ಗೊಂದಲ ಇತ್ತು ಎಂದ ಶರ್ಮಾ
ಬೌಲಿಂಗ್ ಗೊಂದಲದ ಬಗ್ಗೆ ಉಪನಾಯಕ ರೋಹಿತ್ ಶರ್ಮಾ ಹೇಳಿಕೆ ನೀಡಿದ್ದಾರೆ. ಯಾರಿಗೆ ಅಂತಿಮ ಓವರನ್ನು ನೀಡಬೇಕು ಎಂಬ ಬಗ್ಗೆ ನಮ್ಮಲ್ಲೂ ಸ್ವಲ್ಪ ಗೊಂದಲ ಇತ್ತು ಎಂಬ ಮಾತನ್ನು ರೋಹಿತ್ ಶರ್ಮಾ ಹೇಳಿದ್ದಾರೆ. ಬೂಮ್ರಾ, ಶಮಿ ಜೊತೆಗೆ ಜಡೇಜಾ ಆಯ್ಕೆಯೂ ನಮ್ಮ ಮುಂದಿತ್ತು ಎಂದಿದ್ದಾರೆ ರೋಹಿತ್ ಶರ್ಮಾ.
ಕೀ ಬೌಲರ್ ಬೂಮ್ರಾ
ಬೂಮ್ರಾ ತಂಡದ ಕೀ ಬೌಲರ್ ಆಗಿದ್ದಾರೆ. ಆದರೆ ಸ್ಥಿರವಾಗಿ ಯಾರ್ಕರ್, ಸ್ಲೋವರ್ ಬಾಲ್ನಂತಾ ವಿಚಾರವನ್ನು ಈ ಸಂದರ್ಭದಲ್ಲಿ ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ ಎಂದಿದ್ದಾರೆ. ಈ ಮೂಲಕ ಶಮಿ ಅವರ ಬದಲಿಗೆ ಬೂಮ್ರಾ ಅವರನ್ನು ಯಾಕೆ ಆಯ್ಕೆ ಮಾಡಲಾಯಿತು ಎಂದು ಮಾಧ್ಯಮಗಳ ಜೊತೆ ಮಾತನಾಡುತ್ತಾ ಹೇಳಿದ್ದಾರೆ.
ದುಬಾರಿಯಾದ ವೇಗಿ:
ಸೂಪರ್ ಓವರ್ ಎಸೆಯಲು ಬಂದ ಬೂಮ್ರಾ ದುಬಾರಿಯಾದರು. ನ್ಯೂಜಿಲ್ಯಾಂಡ್ನ ಕೇನ್ ವಿಲಿಯನ್ಸನ್ ಮತ್ತು ಮಾರ್ಟಿನ್ ಗಪ್ಟಿಲ್ ಸೂಪರ್ ಓವರ್ನಲ್ಲಿ 17 ರನ್ ಗಳಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಬ್ಯಾಟ್ಸ್ಮನ್ಗಳಿಗೆ ಒತ್ತಡ ಬೀಳುವಂತೆ ಮಾಡಿದರು.
ಸೂಪರ್ ಓವರ್ ಶಮಿಗೆ ನೀಡಬೇಕಿತ್ತು ಎಂದ ಅಖ್ತರ್:
ಸೂಪರ್ ಓವರ್ಅನ್ನು ಬೂಮ್ರಾಗೆ ನೀಡಿದ್ದು ಕೊಹ್ಲಿಯ ತಪ್ಪು ನಿರ್ಧಾರ ಎಂಬ ಮಾತನ್ನು ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿದ್ದರು. ಶಮಿ ಆಗ ತಾನೆ ಬೌಲಿಂಗ್ ಮಾಡಿ ವಾರ್ಮ್ ಅಪ್ ಆಗಿದ್ದರು. ಅಂತಾ ಸಂದರ್ಭದಲ್ಲಿ ಶಮಿಗೆ ನೀಡಿದ್ದರೆ ಉತ್ತಮ ನಿರ್ಧಾರವಾಗುತ್ತಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.