ಅಹ್ಮದ್ ಗೊಂದಲದಲ್ಲಿದ್ದರು
ಪಾಕ್ ಸೋಲನ್ನು ವಿಶ್ಲೇಷಿಸಿ ಮಾತನಾಡಿದ ಸಚಿನ್, 'ಪಾಕ್ ನಾಯಕ, ವಿಕೆಟ್ ಕೀಪರ್ ಸರ್ಫರಾಜ್ ಅಹ್ಮದ್ ಗೊಂದಲದಲ್ಲಿದ್ದರು ಎಂದು ನನಗನ್ನಿಸುತ್ತಿದೆ. ಯಾಕೆಂದರೆ ವಹಾಬ್ ರಿಯಾಝ್ ಬೌಲಿಂಗ್ಗೆ ಬಂದಾಗ ಅವರು ಶಾರ್ಟ್ ಮಿಡ್ ವಿಕೆಟ್ನತ್ತ ಲಕ್ಷ್ಯ ಕೊಟ್ಟರು. ಶದಾಬ್ ಖಾನ್ ಬೌಲಿಂಗ್ಗೆ ಬಂದಾಗ ಸ್ಲಿಪ್ನತ್ತ ಗಮನ ಹರಿಸಿದರು' ಎಂದಿದ್ದಾರೆ.
ಇದು ಸರಿಯಾದ ದಾರಿಯಲ್ಲ
'ಇಂಥ ಗೊಂದಲಗಳಿದ್ದಾಗ ಲೆಗ್ ಸ್ಪಿನ್ನರ್ಗಳ ಎಸೆತವನ್ನು ಸಮರ್ಥವಾಗಿ ಬಳಸಿಕೊಳ್ಳೋದು ಸವಾಲಾಗುತ್ತದೆ. ಸರಿಯಾದ ಸ್ಥಾನದಲ್ಲಿ, ಎಸೆತಕ್ಕೆ ಬೇಕಾದಷ್ಟು ದೂರದಲ್ಲಿ ಫೀಲ್ಡಿಂಗ್ ನಿಲ್ಲದಿದ್ದರೆ ಚೆಂಡಿನ ಮೇಲೆ ಹಿಡಿತ ಸಾಧಿಸೋದು ಕಷ್ಟವಾಗುತ್ತದೆ. ದೊಡ್ಡ ಪಂದ್ಯವೊಂದನ್ನು ಗೆದ್ದುಕೊಳ್ಳಲು ಇದು ಹಿನ್ನಡೆಯಾಗುತ್ತದೆ' ಎಂದು ತೆಂಡೂಲ್ಕರ್ ವಿವರಿಸಿದರು.
ಕಲ್ಪನೆಯ ಕೊರತೆಯಿದೆ
'ಪಾಕ್ ಆಟಗಾರರಿಗೆ ಆಟದ ಬಗೆಗಿನ ಕಲ್ಪನೆಯ ಕೊರತೆಯಿದೆ. ಅವರಲ್ಲಿ ಪ್ರಮುಖ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿಯೂ ಕೊರತೆಯಿದೆ. ಚೆಂಡಿನ ಚಲನೆಯತ್ತ ನಾವು ಗಮನ ಹರಿಸದಿದ್ದರೆ ವಿಕೆಟ್ ಗಳಿಸೋದು ಸಾಧ್ಯವಿಲ್ಲ' ಎಂದು ಸಚಿನ್, ಪಾಕಿಸ್ತಾನ ತಂಡದ ಸೋಲಿನ ಗುಟ್ಟು ಬಿಚ್ಚಿಟ್ಟರು.
ಸತತ 7ನೇ ಮುಖಭಂಗ
ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಭಾರತಕ್ಕೆ ಕೆಎಲ್ ರಾಹುಲ್ (57 ರನ್) ಮತ್ತು ರೋಹಿತ್ ಶರ್ಮಾ (140 ರನ್) ಅವರ ಭರ್ಜರಿ ಜೊತೆಯಾಟದ ಆರಂಭ ಲಭಿಸಿತು. ಭಾರತ, ಪಾಕ್ಗೆ 337 ರನ್ ಗುರಿ ನೀಡಿತ್ತು. ಮಳೆಯ ಕಾರಣ ಡಿಎಲ್ಎಸ್ ನಿಯಮದ ಆಧಾರದಲ್ಲಿ 40 ಓವರ್ಗೆ ಪಾಕ್ಗೆ 302 ರನ್ ಗುರಿ ನೀಡಲಾಗಿತ್ತು. ಆದರೆ ಪಾಕ್ 212 ರನ್ ಬಾರಿಸಿ 89 ರನ್ನಿಂದ ಶರಣಾಯಿತು. ಇದು ವಿಶ್ವಕಪ್ನಲ್ಲಿ ಭಾರತ ವಿರುದ್ಧ ಪಾಕ್ ಅನುಭವಿಸುತ್ತಿರುವ ಸತತ 7ನೇ ಮುಖಭಂಗ.