ಸೆಪ್ಟೆಂಬರ್ 4ರಂದು ತಂಡ ಪ್ರಕಟ
ಸೆಪ್ಟೆಂಬರ್ 15ರಂದು ಹಿಮಾಚಲ್ ಪ್ರದೇಶದ ಧರ್ಮಶಾಲಾದಲ್ಲಿ ಆರಂಭಗೊಳ್ಳಲಿರುವ ಟಿ20 ಸರಣಿಗಾಗಿ ಸೆಪ್ಟೆಂಬರ್ 4ರಂದು ಬಿಸಿಸಿಐ ತಂಡ ಪ್ರಕಟಿಸುವುದನ್ನು ನಿರೀಕ್ಷಿಸಲಾಗಿದೆ. ಟಿ20 ಸರಣಿಯಲ್ಲಿ ಧೋನಿ ಆಯ್ಕೆಗೊಳ್ಳುವ ಸಾಧ್ಯತೆ ಕಡಿಮೆಯಿದೆ. ಧೋನಿ ಬದಲು ಪಂತ್ ಆಯ್ಕೆಯಾಗುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ.
ಬೆಂಗಳೂರಿನಲ್ಲೂ ಪಂದ್ಯ
ಟಿ20 ಸರಣಿಯ ಆರಂಭಿಕ ಪಂದ್ಯ ಧರ್ಮಶಾಲಾದಲ್ಲಿ ನಡೆದರೆ, 2ನೇ ಪಂದ್ಯ ಸೆಪ್ಟೆಂಬರ್ 18ರಂದು ಪಂಜಾಬ್ನ ಮೊಹಾಲಿ ಸ್ಟೇಡಿಯಂನಲ್ಲಿ, 3ನೇ ಪಂದ್ಯ ಸೆಪ್ಟೆಂಬರ್ 22ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿವೆ. ವೆಸ್ಟ್ ಇಂಡೀಸ್ ಪ್ರವಾಸ ಸರಣಿಯಲ್ಲಿ ಧೋನಿ ಜಾಗವನ್ನು ಪಂತ್ ಆವರಿಸಿರುವುದನ್ನು ಗಮನಿಸಿದರೆ, ಭವಿಷ್ಯದ ದಿನಗಳಲ್ಲಿ ಭಾರತದ ಕೀಪರ್ ಆಗಿ ಪಂತ್ ನಿಲೆಯೂರುವುದರಲ್ಲಿದ್ದಾರೆ ಎಂಬಂತಿದೆ.
ವರ್ಲ್ಡ್ ಟಿ20 ಟೂರ್ನಿ
'ಭಾರತ ತಂಡ ವಿಶ್ವ ಟಿ20 ಟೂರ್ನಿಯ ಮೊದಲ ಪಂದ್ಯ ಆಡುವುದಕ್ಕೂ ಮುನ್ನ ಒಟ್ಟು 22 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಲಿದೆ. ಹೀಗಾಗಿ ವರ್ಲ್ಡ್ ಟಿ20ಯತ್ತ ಮುಂದಡಿಯಿಡಲು ಆಯ್ಕೆ ಸಮಿತಿ ಬಯಸಿದೆ,' ಎಂದು ಬಿಸಿಸಿಐ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 2020ರ ಅಕ್ಟೋಬರ್ನಲ್ಲಿ ಆಸ್ಟ್ರೇಲಿಯಾದಲ್ಲಿ ವರ್ಲ್ಡ್ ಟಿ20 ಟೂರ್ನಿ ನಡೆಯಲಿದೆ.
ಪಂತ್ಗೆ ಹೆಚ್ಚು ಅವಕಾಶ
'ನಿವೃತ್ತಿ ಅವರವರ ವೈಯಕ್ತಿಕ ನಿರ್ಧಾರ. ಆಯ್ಕೆ ಸಮಿತಿ ಅಥವಾ ಇನ್ಯಾರಿಗೂ ಆ ವಿಚಾರದಲ್ಲಿ ಅಧಿಕಾರವಿಲ್ಲ. ಆದರೆ ಆಯ್ಕೆ ಸಮಿತಿ 2020ರ ವರ್ಲ್ಡ್ ಟಿ20ಯನ್ನು ಆಯೋಚನೆಯಲ್ಲಿಟ್ಟುಕೊಂಡು ಅದಕ್ಕೆ ತಕ್ಕ ಮಾರ್ಗಸೂಚಿಯನ್ನು ಸಿದ್ಧಪಡಿಸುತ್ತಿರುವುದಂತೂ ನಿಜ. ಹೀಗಾಗಿ ರಿಷಬ್ ಪಂತ್ಗೆ ಹೆಚ್ಚ ಅವಕಾಶಗಳನ್ನು ನೀಡಲು ಆಯ್ಕೆ ಸಮಿತಿ ಬಯಸಿದೆ,' ಎಂದು ಬಿಸಿಸಿಐ ಅಧಿಕಾರಿಗಳು ವಿವರಿಸಿದ್ದಾರೆ.