ ಪಿಚ್ ಎಸೆತಗಳಿಗೆ ರಹಾನೆ ಬಳಿ ಇರುವ ಏಕೈಕ ಉತ್ತರವೆಂದರೆ ಪುಲ್ಶಾಟ್ ಎಂಬುದು ನಮಗೆ ತಿಳಿದಿದೆ. ಆದರೆ ಇಂದು ಲೈನ್ನ ಆಚೆಗೆ ಹೋಗುವ ಎಸೆತವನ್ನು ಆಡಿ ಅವರು ವಿಕೆಟ್ ಕಳೆದುಕೊಂಡರು. ದಕ್ಷಿಣ ಆಫ್ರಿಕಾ ಆಸ್ಟ್ರೇಲಿಯಾದಂತಾ ಸ್ಥಳಗಳಲ್ಲಿ ನೀವು ಲೈನ್ನ ಆಚೆಗಿನ ಎಸೆತವನ್ನು ಬಾರಿಸುವುದರಲ್ಲಿ ಅರ್ಥವಿದೆ. ಯಾಕೆಂದರೆ ಅಲ್ಲಿ ಹೆಚ್ಚು ಬೌನ್ಸ್ ಪಡೆಯುತ್ತದೆ. ಆಗ ನೀವು ಸ್ಕ್ವಾರ್ ಮೂಲಕ ಬಾರಿಸಬಹುದು"
ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಶ್ರೇಯಸ್ ಅಯ್ಯರ್: ಐಸಿಸಿಯಿಂದ ಅಭಿನಂದನೆ
ಹೊಡೆತದ ಆಯ್ಕೆಯಲ್ಲಿ ಎಡವಿದ ರಹಾನೆ
"ಆದರೆ ಕಾನ್ಪುರದಲ್ಲಿ ಅಂತಾ ಹೊಡೆತಗಳನ್ನು ನೀವು ಬಾರಿಸಲು ಮುಂದಾಗುವುದು ಸರಿಯಲ್ಲ. ಯಾಕೆಂದರೆ ಅಲ್ಲಿ ಚೆಂಡು ಬೌನ್ಸ್ ಆಗುವುದೇ ಇಲ್ಲ. ನೀವು ನಿಮ್ಮ ಬ್ಯಾಟ್ಅನ್ನು ಸಂಪೂರ್ಣವಾಗಿ ಉಪಯೋಗಿಸಿ ಬಾರಿಸಬೇಕು. ಅಥವಾ ಬ್ಯಾಟ್ಅನ್ನು ಲಂಬವಾಗಿ ಬಾರಿಸಬೇಕಾಗುತ್ತದೆ. ಅಜಿಂಕ್ಯಾ ರಹಾನೆ ಹೀಗೆ ತಪ್ಪಾಗಿ ಹೊಡೆತಗಳನ್ನು ಆಯ್ಕೆ ಮಾಡಿಕೊಳ್ಳುವ ಕಾರಣದಿಂದಾಗಿಯೇ ವಿಕೆಟ್ ಕಳೆದುಕೊಳ್ಳುತ್ತಿದ್ದಾರೆ" ಎಂದಿದ್ದಾರೆ ವಿವಿಎಸ್ ಲಕ್ಷ್ಮಣ್.
ಪದೇ ಪದೇ ವಿಫಲವಾಗುತ್ತಿರುವ ರಹಾನೆ
ಅಜಿಂಕ್ಯಾ ರಹಾನೆ ಕಳೆದ ಹಲವು ಸಮಯಗಳಿಂದ ದೊಡ್ಡ ಮೊತ್ತದ ರನ್ಗಳಿಸಲು ಸತತವಾಗಿ ವಿಫಲವಾಗುತ್ತಿದ್ದಾರೆ. ಹೀಗಾಗಿ ಈ ಸರಣಿಯಲ್ಲಿ ರಹಾನೆಗೆ ತನ್ನ ಬ್ಯಾಟಿಂಗ್ ಪ್ರದರ್ಶನವನ್ನು ಉತ್ತಮ ಪಡಿಸಿಕೊಳ್ಳಲು ಮತ್ತೊಂದು ಅವಕಾಶ ದೊರೆತಂತಾಗಿದೆ. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿಯೂ ರಹಾನೆ ವಿಫಲವಾದ ಕಾರಣ ರಹಾನೆಗೆ ಮುಂದೆ ಟೀಮ್ ಇಂಡಿಯಾದಲ್ಲಿ ಅವಕಾಶ ನೀಡುವುದು ಬೇಡ ಎಂಬ ಅಭಿಪ್ರಾಯಗಳು ವ್ಯಕ್ತವಾಗಿತ್ತು. ಕ್ರಿಕೆಟ್ ಅಭಿಮಾನಿಗಳು ಹಾಗೂ ಪಂಡಿತರು ರಹಾನೆ ಪ್ರದರ್ಶನಕ್ಕೆ ಕಿಡಿಕಾರಿದ್ದರು.
ಮಂಕಾಗಿದೆ ರಹಾನೆ ಬ್ಯಾಟಿಂಗ್
ಇನ್ನು 2016ರಿಂದೀಚೆಗೆ ಅಜಿಂಕ್ಯಾ ರಹಾನೆಯ ಪ್ರದರ್ಶನ ಮಂಕಾಗುತ್ತಾ ಬಂದಿದೆ. ಈ ಅವಧಿಯಲ್ಲಿ ರಹಾನೆ 35 ಇನ್ನಿಂಗ್ಸ್ಗಳನ್ನು ಆಡಿದ್ದು ಕಧೇವಲ 1019 ರನ್ ಮಾತ್ರವೇ ಗಳಿಸಿದ್ದಾರೆ. 30ರಷ್ಟು ಸರಾಸರಿಯನ್ನು ಅವರು ಹೊಂದಿದ್ದಾರೆ. ಇದು ಟೀಮ್ ಇಂಡಿಯಾದ ಒಟ್ಟಾರೆ ಪ್ರದರ್ಶನದ ಮೇಲೆಯೂ ಪರಿಣಾಮ ಬೀರುತ್ತಿದೆ. ಹೀಗಾಗಿಯೇ ಯುವ ಆಟಗಾರರಿಗೆ ಅವಕಾಶ ನೀಡಬೇಕು ಎಂಬ ಅಭಿಪ್ರಾಯಗಳು ಜೋರಾಗುತ್ತಿದೆ.